ಅಮೆರಿಕದ ಆ್ಯಂಥ್ರೋಪಿಕ್ ಕಂಪನಿಯು ತನ್ನ ಹೊಸ ಕೃತಕ ಬುದ್ಧಿಮತ್ತೆ (ಎಐ) ಟೂಲ್ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಬಾಗಲಕೋಟೆಯ ರಾಹುಲ್ ಪಾಟೀಲ್ ಅವರೇ ಈ ಹೊಸ ಆವಿಷ್ಕಾರದ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.
- Home
- News
- India News
- India Latest News Live: ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್
LIVE NOW
India Latest News Live: ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್

ಸಾರಾಂಶ
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಗಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿದ್ದ ಶೇ.25ರಷ್ಟು ಪ್ರತಿ ತೆರಿಗೆಯನ್ನು ಅಮೆರಿಕ ರದ್ದು ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ, ಮತ್ತೇನಾದರೂ ಭಾರತ ಸರ್ಕಾರ ರಷ್ಯಾದಿಂದ ಮತ್ತೆ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡಿದ್ದು ಗಮನಕ್ಕೆ ಬಂದರೆ ಮತ್ತೆ ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರತವು ರಷ್ಯಾ ತೈಲ ಖರೀದಿ ಸ್ಥಗಿತಗೊಳಿಸುವ ಭರವಸೆ ನೀಡಿದೆ. ಒಂದು ವೇಳೆ ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಗಮನಕ್ಕೆ ಬಂದರೆ ಮತ್ತೆ ತೆರಿಗೆ ವಿಧಿಸುವ ಅಥವಾ ಅನ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಟ್ರಂಪ್ ತಂಡ ನಿರ್ಧಾರ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
06:36 AM (IST) Feb 08
India Latest News Live 8 Feb 2026 ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್
Read Full Story
06:21 AM (IST) Feb 08
India Latest News Live 8 Feb 2026 ಪಾಕಿಸ್ತಾನದಿಂದ ಯು-ಟರ್ನ್ - ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ಕಣಕ್ಕೆ? ಲಂಕಾದಿಂದಲೂ ಜೋರಾಯ್ತು ಒತ್ತಡ
ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆ ಇದೆ. ಐಸಿಸಿಯ ಆರ್ಥಿಕ ಎಚ್ಚರಿಕೆ ಮತ್ತು ಆತಿಥೇಯ ಶ್ರೀಲಂಕಾದ ಒತ್ತಡದಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ನಿಲುವನ್ನು ಮರುಪರಿಶೀಲಿಸಲು ಮಾತುಕತೆ ಆರಂಭಿಸಿದೆ.
Read Full Story