- Home
- News
- India News
- India Latest News Live: ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ - ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ
LIVE NOW
India Latest News Live: ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ - ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ

ಸಾರಾಂಶ
ನವದೆಹಲಿ: ಯೆಮೆನ್ ಕರಾವಳಿಯ ಕೆಂಪು ಸಮುದ್ರದಲ್ಲಿ ಭಾರತದ ಮೊದಲ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ನೌಕೆಯಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಧ್ವಜವನ್ನು ಹೊಂದಿದ್ದ ವಾಣಿಜ್ಯ ಹಡಗು ಎಂಎಸ್ವಿ ಫೈಜ್ ನೂರ್ ಒಲಿಯಾ ಹಡಗಿನ ಮೇಲೆ ದಾಳಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಘಟನೆ ಸಂಭವಿಸುತ್ತಿದ್ದಂತೆ ಯೆಮೆನ್ನ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿ ಮೊಖಾ ಬಂದರಿಗೆ ಕರೆತಂದಿದ್ದಾರೆ. ಘಟನೆಯ ಹೊಣೆಯನ್ನು ಇದುವರೆಗೂ ಯಾರೂ ಹೊತ್ತುಕೊಂಡಿಲ್ಲ. ಕೆಂಪು ಸಮುದ್ರದಲ್ಲಿ ನಡೆದ ಈ ಘಟನೆಯನ್ನು ಭಾರತ ಖಂಡಿಸಿದ್ದು, ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದೆ.
08:43 AM (IST) Aug 05
India Latest News Live 5 August 2026ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ - ಗ್ರಾಹಕರಿಗೆ ಪೇ-ಇನ್-3 ಸೌಲಭ್ಯ, ಭಾರಿ ರಿಯಾಯಿತಿ
ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ ಆಗಸ್ಟ್ 7 ರಿಂದ 12ರವರೆಗೆ ನಡೆಯಲಿದ್ದು, ಅಮೆಜಾನ್ ಪೇ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಇದರಲ್ಲಿ ₹1,500 ಮೇಲಿನ ಖರೀದಿಗೆ ಬಡ್ಡಿರಹಿತ 'ಪೇ-ಇನ್-3' ಸೌಲಭ್ಯ, ಪ್ರವಾಸ ಬುಕಿಂಗ್ಗಳ ಮೇಲೆ ಭಾರಿ ರಿಯಾಯಿತಿ ಹಾಗೂ ಯುಪಿಐ ಪಾವತಿಗಳಿಗೆ ಕ್ಯಾಶ್ಬ್ಯಾಕ್ ಆಫರ್ಗಳು ಸೇರಿವೆ.
Read Full Story 08:23 AM (IST) Aug 05
India Latest News Live 5 August 202660 ದಿನದಲ್ಲಿ 110 ಕೆಜಿಯಿಂದ 88 ಕೆಜಿ! ಈ ಉದ್ಯಮಿ ತೂಕ ಇಳಿಸಿದ ಕತೆ ಹೇಗಿದೆ ಅಂದ್ರೆ..
ಕೇರಳದ ಉದ್ಯಮಿ ಡಾ. ಶಿಬಿನ್ ಮ್ಯಾಥ್ಯೂ ಕೇವಲ 60 ದಿನಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಕಟ್ಟುನಿಟ್ಟಾದ ಕ್ಯಾಲೋರಿ ನಿಯಂತ್ರಣ ಮತ್ತು ಹೈ-ಪ್ರೋಟೀನ್ ಆಹಾರ ಕ್ರಮದಿಂದ ಇದು ಸಾಧ್ಯವಾಗಿದ್ದು, ಈ ಕಠಿಣ ಡಯಟ್ ಅನ್ನು ತಜ್ಞರ ಸಲಹೆಯಿಲ್ಲದೆ ಅನುಸರಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ.
Read Full Story 07:59 AM (IST) Aug 05
India Latest News Live 5 August 2026WTC ಫೈನಲ್ ಕನಸು ಭಗ್ನಗೊಂಡರೆ.. ಟೆಸ್ಟ್ ತಂಡಕ್ಕೆ ಈ ಮೂವರು ಹೊಸ ವೇಗಿಗಳ ಸೇರ್ಪಡೆಗೆ BCCI ಮಾಸ್ಟರ್ ಪ್ಲಾನ್
ಜಸ್ಪ್ರೀತ್ ಬುಮ್ರಾ ಮೇಲಿನ ಕಾರ್ಯಭಾರ ಮತ್ತು ಗಾಯದ ಸಮಸ್ಯೆಗಳನ್ನು ಕಡಿಮೆ ಮಾಡಲು ಬಿಸಿಸಿಐ ಟೆಸ್ಟ್ ತಂಡಕ್ಕಾಗಿ ಹೊಸ ವೇಗದ ಬೌಲರ್ಗಳನ್ನು ಹುಡುಕುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪದಿದ್ದರೆ, ನ್ಯೂಜಿಲೆಂಡ್ ಪ್ರವಾಸದಲ್ಲಿ ತುಷಾರ್ ದೇಶಪಾಂಡೆ, ಗುರ್ಜಪ್ನೀತ್ ಸಿಂಗ್ ಮತ್ತು ನಚಿಕೇತ್ ಭೂತೆ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡಲು ಯೋಜಿಸಲಾಗಿದೆ.
Read Full Story 07:34 AM (IST) Aug 05
India Latest News Live 5 August 2026ಇನ್ಮುಂದೆ ವಿಮೆ ಇಲ್ಲದಿದ್ರೆ ಪೆಟ್ರೋಲ್ ಸಿಗೋಲ್ಲ; ಪ್ರಾಯೋಗಿಕ ಜಾರಿಗೆ ಸುಪ್ರೀಂ ನಿರ್ದೇಶನ, ಹೊಸ ವಾಹನ ಖರೀದಿಸಿದವರು ಈ ವಿಷ್ಯ ತಿಳಿದಿರಲಿ!
No Insurance No Fuel: ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುತ್ತಿರುವ ಶೇ.56ರಷ್ಟು ವಾಹನಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆ ರೂಪಿಸಲು ಕೇಂದ್ರಕ್ಕೆ ನಿರ್ದೇಶಿಸಿದೆ.
07:16 AM (IST) Aug 05
India Latest News Live 5 August 2026ತೆಲಂಗಾಣದಲ್ಲಿ ಮಳೆ ತಡೆಗೆ ಶಿವಮೊಗ್ಗದಲ್ಲಿ ಮಾಟಮಂತ್ರ - ಶಾಸಕನ ವಿರುದ್ಧ ಗಂಭೀರ ಆರೋಪ
ತೆಲಂಗಾಣದಲ್ಲಿ ಮಳೆ ಬಾರದಿರಲು ರಾಜಕೀಯ ಷಡ್ಯಂತ್ರದ ಶಂಕೆ ವ್ಯಕ್ತವಾಗಿದೆ. ರಾಜಕೀಯ ಲಾಭಕ್ಕಾಗಿ ಬಿಆರ್ಎಸ್ ಶಾಸಕ ಹರೀಶ್ ರಾವ್ ಅವರು ಕರ್ನಾಟಕದ ಶಿವಮೊಗ್ಗದಲ್ಲಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಆರೋಪಿಸಿದ್ದಾರೆ. ಈ ಆರೋಪವನ್ನು ಹರೀಶ್ ರಾವ್ ತಳ್ಳಿಹಾಕಿದ್ದಾರೆ.
Read Full Story