
DK ಮಹಾ ಹೆಜ್ಜೆ: ಭಯವನ್ನೇ ಬೆದರಿಸೋ ಕನಕಪುರ ಬಂಡೆ! ಗುರಿ ತಪ್ಪದ ಅತಿರಥ, ಶಪಥ ಗೆಲ್ಲೋ ಮಹಾರಥ!
ರಾಜಕೀಯ ಚದುರಂಗದ ಗ್ರ್ಯಾಂಡ್ ಮಾಸ್ಟರ್ ಎಂದೇ ಖ್ಯಾತರಾದ ಡಿ.ಕೆ. ಶಿವಕುಮಾರ್, ತಮ್ಮ ಹಠವಾದಿ ಹೋರಾಟದಿಂದ ಗುರಿ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಟ್ರಬಲ್ಶೂಟರ್ ಆಗಿ, ಕನಕಪುರದ ಬಂಡೆಯಾಗಿ ಗುರುತಿಸಿಕೊಂಡಿದ್ದ ಅವರು, ಇದೀಗ ಕರುನಾಡ ಗದ್ದುಗೆ ಏರಲು ಸಜ್ಜಾಗಿದ್ದಾರೆ.
ಆತ ಅಂತಿಂಥಾ ರಾಜಕಾರಣಿ ಅಲ್ಲ..ಗುರಿ ಇಟ್ಟರೆ ಅದನ್ನ ಮುಟ್ಟದೆ ಸುಮ್ಮನಾಗಲ್ಲ..ಶಪಥ ತೊಟ್ಟರೆ,ಈಡೇರಿ ಸದೆ ಬಿಡದಲ್ಲ.. ಯುದ್ಧಕ್ಕೆ ನಿಂತರೆ ಗೆಲ್ಲೋತನಕ ಹೋರಾಡೋ ಛಲಗಾರ..ಅಂದು ಕೊಂಡಿದ್ದನ್ನ ಸಾಧಿಸಿಯೇ ಸಾಧಿಸೋ ಹಠವಾದಿ..ಕನಕಪುರದ ಲೀಡರ್, ಈಗ ರಾಜ್ಯವಾಳೋದೊರೆ ಯಾಗೋಕೆ ಸಜ್ಜಾಗಿದ್ದಾರೆ.. ಅದ್ಯಾರು ಅಂತಗೊತ್ತಾಯ್ತಲ್ಲಾ, ಆ ಹಠವಾದಿಯ ರಣ ಬೇಟೆಯ ಕತೆ, ಇಲ್ಲಿದೆ ನೋಡಿ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ