- Home
- News
- India News
- India Latest News Live: ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್ ಹೆಡ್ ಆಫೀಸ್ ಪುನರ್ ನಿರ್ಮಾಣ; ಪಾಕ್ ಸರ್ಕಾರದಿಂದ ₹25 ಕೋಟಿ
India Latest News Live: ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್ ಹೆಡ್ ಆಫೀಸ್ ಪುನರ್ ನಿರ್ಮಾಣ; ಪಾಕ್ ಸರ್ಕಾರದಿಂದ ₹25 ಕೋಟಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಬೆಂಬಲಕ್ಕೆ ನಿಲ್ಲುವ ತಮ್ಮ ಮಾತುಗಳನ್ನು ಕೃತಿಯಲ್ಲಿ ತೋರಬೇಕಾದರೆ, ಮಹಿಳಾ ಮೀಸಲು ಮಸೂದೆಗೆ ಬೆಂಬಲ ನೀಡಬೇಕು ಹಾಗೂ ತಮ್ಮ ಪಕ್ಷದ ಕಚೇರಿಯಲ್ಲಿ ದುರ್ಗಾದೇವಿಯ ಸ್ತುತಿಯನ್ನು ಒಳಗೊಂಡಿರುವ ‘ವಂದೇ ಮಾತರಂ’ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.
ಪುಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರೊಂದಿಗೆ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಪುರುಷಪ್ರಧಾನ ವ್ಯವಸ್ಥೆಯನ್ನು ಟೀಕಿಸಿ, ಮಹಿಳೆಯರ ಪರ ಧ್ವನಿ ಎತ್ತಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಇರಾನಿ, ‘ಮಹಿಳೆಯರ ಕುರಿತು ಆಡಿದ ಮಾತುಗಳನ್ನು ರಾಹುಲ್ ಕ್ರಿಯೆಯಲ್ಲಿ ತೋರಬೇಕಾದರೆ, ಮಹಿಳೆಯರಿಗೆ ತಕ್ಷಣವೇ ಮೀಸಲಾತಿ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಬೇಕು’ ಎಂದರು.
India Latest News Live 24 August 2026ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್ ಹೆಡ್ ಆಫೀಸ್ ಪುನರ್ ನಿರ್ಮಾಣ; ಪಾಕ್ ಸರ್ಕಾರದಿಂದ ₹25 ಕೋಟಿ
India Latest News Live 24 August 2026Jobs - ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! ಆರ್ಟಿಐ ಅರ್ಜಿಯಲ್ಲಿ ಮಾಹಿತಿ ಬಯಲು
India Latest News Live 24 August 2026ಜಿರಳೆ ಹೋರಾಟದಿಂದ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಸಿಕ್ತು ಹೊಸ ಕಟ್ಟಡ
India Latest News Live 24 August 20262027ರ ಸಪ್ತರಾಜ್ಯ ಸಮರ - ಬಿಜೆಪಿಯಿಂದ ರಹಸ್ಯ ರಣತಂತ್ರ! ಜೆನ್ ಝೀ ಸೆಳೆಯುವತ್ತ ಚರ್ಚೆ
India Latest News Live 24 August 2026ಮಂಗಳೂರಿಗಾಗಿ ಕೇರಳಂ ಸಂಸದರಿಂದ ಓಣಂ ಉಪವಾಸ; ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಆಕ್ರೋಶ
India Latest News Live 24 August 2026ದಿಲ್ಲಿಯಲ್ಲಿ ಕಾರು ಅಪಘಾತ - ಶಾಸಕ ಅಭಯ್ ಪಾಟೀಲ್ ಪ್ರಾಣಾಪಾಯದಿಂದ ಪಾರು
ಶನಿವಾರ ರಾತ್ರಿ 9:30ರ ವೇಳೆಗೆ ಲಕ್ಷ್ಮೀ ನಗರದಿಂದ ಐಟಿಒ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ. ಇನ್ನೋವಾ ಕಾರಿನಲ್ಲಿ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಹಾಗೂ ಕಿರಾರಿ ಶಾಸಕ ಅನಿಲ್ ಝಾ ಪ್ರಯಾಣಿಸುತ್ತಿದ್ದರು.