ಶುಭಮನ್ ಗಿಲ್ ಅವರ ಭರ್ಜರಿ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ತಂಡವು ಆರ್ಸಿಬಿ ವಿರುದ್ಧ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
- Home
- News
- India News
- India News Live Updates: IPL Qualifier 2 - ರಾಜಸ್ಥಾನ ವಿರುದ್ಧ ಭರ್ಜರಿ ಜಯ, RCB ವಿರುದ್ಧ ಫೈನಲ್ಗೆ ಅರ್ಹತೆ ಪಡೆದ ಗುಜರಾತ್ ಟೈಟಾನ್ಸ್
India News Live Updates: IPL Qualifier 2 - ರಾಜಸ್ಥಾನ ವಿರುದ್ಧ ಭರ್ಜರಿ ಜಯ, RCB ವಿರುದ್ಧ ಫೈನಲ್ಗೆ ಅರ್ಹತೆ ಪಡೆದ ಗುಜರಾತ್ ಟೈಟಾನ್ಸ್

ಇತ್ತೀಚಿನ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭಾರೀ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಸರ್ಕಾರ ಜೂ.21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯನ್ನು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಭಾರತೀಯ ಸೇನೆಯ ನೆರವು ಪಡೆಯುವ ಬಗ್ಗೆ ಚಿಂತನೆ ನಡೆಸಿದೆ.ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ದೇಶಾದ್ಯಂತ ಸಾಗಿಸಲು ಸಾಧ್ಯವೇ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
₹10 ಲಕ್ಷ ಕೋಟಿ ಒಡೆಯ ಅಂಬಾನಿ ಸತತ 6ನೇ ವರ್ಷ ವೇತನ ಪಡೀಲಿಲ್ಲ
ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ (69) ಸತತ 6ನೇ ವರ್ಷವೂ ಕಂಪನಿಯಿಂದ ಯಾವುದೇ ವೇತನ ಪಡೆದುಕೊಂಡಿಲ್ಲ. ಕೋವಿಡ್ಗೂ ಮುನ್ನ ಮುಕೇಶ್ ತಮ್ಮ ವಾರ್ಷಿಕ ವೇತನವನ್ನು 15 ಕೋಟಿ ರು. ದಾಟದಂತೆ ಮಿತಿ ಹೇರಿದ್ದರು. ಆದರೆ ಕೋವಿಡ್ ಸಮಯದಲ್ಲಿ ಇತರರಿಗೆ ಮಾದರಿಯಾಗು ಹಿನ್ನೆಲೆಯಲ್ಲಿ ಅವರು ವೇತನ ಪಡೆಯುವುದನ್ನು ಕೈಬಿಟ್ಟಿದ್ದು, ಈ ವರ್ಷವೂ ಅದನ್ನು ಮುಂದುವರೆಸಿದ್ದಾರೆ. ಕಂಪನಿಯ ವಾರ್ಷಿಕ ವರದಿಯಲ್ಲಿ ಈ ಅಂಶಗಳಿವೆ. ರಿಲಯನ್ಸ್ನಲ್ಲಿ ಮುಕೇಶ್ ಸ್ವತಃ 1.61 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಇದರ ಹೊರತಾಗಿ ಪ್ರವರ್ತಕರ ಕಂಪನಿ ರಿಲಯನ್ಸ್ನಲ್ಲಿ 664.5 ಕೋಟಿ ಅಥವಾ ಶೇ.50.07ರಷ್ಟು ಷೇರು ಪಾಲು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಮುಕೇಶ್ ಅಂಬಾನಿ ಒಟ್ಟು 10 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ.
India News Live Updates IPL Qualifier 2 - ರಾಜಸ್ಥಾನ ವಿರುದ್ಧ ಭರ್ಜರಿ ಜಯ, RCB ವಿರುದ್ಧ ಫೈನಲ್ಗೆ ಅರ್ಹತೆ ಪಡೆದ ಗುಜರಾತ್ ಟೈಟಾನ್ಸ್
India News Live Updates ದೆಹಲಿಯಲ್ಲಿ ಆಟೋರಾಜನಾದ ರಾಹುಲ್ ಗಾಂಧಿ, ಆಟೋ ಚಾಲಕರ ಜೊತೆ ಊಟ ಸವಿದ ವಿಪಕ್ಷ ನಾಯಕ
India News Live Updates ಮತ್ತೊಂದು ಶತಕ ಮಿಸ್ ಮಾಡಿಕೊಂಡ ವೈಭವ್ ಸೂರ್ಯವಂಶಿ, ಗುಜರಾತ್ಗೆ 215 ರನ್ ಟಾರ್ಗೆಟ್
ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 96 ರನ್ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಶತಕದಿಂದ ವಂಚಿತರಾದರು. ಈ ಮೂಲಕ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಮೂರನೇ ಬಾರಿಗೆ 90ರ ಗಡಿಯಲ್ಲಿ ಔಟಾದರು.
India News Live Updates 10 ವರ್ಷದ ಉದ್ಯೋಗ ಪೂರೈಸಿಲ್ವೇ? ಚಿಂತೆ ಬೇಡ - ಈ ಸರಳ ವಿಧಾನದ ಮೂಲಕ EPS ಪಿಂಚಣಿಯ ಅಷ್ಟೂ ಹಣ ವಾಪಾಸ್ ಪಡೆಯಿರಿ
India News Live Updates ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡು ಬಾರಿ ಟಾಸ್ ಹಾಕಿದ್ದೇಕೆ? ಗುಜರಾತ್ಗೆ ಆಯಿತಾ ಅನ್ಯಾಯಾ?
ಕ್ವಾಲಿಫೈಯರ್ 2 ಪಂದ್ಯದಲ್ಲಿ ಒಂದಲ್ಲ ಎರಡು ಬಾರಿ ಟಾಸ್ ಹಾಕಲಾಗಿದೆ. ಮೊದಲ ಬಾರಿಗೆ ಗುಜರಾತ್ ಪರ ಟಾಸ್ ಬಿದ್ದರೆ, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿತ್ತು. ಅಷ್ಟಕ್ಕೂ 2 ಬಾರಿ ಟಾಸ್ ಹಾಕಿ ಟೈಟಾನ್ಸ್ಗೆ ಅನ್ಯಾಯ ಮಾಡಿದ್ರಾ?
India News Live Updates ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ಹಠಾತ್ ಗುಡ್ಬೈ - ಕೋಚ್ ಜೊತೆಗಿನ ಜಗಳ, ಇಂಟರ್ನಲ್ ಪಾಲಿಟಿಕ್ಸ್ ಬಿಚ್ಚಿಟ್ಟ ಇನ್ಸೈಡ್ ಸ್ಟೋರಿ!
ಐಪಿಎಲ್ 2026ರಲ್ಲಿ ಲಕ್ನೋ ತಂಡದ ಹೀನಾಯ ಪ್ರದರ್ಶನದ ನಂತರ ರಿಷಭ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯ, ನಿರ್ಧಾರಗಳಲ್ಲಿ ಸ್ವಾತಂತ್ರ್ಯದ ಕೊರತೆ ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
India News Live Updates ಜಾಹೀರಾತು ಶೂಟಿಂಗ್ಗೆ ಹೋಗಿದ್ದ ಖ್ಯಾತ ಮಾಡೆಲ್ ದುರಂತ ಸಾವು - ಆಯ ತಪ್ಪಿ ಕ್ವಾರಿಯಲ್ಲಿ ಬಿದ್ದು ಘಟನೆ
India News Live Updates ಡೇಟಿಂಗ್ ಆ್ಯಪ್ನಲ್ಲಿ ಸುಂದರಿಯ ನೋಡುತ್ತಲೇ 1.66 ಕೋಟಿ ರೂ. ಕಳಕೊಂಡ ಬೆಂಗಳೂರು ಟೆಕ್ಕಿ
ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.
India News Live Updates ಸೂರ್ಯವಂಶಿಯನ್ನು 14ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್, ಪ್ರವೀಣ್ ತಾಂಬೆಯನ್ನು 41ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್..!
India News Live Updates ಟಾಕ್ಸಿಕ್, ರಾಮಾಯಣ,ಪೆದ್ದಿ ಯಾವುದು ಅಲ್ಲ, IMDb ರೇಟಿಂಗ್ ನೀಡಿದ 2026ರ ಬಹುನಿರೀಕ್ಷಿತ ಚಿತ್ರ ಇದು
2026ರಲ್ಲಿ ಧುರಂಧರ್ 2 ಮೂಲಕ ಬಾಲಿವುಡ್ ಸಿನಿಮಾದಲ್ಲಿ ಹಂಗಾಮ ಸೃಷ್ಟಿಯಾಗಿದೆ. ಇದೀಗ 2026ರಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಆದರೆ IMDb ರೇಟಿಂಗ್ ಪ್ರಕಾರ 2026ರ ಬಹುನಿರೀಕ್ಷಿತ ಚಿತ್ರದಲ್ಲಿ ಯಾವ ಸೂಪರ್ ಸ್ಟಾರ್ಗಳು ಇಲ್ಲ.
India News Live Updates ಅದೊಂದು ಕಾರಣಕ್ಕಾಗಿ ಐಪಿಎಲ್ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾಗಿದ್ದ ಹಾರ್ದಿಕ್ ಪಾಂಡ್ಯ..!
India News Live Updates ಜೂನ್ 21ರ ನೀಟ್ ಮರುಪರೀಕ್ಷೆ ಸೋರಿಕೆ ತಡೆಯಲು ಭಾರತೀಯ ಸೇನೆಯ ನೆರವು, ಕೇಂದ್ರದ ಮಾಸ್ಟರ್ ಪ್ಲಾನ್
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿವಾದದ ನಂತರ, ಕೇಂದ್ರ ಸರ್ಕಾರವು ಜೂನ್ 21ರ ಮರುಪರೀಕ್ಷೆಯನ್ನು ಸೋರಿಕೆ-ನಿರೋಧಕವಾಗಿ ನಡೆಸಲು ಐತಿಹಾಸಿಕ ಕ್ರಮ ಕೈಗೊಂಡಿದೆ. ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಭಾರತೀಯ ವಾಯುಪಡೆಯ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ
India News Live Updates ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ!
ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್, ಟ್ರಾವೆಲ್ಪೋರ್ಟ್ & ಎಐ ಸಂಶೋಧನಾ ಸಂಸ್ಥೆ ಆಂಥ್ರೋಪಿಕ್, ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಕೈಜೋಡಿಸಿವೆ. ಆಂಥ್ರೋಪಿಕ್ನ 'ಕ್ಲೌಡ್' ಎಐ ಮಾಡೆಲ್ ಬಳಸಿ, ಟ್ರಾವೆಲ್ಪೋರ್ಟ್ನ ಬುಕ್ಕಿಂಗ್ ತಂತ್ರಜ್ಞಾನ ಆಧುನೀಕರಿಸಲಾಗುತ್ತಿದೆ.
India News Live Updates IPL ಕ್ವಾಲಿಫೈಯರ್-2 - ರಾಜಸ್ಥಾನ ಎದುರಿನ ಹೈವೋಲ್ಟೇಜ್ ಮ್ಯಾಚ್ಗೆ ಗುಜರಾತ್ ತಂಡದಲ್ಲಿ 2 ಮೇಜರ್ ಚೇಂಜ್! ಸ್ಟಾರ್ ಆಟಗಾರರು ಔಟ್
ಮುಲ್ಲನ್ಪುರ್: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ಎದುರು ಗುಜರಾತ್ ಟೈಟಾನ್ಸ್ ತಂಡವು ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.
India News Live Updates CJP Account Ban - ಕಾಕ್ರೋಚ್ ಜನತಾ ಪಾರ್ಟಿಗೆ ಹಿನ್ನಡೆ - 'ಎಕ್ಸ್' ಖಾತೆ ಬ್ಯಾನ್, ತಕ್ಷಣಕ್ಕೆ ರಿಲೀಫ್ ನೀಡಲು ಹೈಕೋರ್ಟ್ ನಕಾರ
'ಕಾಕ್ರೋಚ್ ಜನತಾ ಪಾರ್ಟಿ'ಯ 'ಎಕ್ಸ್' ಖಾತೆ ಬ್ಯಾನ್ ಪ್ರಶ್ನಿಸಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ತಕ್ಷಣದ ರಿಲೀಫ್ ನೀಡಿಲ್ಲ. ಪ್ರಕರಣದ ಗಂಭೀರತೆ ಪರಿಗಣಿಸಿ, ಕೇಂದ್ರದ ವಾದ ಕೇಳಿದ ನಂತರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿ, ವಿಚಾರಣೆ ಜುಲೈ 6ಕ್ಕೆ ಮುಂದೂಡಿದೆ.
India News Live Updates IPL 2026 GT vs RR ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ; ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲೆ!
India News Live Updates ಇನ್ಸ್ಟಾ, ಫೇಸ್ಬುಕ್, ವಾಟ್ಸ್ಆ್ಯಪ್ಗೆ ಮಾಸಿಕ ಶುಲ್ಕ ನಿಗದಿ - ದುಡ್ಡು ಕೊಟ್ರೆ ಮಾತ್ರ ಬಳಕೆ- ಡಿಟೇಲ್ಸ್ ಇಲ್ಲಿದೆ
ಮೆಟಾ ತನ್ನ ಜನಪ್ರಿಯ ಆ್ಯಪ್ಗಳಾದ ಇನ್ಸ್ಟಾಗ್ರಾಮ್, ವಾಟ್ಸ್ಆ್ಯಪ್ ಮತ್ತು ಫೇಸ್ಬುಕ್ಗಳಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಪ್ಲಸ್ ಯೋಜನೆಗಳ ಮೂಲಕ, ಬಳಕೆದಾರರು ಹಣ ಪಾವತಿಸಿ ವಿಶೇಷ AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಆಯ್ಕೆಗಳು ಮತ್ತು ಇತರ ಪ್ರೀಮಿಯಂ ಸೌಲಭ್ಯ ಪಡೆಯಬಹುದು.
India News Live Updates IPL 2026 - ಗುಜರಾತ್-ರಾಜಸ್ಥಾನ ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ವಿಲನ್ ಆಗುತ್ತಾ? ಹೇಗಿದೆ ನ್ಯೂ ಚಂಡೀಗಢ ಹವಾಮಾನ ವರದಿ?
ಮುಲ್ಲನ್ಪುರ: 2026ರ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬನ್ನಿ ಸದ್ಯ ನ್ಯೂ ಚಂಡೀಗಢದಲ್ಲಿ ಹವಾಮಾನ ಪರಿಸ್ಥಿತಿ ಹೇಗಿದೆ ನೋಡೋಣ.