77ನೇ ಗಣರಾಜ್ಯೋತ್ಸವದಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ತವ್ಯ ಪಥದಲ್ಲಿ ಮೂರನೇ ಸಾಲಿನ ಆಸನ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕನಿಗೆ ಶಿಷ್ಟಾಚಾರದ ಪ್ರಕಾರ ಗೌರವ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
- Home
- News
- India News
- India News Live: 'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ
India News Live: 'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ

ನವದೆಹಲಿ (ಜ.26): ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ. ಈ ವರ್ಷ ವಿದೇಶಿ ಅತಿಥಿಯಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಭಾಗಿಯಾಗಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 26th January:'ಮೊದಲ ಸಾಲಿನಲ್ಲಿ ಯಾಕೆ ಕೂರಿಸಿಲ್ಲ?' ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಹುಲ್ ಗಾಂಧಿಗೆ 3ನೇ ಸಾಲಿನ ಆಸನ, ಕಾಂಗ್ರೆಸ್ ಕಿಡಿ
India News Live 26th January:ಮದುವೆ ಭರವಸೆಗೆ ತನು, ಮನ, ದೇಹ ನೀಡಿದ ಮಹಿಳೆಗೆ ಮೋಸ, ಧುರಂಧರ್ ನಟ ಅರೆಸ್ಟ್
ಮದುವೆ ಭರವಸೆಗೆ ತನು, ಮನ, ದೇಹ ನೀಡಿದ ಮಹಿಳೆಗೆ ಮೋಸ, , 10 ವರ್ಷ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಇದೀಗ ನಟ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
India News Live 26th January:ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು
ಉತ್ತರ ಪ್ರದೇಶದ ರಾಮ್ಪುರದಲ್ಲಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಿವಾಹಿತೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಚ್ಚರಿಯ ಘಟನೆ ನಡೆದಿದೆ. ಮದುವೆ ರಾತ್ರಿಯೇ ವಧು ಮಗುವಿಗೆ ಜನ್ಮ ನೀಡಿದ್ದು, ವರ ಸಿಹಿ ಹಂಚಿ ಸಂಭ್ರಮಿಸಿದ್ದಾನೆ.
India News Live 26th January:ಗಣರಾಜ್ಯೋತ್ಸವಕ್ಕಾಗಿ ಕುರ್ಚಿಗಳ ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ಕ್ಲಾಸ್ ಬಾಲಕಿ ಸಾವು
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಿದ್ಧತೆ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ತರಗತಿ ವಿದ್ಯಾರ್ಥಿನಿ ಸಂಗೀತಾ ಸಾವನ್ನಪ್ಪಿದ್ದಾಳೆ. ಈ ದುರಂತ ಘಟನೆಗೆ ಶಾಲಾ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಕೇಳಿ ಬಂದಿದೆ.
India News Live 26th January:ಪತಿಯ ದೀರ್ಘಾಯಸ್ಸಿಗೆ ನವವಧು ಬೆಂಕಿ ಇಟ್ಕೊಬೇಕು! ವಿಚಿತ್ರ ಸಂಪ್ರದಾಯದ ಭಯಾನಕ ವಿಡಿಯೋ ವೈರಲ್
ಮಿಥಿಲೆಯಲ್ಲಿ ಆಚರಿಸಲಾಗುವ ತೀಮಿ ದಾಗ್ನೆ ಎಂಬ ಸಂಪ್ರದಾಯದಲ್ಲಿ, ಪತಿಯ ದೀರ್ಘಾಯುಷ್ಯಕ್ಕಾಗಿ ನವವಧುವಿನ ಮೊಣಕಾಲಿಗೆ ಉರಿಯುವ ಬತ್ತಿಯಿಂದ ಸುಡಲಾಗುತ್ತದೆ. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಈ ಹೆಣ್ಣಿನ ಶೋಷಣೆಯ ಕರಾಳ ಮುಖವನ್ನು ಈ ಆಚರಣೆ ಅನಾವರಣಗೊಳಿಸುತ್ತದೆ.
India News Live 26th January:ಪತ್ನಿ ಚಿಕಿತ್ಸೆಗಾಗಿ ಸೈಕಲ್ನ್ನೇ ಹಾಸಿಗೆ ಮಾಡಿ 300 ಕಿಮೀ ಸೈಕಲ್ ತುಳಿದ 75ರ ವೃದ್ಧ
ಒಡಿಶಾದ 75 ವರ್ಷದ ವೃದ್ಧರೊಬ್ಬರು, ತಮ್ಮ ಪಾರ್ಶ್ವವಾಯು ಪೀಡಿತ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ, ತಮ್ಮ ಮೂರು ಗಾಲಿಯ ಸೈಕಲ್ನಲ್ಲಿ 300 ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾರೆ. ಸಂಬಲ್ಪುರದಿಂದ ಕಟಕ್ಗೆ 9 ದಿನಗಳ ಕಾಲ ಸೈಕಲ್ ತುಳಿದು, ಚಿಕಿತ್ಸೆ ಕೊಡಿಸಿದ್ದಾರೆ.
India News Live 26th January:ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಭಾರತದಲ್ಲೇ ಹೆಚ್ಚು
ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಜನವರಿ 27 ರಿಂದ ಅಮೇಜಾನ್ ಉದ್ಯೋಗ ಕಡಿತ ಆರಂಭಗೊಳ್ಳುತ್ತಿದೆ. ಈ ಬಾರಿ ಭಾರತದಲ್ಲೇ ಅತೀ ಹೆಚ್ಚು ಉದ್ಯೋಗ ಕಡಿತಗಳು ನಡೆಯಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
India News Live 26th January:ಪತ್ನಿ ಜೊತೆ ಮಲಗೇ ಇಲ್ಲ ಮಗು ಹೇಗೆ? ಯೋಧನ ಅರ್ಜಿಯಂತೆ DNA ಟೆಸ್ಟ್ಗೆ ಹೈಕೋರ್ಟ್ ಆದೇಶ
ಪತ್ನಿ ಜೊತೆ ಮಲಗೇ ಇಲ್ಲ ಮಗು ಹೇಗೆ? ಯೋಧನ ಅರ್ಜಿಯಂತೆ DNA ಟೆಸ್ಟ್ಗೆ ಹೈಕೋರ್ಟ್ ಆದೇಶ ನೀಡಿದೆ. ದೈಹಿಕ ಸಂಪರ್ಕ ನಡೆಸದೇ ಗರ್ಭಿಣಿ ಹೇಗೆ? ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ವಿಚ್ಚೇದನಕ್ಕೂ ಅರ್ಜಿ ಸಲ್ಲಿಕೆಯಾಗಿದೆ.
India News Live 26th January:ಜೊತೆಗೆ ಮಲಗೋಕೆ ಗಂಡನ ಬಳಿಯೂ ಹಣ ಕೇಳಿದ ಹೆಂಡತಿ - ಕಾಸು ಕೊಟ್ಟು ಕೊಟ್ಟು ಸುಸ್ತಾಗಿ ಡಿವೋರ್ಸ್ಗೆ ಗಂಡನ ಅರ್ಜಿ
ಚೀನಾದಲ್ಲಿ ಪತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಪತ್ನಿಯೊಬ್ಬಳು ಹಣಕ್ಕೆ ಬೇಡಿಕೆಯಿಟ್ಟ ವಿಚಿತ್ರ ಘಟನೆ ನಡೆದಿದೆ. ಮೊದಲ ರಾತ್ರಿಯಿಂದಲೇ ಈ ಬೇಡಿಕೆ ಇಟ್ಟಿದ್ದರಿಂದ ಬೇಸತ್ತ ಪತಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
India News Live 26th January:ಒಂದೇ ಸಮಯ ಇಬ್ಬರ ಜೊತೆ ಮಂಚದಲ್ಲಿ ಪತ್ನಿ, ಮದ್ವೆಯಾದ 4 ತಿಂಗಳಿಗೆ ಬಯಲಾಯ್ತು ರಂಗಿನಾಟ
ಒಂದೇ ಸಮಯ ಇಬ್ಬರ ಜೊತೆ ಮಂಚದಲ್ಲಿ ಪತ್ನಿ, ಎಂಜಿನೀಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಪತ್ನಿ ಹಾಸಿಗೆ ಹಂಚಿಕೊಂಡಿದ್ದು ನೋಡಿದ ಗಂಡ ಕೆರಳಿದ್ದಾನೆ. ಆಕ್ರೋಶಕ್ಕೆ ಕತೆ ಮುಗಿದಿದೆ. ಅಷ್ಟಕ್ಕೂ ಮಂಚದಲ್ಲಿ ನಡೆದಿದ್ದೇನು?
India News Live 26th January:ಮಕ್ಕಳು ತಮ್ಮಿಷ್ಟದಂತ ಮದುವೆಯಾದರೆ ಇಡೀ ಕುಟುಂಬಕ್ಕೆ ಬಹಿಷ್ಕಾರದ ಶಿಕ್ಷೆ - ನಿರ್ಧಾರ ಕೈಗೊಂಡ ಗ್ರಾಮ
ಪ್ರೀತಿಸಿ ಅಥವಾ ತಮ್ಮಿಷ್ಟದ ಪ್ರಕಾರ ಮದುವೆಯಾಗುವ ಜೋಡಿಗಳಿಗೆ ಮಾತ್ರವಲ್ಲದೇ ಅವರ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ನಿರ್ಧಾರ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India News Live 26th January:ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಾ? ತಜ್ಞರು ಕೊಟ್ಟ ಸೂಚನೆ ಏನು?
ಕೆಲವೇ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಆಗುತ್ತಾ? ತಜ್ಞರು ಕೊಟ್ಟ ಸೂಚನೆ ಏನು? ಪ್ರತಿ ದಿನ ದಾಖಲೆಯ ಏರಿಕೆ ಕಾಣುತ್ತಿರುವ ಚಿನ್ನದ ಆತಂಕ ಕೆಲವೇ ದಿನಗಳಲ್ಲಿ ದೂರವಾಗುತ್ತಾ? ಖರೀದಿಸಲು ಬಯಸುವವರು ಸ್ವಲ್ಪ ಕಾಯಬೇಕಾ?
India News Live 26th January:ಮೂರೇ ಗಂಟೆಯ ಭಾರತ ಭೇಟಿಗೆ ಬಂದಿದ್ದ ಯುಎಇ ಅಧ್ಯಕ್ಷ, ಇದರ ಬೆನ್ನಲ್ಲೇ ಪಾಕ್ ಏರ್ಪೋರ್ಟ್ ಡೀಲ್ ಕ್ಯಾನ್ಸಲ್!
UAE Cancels Pakistan Airport Deal After President’s Quick India Trip ಯುಎಇ ಅಧ್ಯಕ್ಷ 900 ಭಾರತೀಯ ಕೈದಿಗಳ ಬಿಡುಗಡೆಗೆ ಅನುಮೋದನೆ ನೀಡಿದ್ದಾರೆ, ಈ ಕ್ರಮವನ್ನು ನವದೆಹಲಿಯ ಕಡೆಗೆ ಸೌಹಾರ್ದತೆಯ ಮಹತ್ವದ ಸೂಚಕವೆಂದು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆ.
India News Live 26th January:ಗಂಡನ ಕಾರಿನಲ್ಲಿ ಗೋಮಾಂಸ ತುಂಬಿಸಿ ಭಜರಂಗದಳಕ್ಕೆ ಮಾಹಿತಿ ನೀಡಿದ ಪತ್ನಿ
ಗಂಡನಿಂದ ವಿಚ್ಛೇದನ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಪತಿಯ ಕಾರಿನಲ್ಲಿ ಗೋಮಾಂಸವಿಟ್ಟು ಆತನನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದಾಳೆ. ಈ ಹಿಂದೆ ಇದೇ ರೀತಿ ಯತ್ನಿಸಿ ಆತನನ್ನು ಒಮ್ಮೆ ಜೈಲಿಗಟ್ಟಿದ್ದ ಆಕೆ ಆತ ವಾಪಸ್ ಬರುತ್ತಿದ್ದಂತೆ ಮತ್ತೊಂದು ಪ್ಲಾನ್ ಮಾಡಿದ್ದಾಳೆ.
India News Live 26th January:ಸಿನಿಮಾ ಹಾಲ್ನಲ್ಲಿ ಇದೇನಿದು? ಒಂದೇ ಸಲಕ್ಕೆ ಇಬ್ಬರ ಜೊತೆ ರೊಮಾನ್ಸ್- ಆತಂಕಕಾರಿ ವಿಡಿಯೋ ವೈರಲ್
India News Live 26th January:2021ರಲ್ಲಿ ರಾಮ ಮಂದಿರ, ಈ ಬಾರಿ ಕರ್ತವ್ಯಪಥದಲ್ಲಿ ಗಮನಸೆಳೆದ ಗಣೇಶೋತ್ಸವ!
Republic Day Parade 2026: 77ನೇ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆದ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಸ್ತಬ್ಧಚಿತ್ರವು ಗಣೇಶೋತ್ಸವವನ್ನು ಪ್ರದರ್ಶಿಸಿತು. ಗಣೇಶೋತ್ಸವದ ಸಾಂಸ್ಕೃತಿಕ ವೈಭವ, ಆರ್ಥಿಕ ವಹಿವಾಟು ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ನೀಡುವ ಕೊಡುಗೆಯನ್ನು ಬಿಂಬಿಸಿತು.
India News Live 26th January:ಡಿಜಿಟಲ್ ಯುಗದ ಮಹಿಮೆ! 50 ಘಟಾನುಘಟಿ ಟಿವಿ ಚಾನೆಲ್ಗಳು ಬಂದ್- ಲೈಸೆನ್ಸ್ ವಾಪಸ್
ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ ಟಿವಿ ಚಾನೆಲ್ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ವೀಕ್ಷಕರ ಸಂಖ್ಯೆ ಕುಸಿತ ಮತ್ತು ಜಾಹೀರಾತು ಆದಾಯ ಡಿಜಿಟಲ್ಗೆ ವರ್ಗಾವಣೆ ಆಗುತ್ತಿರುವ ಕಾರಣ, 50 ಚಾನೆಲ್ಗಳು ತಮ್ಮ ಪರವಾನಗಿಯನ್ನು ವಾಪಸ್ ನೀಡಿ, ಬಾಗಿಲು ಮುಚ್ಚಲು ಮುಂದಾಗಿವೆ. ಇದರ ಡಿಟೇಲ್ಸ್ ಇಲ್ಲಿದೆ.
India News Live 26th January:Republic Day - ಕರ್ತವ್ಯಪಥದಲ್ಲಿ ಆಪರೇಷನ್ ಸಿಂದೂರ್ ಫ್ಲೈಟ್ ಫಾರ್ಮೇಷನ್ ಜಗತ್ತಿಗೆ ತಿಳಿಸಿದ ಭಾರತ!
77ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ನಡೆದ ಭವ್ಯ ಪರೇಡ್ನಲ್ಲಿ, ಭಾರತವು 'ಆಪರೇಷನ್ ಸಿಂಧೂರ್'ನ ರಹಸ್ಯವನ್ನು ಜಗತ್ತಿಗೆ ಅನಾವರಣಗೊಳಿಸಿತು. ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಬಳಸಲಾಗಿದ್ದ ರಫೇಲ್, ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧವಿಮಾನಗಳ ಮಿಶ್ರ ಫಾರ್ಮೇಷನ್ ಪ್ರದರ್ಶಿಸಿತು.
India News Live 26th January:85 ಶತಕೋಟಿ ಡಾಲರ್ ಮೌಲ್ಯದ 1 ಸಾವಿರ ಟನ್ ಚಿನ್ನದ ನಿಧಿ ಪತ್ತೆ! ಭೂಮಿಯೊಳಗೆ ಸಿಕ್ಕ ಅನ್ಯಗ್ರಹದ ಲೋಹಗಳು
India News Live 26th January:ಅಶೋಕ ಚಕ್ರ ದೇಶದ ಜನರು ಒಟ್ಟಾಗಿ ನನಗೆ ನೀಡಿರುವ ಆಶೀರ್ವಾದ - ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಭಾರತದ ಎರಡನೇ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು 77ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಂದ ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಿದರು. ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ಬಣ್ಣಿಸಿದ ಅವರು, ಭವಿಷ್ಯದ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.