- Home
- News
- India News
- India Latest News Live: ತಾಜ್ಮಹಲ್ನೊಳಗೆ ದೇಗುಲ: ಪ್ರತಿಕ್ರಿಯೆಗೆ ಕೇಂದ್ರಕ್ಕೆ ನೋಟಿಸ್ ನೀಡಿದ ಕೋರ್ಟ್
LIVE NOW
India Latest News Live: ತಾಜ್ಮಹಲ್ನೊಳಗೆ ದೇಗುಲ: ಪ್ರತಿಕ್ರಿಯೆಗೆ ಕೇಂದ್ರಕ್ಕೆ ನೋಟಿಸ್ ನೀಡಿದ ಕೋರ್ಟ್

ಸಾರಾಂಶ
ಪ್ರಯಾಗ್ರಾಜ್: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್ಮಹಲ್ ವ್ಯಾಪ್ತಿಯೊಳಗೆ ಅಗ್ರೇಶ್ವರ ಮಹಾದೇವ ತೇಜೋ ಮಹಾಲಯ ದೇಗುಲವಿದೆ. ಹೀಗಾಗಿ ಅದನ್ನು ತೇಜೋ ಮಹಾಲಯ ದೇಗುಲ ಎಂದು ಘೋಷಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಾಜಮಹಲ್ ಅನ್ನು ದೇಗುಲ ಎಂದು ಘೋಷಿಸಬೇಕು ಎಂದು ಕೋರಿ ಹರಿಶಂಕರ್ ಜೈನ್ ಮತ್ತ ಇತರೆ ನಾಲ್ವರು ಜು.3ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್ ರಂಜನ್ ಅಗರ್ವಾಲ್ ಅವರನ್ನು ಒಳಗೊಂಡ ಪೀಠ ಈ ನೋಟಿಸ್ ಜಾರಿ ಮಾಡಿದೆ.
ತಾಜ್ಮಹಲ್ ಅನ್ನು ದೇಗುಲವೆಂದು ಘೋಷಿಸಬೇಕು. ಈ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಬೇಕು ಎಂದು ಕೋರಿದ್ದ ಮನವಿಯನ್ನು ಆಗ್ರಾದ ಎರಡು ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಇದನ್ನು ಪ್ರಶ್ನಿಸಿ ಇದೀಗ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.