10:56 PM (IST) Jun 08

India Latest News Live 8 June 2026ಆಹಾರದಲ್ಲಿ ಸಿಕ್ಕಿತು ಕೀಟ, ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶ

ಬಿರಿಯಾನಿಯಲ್ಲಿ ಸತ್ತ ಕೀಟ ಸಿಕ್ಕಿತ್ತು. ರೊಚ್ಚಿಗೆದ್ದ ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದ. ಪರಿಣಾಮ ಗ್ರಾಹಕನಿಗೆ ಐದು ಭಾನುವಾರ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿ ಉಚಿತವಾಗಿ ನೀಡಲು ಕೋರ್ಟ್ ಆದೇಶಿಸಿದೆ.

Read Full Story
10:04 PM (IST) Jun 08

India Latest News Live 8 June 2026Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌ - ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌

ಜೊಮ್ಯಾಟೊದ ಪ್ಲಾಟ್‌ಫಾರ್ಮ್ ಶುಲ್ಕ ಮತ್ತು ಕಮಿಷನ್ ತಪ್ಪಿಸಲು ಗ್ರಾಹಕರು ಹಾಗೂ ರೆಸ್ಟೋರೆಂಟ್‌ಗಳು '1 ರೋಟಿ ಟ್ರಿಕ್' ಎಂಬ ಹೊಸ ಉಪಾಯವನ್ನು ಬಳಸುತ್ತಿದ್ದಾರೆ. ಆ್ಯಪ್‌ನಲ್ಲಿ ಸಣ್ಣ ಆರ್ಡರ್ ಮಾಡಿ, ನೇರವಾಗಿ ರೆಸ್ಟೋರೆಂಟ್‌ಗೆ ಕರೆ ಮಾಡಿ ದೊಡ್ಡ ಆರ್ಡರ್ ನೀಡುವ ಟ್ರಿಕ್‌ ಮಾಡುತ್ತಿದ್ದಾರೆ.

Read Full Story
09:49 PM (IST) Jun 08

India Latest News Live 8 June 2026ಯುಟ್ಯೂಬ್​ನಲ್ಲಿ ಹೋಮ್​ ಟೂರ್​ ಮಾಡಿಸಿದ್ಲು - ಬೆಳಗಾಗೋಷ್ಟರಲ್ಲಿ 10 ಲಕ್ಷದ ಚಿನ್ನಾಭರಣ ನಾಪತ್ತೆಯಾಯ್ತು

ಮಧ್ಯಪ್ರದೇಶದ ಯೂಟ್ಯೂಬರ್ ರಚನಾ ಗುರ್ಜರ್, ತಮ್ಮ ಮನೆಯ ಹೋಮ್ ಟೂರ್ ವಿಡಿಯೋ ಮಾಡಿ ಆಭರಣಗಳನ್ನು ಪ್ರದರ್ಶಿಸಿದ್ದರು. ಇದೇ ವಿಡಿಯೋವನ್ನು ನೋಡಿದ ಕಳ್ಳರು ಮನೆಗೆ ನುಗ್ಗಿ, ಕುಟುಂಬವನ್ನು ಕೋಣೆಯಲ್ಲಿ ಬಂಧಿಸಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.
Read Full Story
09:49 PM (IST) Jun 08

India Latest News Live 8 June 2026ಇನ್ಮುಂದೆ ಆಕ್ಟೀವಾ ಮರೆತುಬಿಡಿ - ಭಾರತಕ್ಕೆ ಬರ್ತಿದೆ ಹೊಂಡಾದ ಹೊಸ ಅಡ್ವೆಂಚರ್ ಮ್ಯಾಕ್ಸಿ ಸ್ಕೂಟರ್

ಹೊಂಡಾ ಕಂಪನಿಯು ಭಾರತದಲ್ಲಿ 'ಹೊಂಡಾ ಎಡಿವಿ 160' ಎಂಬ ಹೊಸ ಪ್ರೀಮಿಯಂ ಅಡ್ವೆಂಚರ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಪವರ್‌ಫುಲ್ ಇಂಜಿನ್, ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿರುವ ಈ ಸ್ಕೂಟರ್, ಯಮಹಾ ಏರಾಕ್ಸ್ 155 ನಂತಹ ವಾಹನಗಳಿಗೆ ಪೈಪೋಟಿ ನೀಡಲಿದೆ.
Read Full Story
09:42 PM (IST) Jun 08

India Latest News Live 8 June 2026Thank You Meet - ಹಿಟ್ ಅಥವಾ ಫ್ಲಾಪ್? 'ಪೆದ್ದಿ' ಬಗ್ಗೆ ರಾಮ್ ಚರಣ್‌ಗೆ ಇದ್ದ ಭಯ ಏನು?

ರಾಮ್ ಚರಣ್‌ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ 'ಥ್ಯಾಂಕ್ ಯು ಮೀಟ್' ಆಯೋಜಿಸಿತ್ತು. ಈ ವೇಳೆ 'ಪೆದ್ದಿ' ಯಶಸ್ಸಿನ ಬಗ್ಗೆ ರಾಮ್ ಚರಣ್ ಆಡಿದ ಮಾತುಗಳು ವೈರಲ್ ಆಗಿವೆ.

Read Full Story
09:14 PM (IST) Jun 08

India Latest News Live 8 June 2026ಮತ್ತೆ ಅಮೇರಿಕಾಗೆ ಹಾರಿರೋ ಯಶ್; USA ಸುತ್ತಾಡಿ ರಾಕಿಂಗ್ ಸ್ಟಾರ್ ಮಾಡ್ತಿರೋ ಪ್ಲಾನ್ ಏನ್ ಗೊತ್ತಾ?

ಕಳೆದ 20 ದಿನಗಳಿಂದ ಅಮೇರಿಕಾದಲೇ ಬೀಡು ಬಿಟ್ಟಿರುವ ಯಶ್ ಹಾಲಿವುಡ್ ನಲ್ಲಿ ಟಾಕ್ಸಿಕ್ ರಿಲೀಸ್ ಮಾಡೊಕೆ ನಿರಂತರವಾಗಿ ಹಾಲಿವುಡ್ ನಿರ್ಮಾಪಕರು, ವಿತರಕರ ಜೊತೆ ಸಾಲು ಸಾಲು ಮೀಟಿಂಗ್ ಮಾಡುತ್ತಿದ್ದಾರೆ. ಹೋಗಿರುವ ಕೆಲಸವನ್ನು ಸಕ್ಸಸ್ ಮಾಡಿಕೊಂಡು ಬರಲೇ ಬೇಕು ಅಂತ ಯಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Read Full Story
09:07 PM (IST) Jun 08

India Latest News Live 8 June 2026ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್ - ಅತೀ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಇಡೀ ವರ್ಷ ಅನ್‌ಲಿಮಿಟೆಡ್ ಕಾಲಿಂಗ್!

ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ₹1,849 ಕ್ಕೆ ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲಿಂಗ್ ಪ್ರಯೋಜನವನ್ನು ನೀಡುತ್ತದೆ, ಆದರೆ ಇದರಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ. 

Read Full Story
08:55 PM (IST) Jun 08

India Latest News Live 8 June 2026'ವರದನಾಯಕ' ಬ್ಯೂಟಿ ಕುಡಿಯೋ ಈ ಜ್ಯೂಸ್ ಇದೆಯಲ್ಲಾ... ಆರೋಗ್ಯಕ್ಕೆ ಚಿನ್ನವಿದ್ದಂತೆ - ರೆಸಿಪಿ ಇಲ್ಲಿದೆ

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಲೈಫ್‌ಸ್ಟೈಲ್ ಕಂಟೆಂಟ್ ಪೋಸ್ಟ್ ಮಾಡುವ ನಟಿ ಸಮೀರಾ, ಇತ್ತೀಚೆಗೆ ಬಾಳೆದಿಂಡಿನ ಜ್ಯೂಸ್ ಮಾಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ನೀವು ಓದಿದ್ದು ಸರಿ.

Read Full Story
08:54 PM (IST) Jun 08

India Latest News Live 8 June 2026ಕೇಂದ್ರ ಸರ್ಕಾರದ ಖಜಾನೆ ತುಂಬಿಸಿದ ಎಸ್‌ಬಿಐ, ₹8,813 ಕೋಟಿ ಹಣದ ಚೆಕ್‌ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ!

ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್‌ಬಿಐ, 2025-26ರ ಹಣಕಾಸು ವರ್ಷದ ದಾಖಲೆಯ ಆರ್ಥಿಕ ಸಾಧನೆಗಾಗಿ ಕೇಂದ್ರ ಸರ್ಕಾರಕ್ಕೆ ₹8,813 ಕೋಟಿಗಳ ಬೃಹತ್ ಲಾಭಾಂಶವನ್ನು ನೀಡಿದೆ. ಬ್ಯಾಂಕ್ ಈ ವರ್ಷ ₹80,032 ಕೋಟಿ ನಿವ್ವಳ ಲಾಭ ಗಳಿಸಿದ್ದು, ವಸೂಲಾಗದ ಸಾಲದ ಪ್ರಮಾಣದಲ್ಲಿಯೂ ಗಣನೀಯ ಸುಧಾರಣೆ ಕಂಡಿದೆ.
Read Full Story
08:30 PM (IST) Jun 08

India Latest News Live 8 June 2026ಚಿತ್ರರಂಗದ ವಿರುದ್ಧ ಭುಗಿಲೆದ್ದ ನಟಿಯರ ಆಕ್ರೋಶ, 'ಪೆದ್ದಿ' ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ; ಆದ್ರೆ.. ಎಂಡ್ ಆಯ್ತಾ ವಿವಾದ?

ವಿವಾದ ಎದ್ದು ಪರಿಸ್ತಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಪೆದ್ದಿ ಸಿನಿಮಾ ನಿರ್ದೇಶಕ ಬುಚ್ಚಿಬಾಬು ಸನಾ ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಕಥೆಯ ಡಿಮ್ಯಾಂಡ್ ಹಾಗೂ ಹಳ್ಳಿಯ ನೇಟಿವಿಟಿಗೆ ತಕ್ಕಂತೆ ಆ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ವಿನಃ ಯಾವುದೇ ಕೆಟ್ಟ ಉದ್ದೇಶದಿಂದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Read Full Story
07:39 PM (IST) Jun 08

India Latest News Live 8 June 2026ನನ್ನ ಜೊತೆ ಮಲಗು ಅಂದ್ರು, ನಾನು ದುರ್ಗಿ ಆದೆ - ಶಾಕಿಂಗ್ ಸತ್ಯ ಬಿಚ್ಚಿಟ್ಟ ಖ್ಯಾತ ಆ್ಯಂಕರ್!

ಖ್ಯಾತ ನಿರೂಪಕಿ ರಂಜಿನಿ ಹರಿದಾಸ್ ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಒಂಟಿಯಾಗಿ ಬದುಕುತ್ತಿರುವುದಕ್ಕೆ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ, ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ರಂಜಿನಿ ಹೇಳಿದ್ದಾರೆ.

Read Full Story
07:33 PM (IST) Jun 08

India Latest News Live 8 June 2026ಸಿಎಂ ವಿಜಯ್ ಟೀಕಿಸಿದ ಖ್ಯಾತ ಯೂಟ್ಯೂಬರ್ ಮರಿದಾಸ್ ಬಂಧನ, ಸಿಡಿದೆದ್ದ ತಮಿಳುನಾಡು ಬಿಜೆಪಿ!

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಯೂಟ್ಯೂಬರ್ ಮರಿದಾಸ್ ಅವರನ್ನು ಚೆನ್ನೈ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಆರೋಪಿಸಿದೆ. ಈ ಹಿಂದೆ ಕೂಡ ಮರಿದಾಸ್ ವಿವಾದಾತ್ಮಕ ಹೇಳಿಕೆಗಳಿಗಾಗಿ ಬಂಧನಕ್ಕೊಳಗಾಗಿದ್ದರು.
Read Full Story
07:16 PM (IST) Jun 08

India Latest News Live 8 June 2026'ಕ್ಯಾಮೆರಾ ಆ್ಯಂಗಲ್ ಸರಿ ಇಲ್ಲದಿದ್ರೆ ನೋ ಹೇಳಿ' ಎಂದಿದ್ದ ಜಾನ್ವಿ - 'ಪೆದ್ದಿ' ಚಿತ್ರದಿಂದ ಮತ್ತೆ ಟ್ರೋಲ್!

ಹೊಸ ಸಿನಿಮಾ 'ಪೆದ್ದಿ'ಯಲ್ಲಿ ಜಾನ್ವಿ ಕಪೂರ್ ಅವರನ್ನು ಕೇವಲ ಒಂದು ವಸ್ತುವಿನಂತೆ ತೋರಿಸಲಾಗಿದೆ ಎಂಬ ಟೀಕೆಗಳು ಜೋರಾಗಿವೆ. ಇದರ ಬೆನ್ನಲ್ಲೇ, ಮಹಿಳೆಯರ ದೇಹವನ್ನು ಅವರ ಅನುಮತಿಯಿಲ್ಲದೆ ಚಿತ್ರೀಕರಿಸುವುದರ ವಿರುದ್ಧ ಅವರು ಹಿಂದೆ ನೀಡಿದ್ದ ಹೇಳಿಕೆಗಳು ಮತ್ತೆ ಚರ್ಚೆಗೆ ಬಂದಿವೆ.

Read Full Story
07:04 PM (IST) Jun 08

India Latest News Live 8 June 2026ಶಿಲ್ಪಾ ಶೆಟ್ಟಿ ಬಳಿ ಒಟ್ಟೂ ಎಷ್ಟು ಆಸ್ತಿ ಇದೆ ಗೊತ್ತಾ? ಈ ಸೀಕ್ರೆಟ್ ಇಲ್ಲಿದೆ.. ನೀವು ಗೆಸ್ ಮಾಡಿರೋದು ಸರಿನಾ ನೋಡಿ!

ಮಂಗಳೂರಿನಿಂದ ಹೊರಟ ಈ ಪ್ರತಿಭೆ ಇಂದು ದೇಶದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಠಿಣ ಪರಿಶ್ರಮ ಮತ್ತು ವ್ಯವಹಾರ ಜ್ಞಾನದಿಂದ ಶಿಲ್ಪಾ ಶೆಟ್ಟಿ ಇಂದು 'ಸಕ್ಸಸ್' ಎಂಬ ಪದಕ್ಕೆ ಪರ್ಯಾಯವಾಗಿದ್ದಾರೆ. ಇವರಿಗೆ ಜನ್ಮದಿನದ ಶುಭಾಶಯಗಳ ಸುರಿಮಳೆ ಆಗುತ್ತಿದೆ.

Read Full Story
06:15 PM (IST) Jun 08

India Latest News Live 8 June 2026ಶಿಲ್ಪಾ ಶೆಟ್ಟಿ ಮತ್ತೆ ಅದೇನೋ ಮಾಡೋ ಆಸೆ ಆಗಿದ್ಯಂತೆ.. ಏನದು ಶಿಲ್ಪಾ ಶೆಟ್ಟಿಯ 'ಸೀಕ್ರೆಟ್' ಆಸೆ?

ಶಿಲ್ಪಾ ಶೆಟ್ಟಿ ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಕೇಡಿ: ದಿ ಡೆವಿಲ್' ಚಿತ್ರದಲ್ಲಿ ಸತ್ಯವತಿ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ವೆಬ್ ಸರಣಿ ಹಾಗೂ 'ಮಾ ಹೈ ನಾ' ಎಂಬ ಅಡುಗೆ ಶೋ ಮೂಲಕವೂ ಸಕ್ರಿಯರಾಗಿದ್ದಾರೆ. ಈಗ ಅವರ ಆಸೆ ಏನು ನೋಡಿ..!

Read Full Story
05:18 PM (IST) Jun 08

India Latest News Live 8 June 2026ಅಫ್ಘಾನ್ ಸದ್ದಡಗಿಸಿದ ಭಾರತ - ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ಗೆಲುವು ದಾಖಲಿಸಿದ ಟೀಂ ಇಂಡಿಯಾ

ಶುಭ್‌ಮನ್ ಗಿಲ್ ಮತ್ತು ಕೆ ಎಲ್ ರಾಹುಲ್ ಅವರ ಶತಕಗಳ ನೆರವಿನಿಂದ ಭಾರತ, ಆಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಹಾಗೂ 300 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಟೀಂ ಇಂಡಿಯಾ ತನ್ನ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿತು. ಪಾದಾರ್ಪಣೆ ಪಂದ್ಯದಲ್ಲೇ ಮಾನವ್ ಸುತಾರ್ 6 ವಿಕೆಟ್ ಪಡೆದು ಮಿಂಚಿದರು.
Read Full Story
05:10 PM (IST) Jun 08

India Latest News Live 8 June 2026ಯಶ್ 'ಟಾಕ್ಸಿಕ್' ಸೆಟ್‌ನಲ್ಲಿ ಗೀತು ಮೋಹನ್‌ದಾಸ್ ಖಡಕ್ ಅವತಾರ - ಹುಟ್ಟುಹಬ್ಬಕ್ಕೆ BTS ವಿಡಿಯೋ ರಿಲೀಸ್

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರತಂಡ ತೆರೆಮರೆಯ ದೃಶ್ಯಗಳ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಗೀತು ಅವರ ಖಡಕ್ ನಿರ್ದೇಶನದ ಶೈಲಿ ಮತ್ತು ಸೃಜನಶೀಲತೆ ಎದ್ದು ಕಾಣುತ್ತಿದೆ.

Read Full Story
04:53 PM (IST) Jun 08

India Latest News Live 8 June 2026ಆರ್‌ಸಿಬಿ ಸೇರುವುದು ನನ್ಗೆ ಇಷ್ಟವಿರಲಿಲ್ಲ, 2 ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್ ಪಾಟಿದಾರ್ ಸ್ಫೋಟಕ ಹೇಳಿಕೆ

ಆರ್‌ಸಿಬಿ ತಂಡ ಸೇರಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ ಎಂದು ನಾಯಕ ರಜತ್ ಪಾಟಿದಾರ್ ಹೇಳಿದ್ದಾರೆ. ತಂಡಕ್ಕೆ 2 ಟ್ರೋಫಿ ಗೆಲ್ಲಿಸಿಕೊಟ್ಟ ಯಶಸ್ವಿ ನಾಯಕ ಎಂದೇ ಗುರುತಿಸಿಕೊಂಡಿರುವ ರಜತ್ ಪಾಟಿದಾರ್ ಯಾವ ತಂಡ ಸೇರಿಕೊಳ್ಳಲು ಬಯಸಿದ್ದರು.

Read Full Story
04:43 PM (IST) Jun 08

India Latest News Live 8 June 2026ನೀನೇ ನನ್ನ ಶಕ್ತಿ, ನನ್ನ ನಂಬಿಕೆ - ಕೆಡಿ ನಟಿ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ಭಾವುಕ ಪೋಸ್ಟ್!

ಪತ್ನಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಉದ್ಯಮಿ ರಾಜ್ ಕುಂದ್ರಾ ಹೃದಯಸ್ಪರ್ಶಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಶಿಲ್ಪಾ ನನ್ನ ಜೀವನದ ಶಕ್ತಿ, ನಂಬಿಕೆ ಮತ್ತು ಸ್ಥಿರತೆ ಎಂದು ಹೇಳಿರುವ ಅವರು, ಕಷ್ಟದ ಸಮಯದಲ್ಲಿ ದೇವತೆಯಂತೆ ಜೊತೆಗಿದ್ದವಳು ಎಂದು ಹೊಗಳಿದ್ದಾರೆ.

Read Full Story
04:40 PM (IST) Jun 08

India Latest News Live 8 June 2026ಮುಂಬೈ ಇಂಡಿಯನ್ಸ್‌ನಲ್ಲಿ ಮಹಾ ಸಂಚಲನ; ಫ್ರಾಂಚೈಸಿ ಮಾತು ಕೇಳಿ ಮುಂಬೈ ತಂಡವನ್ನು ಅನ್‌ಫಾಲೋ ಮಾಡಿದ್ರಾ ಸ್ಟಾರ್ ಕ್ರಿಕೆಟಿಗ?

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೀನಾಯ ಪ್ರದರ್ಶನ ತೋರಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹಾ ಸಂಚಲನ ಶುರುವಾಗಿದ್ದು, ಸ್ಟಾರ್ ಕ್ರಿಕೆಟಿಗ ತಂಡ ತೊರೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Read Full Story