- Home
- Sports
- Cricket
- ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್ ಗವಾಸ್ಕರ್
ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್ ಗವಾಸ್ಕರ್
Sunil Gavaskar on Vaibhav Suryavanshi:15 ವರ್ಷದ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ ಮುಂಬರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಿಂದಲೇ ಆಡುವ ಟೀಂಗೆ (Playing XI) ಸೇರಿಸಿಕೊಳ್ಳಬೇಕು ಮಾಜಿ ಕ್ರಿಕೆಟರ್ ಸುನಿಲ್ ಗಾವಸ್ಕರ್ ಅವರು ಹೇಳಿದ್ದಾರೆ.

ಸೆಂಚುರಿ ಹತ್ತಿರ ಹೋಗಿದ್ದ ವೈಭವ್ ಸೂರ್ಯವಂಶಿ
ಐಪಿಎಲ್ 2026ನಲ್ಲಿ ವೈಭವ್ ಸೂರ್ಯವಂಶಿ ಬ್ಯಾಟ್ ಅಬ್ಬರ ಹೇಗಿದೆ ಎಂದು ಇಡೀ ವಿಶ್ವವೇ ನೋಡಿದೆ. ಬೌಲರ್ ಯಾರಾದರೇನು ನಾನು ಹೊಡೆಯೋದು ಸಿಕ್ಸ್, ಫೋರ್ ಎಂದು ವೈಭವ್ ಸೂರ್ಯವಂಶಿ ಸೆಂಚುರಿ ಬಾರಿಸಲು ರೆಡಿಯಾಗಿದ್ದರು, ಆದರೆ ಸೆಂಚುರಿ ಹತ್ತಿರಕ್ಕೆ ಹೋದರೂ ಸೆಂಚುರಿ ಹೊಡೆಯಲು ಜಸ್ಟ್ ಮಿಸ್ ಮಾಡಿಕೊಂಡಿದ್ದರು.
ವೈಭವ್ಗೆ ಅವಕಾಶವಿಲ್ಲ
ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ತಂಡ ಹೀನಾಯ ಪ್ರದರ್ಶನ ಅನುಭವಿಸಿತ್ತು. 0-2 ರ ವೈಟ್ವಾಶ್ ಸೋಲು ಕಂಡಿತ್ತು. ಇದಾದ ಬಳಿಕ ಗವಾಸ್ಕರ್ ಹೀಗೆ ಹೇಳಿದ್ದಾರೆ. ಭಾರತದ ಯುವ ಆಟಗಾರರಿಗೆ ಆಟ ಆಡಲು ಇದು ಒಳ್ಳೆಯ ಅವಕಾಶ ಆಗಿತ್ತು. ಐರ್ಲೆಂಡ್ ಸರಣಿಯಲ್ಲಿ ಮಾತ್ರ ವೈಭವ್ಗೆ ಅವಕಾಶ ಸಿಗಲಿಲ್ಲ. ಇದಕ್ಕೆ ಗವಾಸ್ಕರ್ ಬೇಸರ ಹೊರಹಾಕಿದ್ದಾರೆ.
ಸುನೀಲ್ ಗವಾಸ್ಕರ್ ಏನಂದ್ರು?
ಸುನೀಲ್ ಗವಾಸ್ಕರ್, "ಕಳೆದ ಒಂದು ತಿಂಗಳಿನಿಂದ ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್ ಪರಿಗಣಿಸಿಐರ್ಲೆಂಡ್ನ ಎರಡೂ ಪಂದ್ಯಗಳಲ್ಲಿ ಆಟ ಆಡಲು ಅವಕಾಶ ನೀಡಬೇಕು ಎಂದು ಹೇಳುತ್ತಿದ್ದೆ. ಒಂದು ಮ್ಯಾಚ್ನಲ್ಲಿ ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರೆ ಗೆಲ್ಲಬಹುದಿತ್ತು ಎಂದಲ್ಲ, 10-15 ರನ್ಗಳಿಗೆ ಔಟ್ ಆಗಿದ್ದರೂ ಪರವಾಗಿಲ್ಲ. ಯುವ ಆಟಗಾರರನ್ನು ಪರೀಕ್ಷಿಸಲು ಇದು ಸೂಪರ್ ಟೈಮ್ ಆಗಿತ್ತು" ಎಂದಿದ್ದಾರೆ.
ಮುಂದೆ ಅವಕಾಶ ಕೊಡಿ
"ಜುಲೈ 1 ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಫಸ್ಟ್ ಮ್ಯಾಚ್ನಲ್ಲಿ ಡೈರೆಕ್ಟ್ ಆಗಿ ಅವಕಾಶ ನೀಡಬೇಕು. ಈಗ ಯಾರು ಫಾರ್ಮ್ನಲ್ಲಿ ಇಲ್ಲವೋ ಅವರನ್ನು ತೆಗೆದು, ಆ ಜಾಗಕ್ಕೆ ವೈಭವ್ಗೆ ಅವಕಾಶ ಕೊಡಬೇಕು" ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

