
Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಸೋಲಿನ ಆಘಾತದಿಂದ ಟಿಎಂಸಿಯಲ್ಲಿ ಭಾರಿ ಬಂಡಾಯವೆದ್ದಿದೆ. 60 ಶಾಸಕರು ಹಾಗೂ 20 ಸಂಸದರು ಪಕ್ಷ ತೊರೆಯುವ ಹಂತದಲ್ಲಿದ್ದು, ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೆ ದೊಡ್ಡ ಸವಾಲು ಎದುರಾಗಿದೆ.
ಕೋಲ್ಕತ್ತಾ (ಜೂ.12): ಪಶ್ಚಿಮ ಬಂಗಾಳದಲ್ಲಿ ದಶಕಗಳ ಕಾಲ ಸಾಮ್ರಾಜ್ಞಿಯಂತೆ ಮೆರೆದಿದ್ದ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೋಟೆ ಒಂದೇ ಒಂದು ಚುನಾವಣಾ ಸೋಲಿನ ಆಘಾತಕ್ಕೆ ಧೂಳೀಪಟವಾಗಿದೆ. ಪಕ್ಷದೊಳಗೆ ಭುಗಿಲೆದ್ದಿರುವ ತೀವ್ರ ಅಸಮಾಧಾನದ ಜ್ವಾಲಾಮುಖಿಯಿಂದಾಗಿ ಬರೋಬ್ಬರಿ 60 ಶಾಸಕರು ಹಾಗೂ 20 ಸಂಸದರು ಬಂಡಾಯದ ಬಾವುಟ ಹಾರಿಸಿದ್ದು, ಟಿಎಂಸಿ ಪಕ್ಷ ಎರಡು ಹೋಳಾಗುವ ಹಂತಕ್ಕೆ ಬಂದು ನಿಂತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳೆದ ಎರಡು ವಾರಗಳಲ್ಲಿ ಆರು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದು, ರೆಬೆಲ್ ನಾಯಕರು ತಾವೇ 'ಅಧಿಕೃತ ಟಿಎಂಸಿ' ಎಂದು ಹಕ್ಕು ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ಮೇಲಿನ ಹಿಡಿತ ಸಂಪೂರ್ಣ ಕೈತಪ್ಪಿಹೋಗಿ ಏಕಾಂಗಿಯಾಗಿರುವ ಮಮತಾ ಬ್ಯಾನರ್ಜಿ, ಬಿಕ್ಕಟ್ಟು ಶಮನಗೊಳಿಸಲು ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದ್ದಾರಾದರೂ ರೆಬೆಲ್ ಪಡೆ ಅದಕ್ಕೂ ಅಡ್ಡಗಾಲು ಹಾಕುತ್ತಿದೆ. ಮಹಾರಾಷ್ಟ್ರದ ಮಾದರಿಯಲ್ಲೇ ಬಂಗಾಳದಲ್ಲೂ ಪಕ್ಷದ ಅಸ್ತಿತ್ವಕ್ಕೆ ಮಹಾ ಆಪತ್ತು ಎದುರಾಗಿದೆ.