08:13 AM (IST) Jun 08

India Latest News Live 8 June 2026French Open 2026 - ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆದ್ದ ಜರ್ಮನಿ ಟೆನಿಸಿಗ ಅಲೆಕ್ಸಾಂಡರ್ ಜ್ವೆರೆವ್

ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಫ್ರೆಂಚ್‌ ಓಪನ್ ಫೈನಲ್‌ನಲ್ಲಿ ಇಟಲಿಯ ಫ್ಲಾವಿಯೊ ಕೊಬೊಲಿ ಅವರನ್ನು ಮಣಿಸಿ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದ ರೋಚಕ ಐದು ಸೆಟ್‌ಗಳ ಪಂದ್ಯದಲ್ಲಿ ಜಯಗಳಿಸಿದ ಜ್ವೆರೆವ್, ನಾಲ್ಕನೇ ಫೈನಲ್ ಪ್ರಯತ್ನದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Read Full Story
07:50 AM (IST) Jun 08

India Latest News Live 8 June 2026ಮಾನವ್ ಸ್ಪಿನ್ ಜಾದೂವಿಗೆ ಆಫ್ಘಾನಿಸ್ತಾನ ಕಂಗಾಲು! ಭಾರತದ ಹಿಡಿತದಲ್ಲಿ ಏಕೈಕ ಟೆಸ್ಟ್

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ, ಶುಭ್‌ಮನ್‌ ಗಿಲ್‌ ಅವರ ಶತಕದ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 564 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಬಳಿಕ, ಚೊಚ್ಚಲ ಪಂದ್ಯವಾಡುತ್ತಿರುವ ಯುವ ಸ್ಪಿನ್ನರ್‌ ಮಾನವ್‌ ಸುತಾರ್‌ ಅವರ ಮಾರಕ ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ, ದಿನದಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
Read Full Story
07:24 AM (IST) Jun 08

India Latest News Live 8 June 2026Ayodhya ರಾಮಮಂದಿರಕ್ಕೆ ದೇಣಿಗೆ ಬಂದ ಕೋಟ್ಯಂತರ ಹಣ ಕಾಣೆ - ಅಖಿಲೇಶ್‌ ಯಾದವ್ ಗಂಭೀರ ಆರೋಪ

ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಾಣೆಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಮತ್ತೊಂದೆಡೆ, ಸ್ವಚ್ಛತೆಯ ಕಾರಣ ನೀಡಿ ಕಾಶಿ ನಗರದೊಳಗಿನ ಎಲ್ಲಾ ಮಾಂಸದಂಗಡಿಗಳನ್ನು ಹೊರಗೆ ಸ್ಥಳಾಂತರಿಸಲು ವಾರಾಣಸಿ ಪಾಲಿಕೆ ನಿರ್ಧರಿಸಿದೆ.
Read Full Story
07:09 AM (IST) Jun 08

India Latest News Live 8 June 2026ಕೇರಳದ ರಾಜಕೀಯವೇ ವಿಚಿತ್ರ - ಶಾಸಕ ರಾಜೀವ್‌ ಚಂದ್ರಶೇಖರ್‌ ಬಣ್ಣನೆ

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಶಾಸಕರಾಗಿ ತಮ್ಮ ಮೊದಲ ವಿಧಾನಸಭೆ ಅಧಿವೇಶನದ ಅನುಭವವನ್ನು ಹಂಚಿಕೊಂಡಿದ್ದಾರೆ. ಕೇರಳದ ರಾಜಕೀಯ ಸಂಸ್ಕೃತಿಯು ಜನಸಾಮಾನ್ಯರ ನೈಜ ಸಮಸ್ಯೆಗಳಿಂದ ಸಂಪರ್ಕ ಕಡಿದುಕೊಂಡಿದ್ದು, ಅನಗತ್ಯ ವಿವಾದಗಳಲ್ಲೇ ಮುಳುಗಿದೆ ಎಂದು ಅವರು ಟೀಕಿಸಿದ್ದಾರೆ. 18 ವರ್ಷಗಳ ಸಂಸದೀಯ ಅನುಭವದ ನಂತರವೂ, ಇಲ್ಲಿನ ರಾಜಕೀಯ ತನಗೆ ವಿಚಿತ್ರವೆನಿಸಿದೆ ಎಂದು ಅವರು ಹೇಳಿದ್ದಾರೆ.
Read Full Story
07:00 AM (IST) Jun 08

India Latest News Live 8 June 20263000 ಕೆಜಿ ಅವಲಕ್ಕಿ ತಯಾರಿಸಿ ವಿಶ್ವ ದಾಖಲೆ ಯತ್ನ; 400 KG ಪುಠಾಣಿ, 500 KG ಈರುಳ್ಳಿ, 300 KG ಎಣ್ಣೆ

ವಿಶ್ವ ಅವಲಕ್ಕಿ ದಿನದ ಅಂಗವಾಗಿ, ಪ್ರಸಿದ್ಧ ಪಾಕತಜ್ಞ ವಿಷ್ಣು ಮನೋಹರ್‌ ಅವರು 3,000 ಕೆಜಿ 'ತರ್ರಿ ಪೋಹಾ' ತಯಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ನಾಗ್ಪುರದ ಅವಲಕ್ಕಿ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವುದು ಈ ಬೃಹತ್ ಸಾಹಸದ ಮುಖ್ಯ ಉದ್ದೇಶವಾಗಿತ್ತು.
Read Full Story
06:49 AM (IST) Jun 08

India Latest News Live 8 June 2026ಇರಾನ್‌ ನಾಯಕರು ಬಲಿಷ್ಠರು, ಅದಕ್ಕೇ ಒಪ್ಪಂದಕ್ಕೆ ಬರ್ತಿಲ್ಲ - ಟ್ರಂಪ್ ಮೆಚ್ಚುಗೆಯ ರಹಸ್ಯವೇನು?

ಇರಾನ್‌ನ ನಾಯಕರು ಬಲಿಷ್ಠರು ಮತ್ತು ಹೆಮ್ಮೆಯುಳ್ಳವರು, ಆದರೆ ಅಂತಿಮವಾಗಿ ಅಮೆರಿಕದೊಂದಿಗೆ ಒಪ್ಪಂದಕ್ಕೆ ಬರಲೇಬೇಕಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸತ್ಯವನ್ನು ಒಪ್ಪಿಕೊಳ್ಳಲು ಅವರಿಗೆ ಸಮಯ ಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

Read Full Story
06:21 AM (IST) Jun 08

India Latest News Live 8 June 2026ಜೋಜಿಲಾ ಸುರಂಗ ಕಾಮಗಾರಿ ಅಂತಿಮ ಘಟ್ಟಕ್ಕೆ; ಭಾರತದ ಮೂಲಸೌಕರ್ಯ ಇತಿಹಾಸದಲ್ಲಿ ಹೊಸ ಅಧ್ಯಾಯ

ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಜೋಜಿಲಾ ರಸ್ತೆ ಸುರಂಗ ಯೋಜನೆ ಅಂತಿಮ ಹಂತದಲ್ಲಿದೆ. ಸಮುದ್ರ ಮಟ್ಟದಿಂದ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗವು, ವಿಶ್ವದ ಅತಿ ಉದ್ದದ ಏಕ-ಟ್ಯೂಬ್ ದ್ವಿಮುಖ ರಸ್ತೆ ಸುರಂಗವಾಗಿದೆ.

Read Full Story