- Home
- News
- India News
- India Latest News Live: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್ಗೆ 1 ಲಕ್ಷ
LIVE NOW
India Latest News Live: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್ಗೆ 1 ಲಕ್ಷ

ಸಾರಾಂಶ
ಮುಂಬೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ನಿವೃತ್ತ ಪ್ರಾಧ್ಯಾಪಕ ಪಿ. ವಿ. ಕುಲಕರ್ಣಿಗೆ ಸೇರಿದೆ ಎನ್ನಲಾದ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೆಡವಲು ನಗರಾಡಳಿತ ಆದೇಶಿಸಿದೆ. ಇದರ ಬೆನ್ನಲ್ಲೇ ಸ್ವಯಂಪ್ರೇರಿತರಾಗಿ ಆತನ ಮನೆಯವರು ಕಟ್ಟಡ ಧ್ವಂಸ ಮಾಡಿದ್ದಾರೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಿಯಮವನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ, ಕಟ್ಟಡದ ಕೆಲವು ಭಾಗಗಳನ್ನು ಕೆಡವಲು ಆದೇಶಿಸಲಾಗಿತ್ತು. ಕುಲಕರ್ಣಿ ರಸಾಯನಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಹಲವು ವರ್ಷಗಳಿಂದ ನೀಟ್ ಪತ್ರಿಕೆ ಸಿದ್ಧತೆ ಮಂಡಳಿಯಲ್ಲಿದ್ದ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ ಈತನನ್ನು ಕಳೆದ ತಿಂಗಳು ಪುಣೆಯಲ್ಲಿ ಬಂಧಿಸಲಾಗಿತ್ತು.
07:17 AM (IST) Jun 03
India Latest News Live 3 June 2026ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್ಗೆ 1 ಲಕ್ಷ
ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಸಂಘರ್ಷ ಹಾಗೂ ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಹಣದುಬ್ಬರ ದರವು ಎರಡನೇ ವಿಶ್ವಯುದ್ಧದ ಸಮಯದ ಮಟ್ಟವಾದ ಶೇ.77ಕ್ಕೆ ಏರಿದ್ದು, ಅಲ್ಲಿನ ಕರೆನ್ಸಿ 'ರಿಯಾಲ್' ಮೌಲ್ಯ ದಾಖಲೆಯ ಕುಸಿತ ಕಂಡಿದೆ.
Read Full Story