10:49 AM (IST) Jun 29

India Latest News Live 29 June 2026ಐರ್ಲೆಂಡ್ ಎದುರು ಹೀನಾಯ ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಕೇವಲ ಒಂದು ರನ್‌ನಿಂದ ರೋಚಕ ಸೋಲು ಅನುಭವಿಸಿತು. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ಸರಣಿ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದು ಒಪ್ಪಿಕೊಂಡು, ಎದುರಾಳಿ ತಂಡದ ಆಟವನ್ನು ಶ್ಲಾಘಿಸಿದರು. ತಿಲಕ್ ವರ್ಮಾ ಅವರ ಅರ್ಧಶತಕದ ಹೊರತಾಗಿಯೂ ಭಾರತಕ್ಕೆ ಗೆಲುವು ದಕ್ಕಲಿಲ್ಲ.
Read Full Story
10:48 AM (IST) Jun 29

India Latest News Live 29 June 2026ಫುಟ್ಬಾಲ್​ ಪಂದ್ಯದಲ್ಲಿ ನಿಗೂಢ ಬ್ಯೂಟಿ​ - ಕೆಲವೇ ಕ್ಷಣಗಳ ವೈರಲ್ ವಿಡಿಯೋಗೆ ವಿಶ್ವಾದ್ಯಂತ ಇನ್ನಿಲ್ಲದ ಡಿಮಾಂಡ್​- ಯಾರೀಕೆ

ಇರಾಕ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದ ಯುವತಿಯೊಬ್ಬಳು ತನ್ನ ಸಹಜ ಸೌಂದರ್ಯ ಮತ್ತು ಮುಗುಳ್ನಗುವಿನಿಂದ ರಾತ್ರೋರಾತ್ರಿ ವೈರಲ್ ಆಗಿದ್ದಾಳೆ. ಈಕೆಯ ಕೆಲವೇ ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಈಕೆ ಯಾರೆಂದು ತಿಳಿಯಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ.
Read Full Story
10:45 AM (IST) Jun 29

India Latest News Live 29 June 2026ಬಡವರ ತಟ್ಟೆಗೆ ಅಕ್ಕಿ ಬಿಸಿ - ಒಂದೇ ತಿಂಗಳಲ್ಲಿ 3 ಬಾರಿ ಬೆಲೆ ಏರಿಕೆ; ಕೆಜಿ ಅಕ್ಕಿಗೆ ಒಟ್ಟು ₹18 ಹೆಚ್ಚಳ, ಕಂಗಾಲಾದ ಗ್ರಾಹಕ!

ಬೆಂಗಳೂರಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ಅಕ್ಕಿ ದರ ಕೆಜಿಗೆ ₹18ರಷ್ಟು ಹೆಚ್ಚಳವಾಗಿ ಜನಸಾಮಾನ್ಯರಿಗೆ ಆಘಾತ ನೀಡಿದೆ. ಕೇಂದ್ರದ ರಫ್ತು ನೀತಿ, ಸಾಗಣೆ ವೆಚ್ಚ ಏರಿಕೆ ಹಾಗೂ ಪೂರೈಕೆ ವ್ಯತ್ಯಾಸ ಇದಕ್ಕೆ ಪ್ರಮುಖ ಕಾರಣಗಳಾಗಿದ್ದು, ಇದು ಮಧ್ಯಮ ವರ್ಗದ ಬಜೆಟ್ ಮೇಲೆ ನೇರ ಪರಿಣಾಮ ಬೀರಿದೆ.
Read Full Story
10:19 AM (IST) Jun 29

India Latest News Live 29 June 2026ಮದ್ಯ ಮಾರಾಟದಲ್ಲಿ ಯೋಗಿ ಸರ್ಕಾರ ಹೊಸ ದಾಖಲೆ; ಕರ್ನಾಟಕ, ಮಹಾರಾಷ್ಟ್ರವನ್ನು ಹಿಂದಿಕ್ಕಿ ಯುಪಿ ನಂ.1!

ದೇಶದಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಗಳ ಅಬಕಾರಿ ಸುಂಕ ಸಂಗ್ರಹಣೆಯು ಎರಡು ತಿಂಗಳಲ್ಲಿ ಶೇ. 82ರಷ್ಟು ಹೆಚ್ಚಾಗಿದೆ. ಒಟ್ಟು ಆದಾಯದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಹರಿಯಾಣವು ಅತಿ ಹೆಚ್ಚು ಬೆಳವಣಿಗೆ ದರವನ್ನು ದಾಖಲಿಸಿದೆ. 

Read Full Story
09:41 AM (IST) Jun 29

India Latest News Live 29 June 2026ರೇಡಿಯೋ ಇಲ್ಲ, ಬಾಹ್ಯಾಕಾಶದ ಉಪಗ್ರಹವೇ ದಾರಿ; ‘ಗಗನ್’ ತಂತ್ರಜ್ಞಾನ ಬಳಸಿ ಇಂಡಿಗೊ ವಿಮಾನದ ಐತಿಹಾಸಿಕ ಲ್ಯಾಂಡಿಂಗ್!

ಇಂಡಿಗೊ ವಿಮಾನವು ಇಸ್ರೋದ 'ಗಗನ್' ತಂತ್ರಜ್ಞಾನ ಬಳಸಿ ಉದಯಪುರದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ಸ್ವದೇಶಿ ಉಪಗ್ರಹ ಆಧಾರಿತ ವ್ಯವಸ್ಥೆಯು GPS ಸಿಗ್ನಲ್‌ಗಳನ್ನು ಸರಿಪಡಿಸಿ, ಯಾವುದೇ ನೆಲದ ಉಪಕರಣಗಳಿಲ್ಲದೆ ವಿಮಾನಗಳ ಸುರಕ್ಷಿತ ಲ್ಯಾಂಡಿಂಗ್‌ಗೆ ದಾರಿ ಮಾಡಿಕೊಡುತ್ತದೆ.

Read Full Story
09:36 AM (IST) Jun 29

India Latest News Live 29 June 2026ನಿಜವಾಯ್ತು ಘಾನಾ ಮಂತ್ರವಾದಿ ಭವಿಷ್ಯ - ಕೊನೆಗೂ ಗೋಲು ಹೊಡೆದ ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಕೇನ್‌!

ಇಂಗ್ಲೆಂಡ್ ಪರ ಹ್ಯಾರಿ ಕೇನ್ ದಾಖಲೆಯ ಗೋಲು ಬಾರಿಸಿದರೆ, ಹಾಲಿ ಚಾಂಪಿಯನ್‌ ಅರ್ಜೆಂಟೀನಾ ಸತತ ಮೂರನೇ ಗೆಲುವು ದಾಖಲಿಸಿದೆ. ಮತ್ತೊಂದೆಡೆ, ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದ ಉರುಗ್ವೆ ತಂಡಕ್ಕೆ ಆ ದೇಶದ ಫುಟ್ಬಾಲ್ ಸಂಸ್ಥೆ ವಿಶೇಷ ವಿಮಾನವನ್ನು ರದ್ದುಗೊಳಿಸಿ ವಿಶಿಷ್ಟ ಶಿಕ್ಷೆ ನೀಡಿದೆ.
Read Full Story
09:21 AM (IST) Jun 29

India Latest News Live 29 June 2026ಹರ್ಮನ್‌ಪ್ರೀತ್ ಕೌರ್ ಮತ್ತೆ ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರಾ? ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಹೆಡ್ ಕೋಚ್..!

ಲಂಡನ್: ಭಾರತ ಮಹಿಳಾ ಕ್ರಿಕೆಟ್ ತಂಡದ 2026ರ ಐಸಿಸಿ ಟಿ20 ವಿಶ್ವಕಪ್ ಸೆಮೀಸ್‌ಗೇರುವ ಕನಸು ಆಸೀಸ್ ಎದುರು ಸೋಲುವುದರೊಂದಿಗೆ ನುಚ್ಚುನೂರಾಗಿದೆ. ಇದರ ಬೆನ್ನಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವ ಹಾಗೂ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಕೋಚ್ ಮೌನ ಮುರಿದಿದ್ದಾರೆ.

Read Full Story
09:17 AM (IST) Jun 29

India Latest News Live 29 June 2026Salman Khan-Aishwarya Rai Secret - ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!

ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೇನು ಮಾಡಿದ್ದರು ಎಂಬ ಸೀಕ್ರೆಟ್ ಇಲ್ಲಿ ರಿವೀಲ್ ಆಗಿದೆ. ಈ ಸಂಗತಿಯನ್ನು ಸಹನಟಿ ಸಾದಿಯಾ ಹೇಳಿದ್ದಾರೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾ

Read Full Story
09:03 AM (IST) Jun 29

India Latest News Live 29 June 2026Actress Krishi Thapanda - ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ

kannada actress krishi thapanda: ನಟಿ, ಬಿಗ್‌ ಬಾಸ್‌ ಸ್ಪರ್ಧಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ವೈಶಾಖ್ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಈಗ ಕೃಷಿ ತಾಪಂಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಕೃಷಿ ಈಗ ಏನು ಹೇಳ್ತಿದ್ದಾರೆ?

Read Full Story
08:42 AM (IST) Jun 29

India Latest News Live 29 June 2026ಫಿಫಾ ವಿಶ್ವಕಪ್ ನಾಕೌಟ್‌ ಸೆಣಸಾಟಕ್ಕೆ ವೇದಿಕೆ ಸಿದ್ಧ! ನಾಕೌಟ್‌ನಲ್ಲಿ ಪಂದ್ಯ ಡ್ರಾ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

ಫಿಫಾ ಫುಟ್ಬಾಲ್‌ ವಿಶ್ವಕಪ್‌ ಈಗ ಅಂತಿಮ-32ರ ನಾಕೌಟ್‌ ಹಂತವನ್ನು ತಲುಪಿದೆ. ಈ ಮಾಡು ಇಲ್ಲವೇ ಮಡಿ ಸುತ್ತಿನಲ್ಲಿ ಗೆದ್ದ ತಂಡಗಳು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದರೆ, ಸೋತ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಈ ಹಂತದ ಪಂದ್ಯಗಳು, ಎದುರಾಳಿಗಳು ಮತ್ತು ಡ್ರಾ ನಿಯಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
Read Full Story
08:26 AM (IST) Jun 29

India Latest News Live 29 June 2026FIFA World Cup 2026 ಡೆಂಬೆಲೆ ಹ್ಯಾಟ್ರಿಕ್‌ - ನಾರ್ವೆ ವಿರುದ್ಧ ಗೆದ್ದ ಫ್ರಾನ್ಸ್‌ ನಾಕೌಟ್ ಪ್ರವೇಶ

ಓಸ್ಮಾನ್‌ ಡೆಂಬೆಲೆ ಅವರ ಹ್ಯಾಟ್ರಿಕ್‌ ನೆರವಿನಿಂದ ಫ್ರಾನ್ಸ್‌ ತಂಡ ವಿಶ್ವಕಪ್‌ನಲ್ಲಿ ಅಜೇಯವಾಗಿ ನಾಕೌಟ್‌ ಹಂತ ಪ್ರವೇಶಿಸಿದೆ. ಸ್ಪೇನ್ ಮತ್ತು ಬೆಲ್ಜಿಯಂ ಕೂಡಾ ಮುಂದಿನ ಹಂತಕ್ಕೆ ಲಗ್ಗೆ ಇಟ್ಟರೆ, ಒಂದೂ ಪಂದ್ಯ ಗೆಲ್ಲದ ಕೇಪ್‌ ವರ್ಡೆ ತಂಡ ನಾಕೌಟ್‌ ಪ್ರವೇಶಿಸಿ ಅಚ್ಚರಿ ಮೂಡಿಸಿದೆ.
Read Full Story
07:58 AM (IST) Jun 29

India Latest News Live 29 June 2026ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ; ಯಾವ್ಯಾವ ದಿನ? ಇಲ್ಲಿದೆ ಸಂಪೂರ್ಣ ಪಟ್ಟಿ

ಜುಲೈ ತಿಂಗಳಲ್ಲಿ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸವಿದ್ರೆ, ಮೊದಲೇ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಯಾಕಂದ್ರೆ, ಈ ತಿಂಗಳು ಬರೋಬ್ಬರಿ 12 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಹಲವು ದಿನ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.
Read Full Story
07:43 AM (IST) Jun 29

India Latest News Live 29 June 2026ಮಗನ ಹಠಾತ್‌ ಸಾವಿನ 16 ದಿನಕ್ಕೆ, ಆತನ ಜನ್ಮದಿನದಂದೇ ಪ್ರಾಣಬಿಟ್ಟ ಭಾರತದ ಶೂಟಿಂಗ್‌ ದಿಗ್ಗಜ ಜಸ್ಪಾಲ್‌ ರಾಣಾ ತಾಯಿ

ಖ್ಯಾತ ಶೂಟರ್ ಜಸ್ಪಾಲ್ ರಾಣಾ ಅವರ ನಿಧನದ ದುಃಖ ಮಾಸುವ ಮುನ್ನವೇ, ಅವರ ತಾಯಿ ಶ್ಯಾಮಾ ದೇವಿ ರಾಣಾ ಅವರು ಕ್ಯಾನ್ಸರ್‌ನಿಂದಾಗಿ ದೆಹಲಿಯಲ್ಲಿ ನಿಧನರಾಗಿದ್ದಾರೆ. ಮಗನ ಜನ್ಮದಿನದಂದೇ ತಾಯಿ ಇಹಲೋಕ ತ್ಯಜಿಸಿದ್ದು, ರಾಣಾ ಕುಟುಂಬದ ದುಃಖವನ್ನು ಇಮ್ಮಡಿಗೊಳಿಸಿದೆ. 

Read Full Story
06:43 AM (IST) Jun 29

India Latest News Live 29 June 2026ಇರಾನ್-ಅಮೆರಿಕ ಸಂಘರ್ಷ - ಗಲ್ಫ್‌ನಲ್ಲಿ ಮತ್ತೆ ಯುದ್ಧದ ಛಾಯೆ, ಪರಸ್ಪರ ಸರ್ವನಾಶದ ಎಚ್ಚರಿಕೆ

ಹೋರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಇರಾನ್‌ನ 10 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಅಮೆರಿಕದ ಮಿತ್ರರಾಷ್ಟ್ರಗಳಾದ ಬಹ್ರೇನ್‌ ಮತ್ತು ಕುವೈತ್‌ ಮೇಲೆ ಆಕ್ರಮಣ ಮಾಡಿದ್ದು, ಎರಡೂ ದೇಶಗಳು ಪರಸ್ಪರ ಸರ್ವನಾಶದ ಎಚ್ಚರಿಕೆ ನೀಡಿವೆ.
Read Full Story
06:36 AM (IST) Jun 29

India Latest News Live 29 June 2026ಭೂಮಿಗೆ ಬೀಳ್ತಿರೋ ದೂರದರ್ಶಕ ರಕ್ಷಣೆಗೆ ನಾಸಾ ₹283 ಕೋಟಿ ಖರ್ಚು! ಸ್ಪೋಟಗೊಳ್ಳುವ ಆತಂಕ

ಹೆಚ್ಚುತ್ತಿರುವ ತಾಪಮಾನದಿಂದಾಗಿ ಭೂಮಿಯ ಕೆಳಕಕ್ಷೆಯಲ್ಲಿರುವ ನಾಸಾದ 'ಸ್ವಿಫ್ಟ್‌' ದೂರದರ್ಶಕವು ಕೆಳಗೆ ಸರಿಯುತ್ತಿದ್ದು, ಭೂಮಿಗೆ ಬೀಳುವ ಅಪಾಯದಲ್ಲಿದೆ. ಈ ಅನಾಹುತವನ್ನು ತಪ್ಪಿಸಲು, ನಾಸಾ 'ಲಿಫ್ಟ್‌' ಎಂಬ ರೊಬೋಟಿಕ್‌ ಬಾಹ್ಯಾಕಾಶ ನೌಕೆಯನ್ನು ಬಳಸಿ, ಸ್ವಿಫ್ಟ್‌ನ ಕಕ್ಷೆಯನ್ನು ಎತ್ತರಕ್ಕೆ ಏರಿಸುವ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.
Read Full Story
05:41 AM (IST) Jun 29

India Latest News Live 29 June 2026ರಾಮಮಂದಿರ ಸಿಬ್ಬಂದಿ ಆಸ್ತಿಯಲ್ಲಿ ಎಷ್ಟು ಹೆಚ್ಚಳ? ಬೆಚ್ಚಿಬೀಳಿಸುವ ಅಂಕಿ ಅಂಶ ಬಹಿರಂಗ

ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ದೋಚಿದ ಆರೋಪ ಕೇಳಿಬಂದಿದೆ. ಹಣ ಎಣಿಕೆ ಕೆಲಸದಲ್ಲಿದ್ದ ಸಿಬ್ಬಂದಿ ಅತಿ ಕಡಿಮೆ ಅವಧಿಯಲ್ಲಿ ಐಷಾರಾಮಿ ಕಾರು, ಮನೆ ಖರೀದಿಸಿದ್ದು, ಈ ಅಕ್ರಮದ ಬಗ್ಗೆ ಟ್ರಸ್ಟ್‌ಗೆ ಮೊದಲೇ ಅರಿವಿದ್ದರೂ ನಿರ್ಲಕ್ಷ್ಯ ವಹಿಸಿತ್ತು ಎಂಬ ಆರೋಪವೂ ಇದೆ.
Read Full Story
05:33 AM (IST) Jun 29

India Latest News Live 29 June 2026ಬಿಸಿಗಾಳಿಗೆ ನದಿಗಳೇ ಬಿಸಿ, ಫ್ರಾನ್ಸ್‌ನಲ್ಲಿ 1300ಕ್ಕೂಅಧಿಕ ಸಾವು; ತತ್ತರಿಸಿದ ಯುರೋಪ್

ಯುರೋಪ್ ದೇಶಗಳು ಕಳೆದ ಎರಡು ವಾರಗಳಿಂದ ತೀವ್ರ ಬಿಸಿಗಾಳಿಯಿಂದ ತತ್ತರಿಸಿದ್ದು, ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಈ ಐತಿಹಾಸಿಕ ಉಷ್ಣಾಂಶದಿಂದಾಗಿ ಫ್ರಾನ್ಸ್ ಸೇರಿದಂತೆ ಹಲವೆಡೆ 1300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು ಅಣು ಸ್ಥಾವರವನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story