11:01 PM (IST) Mar 20

India Latest News Live 20 March 2026 Breaking - ರೇಮಂಡ್‌ ಗ್ರೂಪ್‌ ಮಾಲೀಕ ಗೌತಮ್‌ ಸಿಂಘಾನಿಯಾ ಇದ್ದ ಬೋಟ್‌ ಮಾಲ್ಡೀವ್ಸ್‌ನಲ್ಲಿ ಮುಳುಗಡೆ!

ಮಾಲ್ಡೀವ್ಸ್ ಬಳಿ ನಡೆದ ಸ್ಪೀಡ್ ಬೋಟ್ ಅಪಘಾತದಲ್ಲಿ ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ದುರಂತದಲ್ಲಿ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.
Read Full Story
10:52 PM (IST) Mar 20

India Latest News Live 20 March 2026 'ಬುರ್ಖಾ ಧರಿಸಿದ್ದೆ, ಆದ್ರೂ ನನ್ನ ನೋಡಿಕೊಂಡೇ ಹಸ್ತಮೈಥುನ..' ರೈಲ್ವೆ ನಿಲ್ದಾಣದ 'ಅಸಹ್ಯ' ವಿಡಿಯೋ ಮಾಡಿದ ಯುವತಿ!

ಕೇರಳದ ರೈಲ್ವೇ ನಿಲ್ದಾಣದಲ್ಲಿ ಬುರ್ಖಾ ಧರಿಸಿದ್ದ ಯಾಸ್ಮಿನ್ ಎಂಬ ಯುವತಿಯ ಮುಂದೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಧೈರ್ಯವಾಗಿ ಚಿತ್ರೀಕರಿಸಿದ ಯುವತಿ, 'ದೌರ್ಜನ್ಯಕ್ಕೆ ಬಟ್ಟೆಯೇ ಕಾರಣ' ಎನ್ನುವವರಿಗೆ ಉತ್ತರ ನೀಡಲು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

Read Full Story
10:46 PM (IST) Mar 20

India Latest News Live 20 March 2026 ಕೊಲ್ಲಿ ದೇಶಗಳ ಬಿಕ್ಕಟ್ಟು - ಹೈದರಾಬಾದ್ ನಲ್ಲಿ ರಿಯಲ್ ಎಸ್ಟೇಟ್ ಜಂಪ್‌, ಮನೆ, ಫ್ಲಾಟ್‌ ಖರೀದಿ ದುಬಾರಿ!

ಜಾಗತಿಕ ಹಡಗು ಬಿಕ್ಕಟ್ಟಿನಿಂದಾಗಿ ಹೈದರಾಬಾದ್‌ನಲ್ಲಿ ನಿರ್ಮಾಣ ಸಾಮಗ್ರಿಗಳ ಪೂರೈಕೆ ವಿಳಂಬವಾಗಿದ್ದು, ಸಾಗಣೆ ವೆಚ್ಚ ಹೆಚ್ಚಾಗಿದೆ. ಉಕ್ಕು ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳ ಬೆಲೆ ಏರಿಕೆಯಿಂದಾಗಿ ನಿರ್ಮಾಣ ವೆಚ್ಚ ದುಬಾರಿಯಾಗಿದ್ದು, ಇದು ಫ್ಲಾಟ್‌ಗಳ ಬೆಲೆ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.
Read Full Story
10:30 PM (IST) Mar 20

India Latest News Live 20 March 2026 Balakrishna - ಸಿಂಹ ನಗೋದಾ? ಹುಚ್ಚು ಬಿಟ್ರೆ! ತಂದೆ ಎನ್‌ಟಿಆರ್ ಜೊತೆಗಿನ ಸಿನಿಮಾ ಬಗ್ಗೆಯೇ ಬಾಲಯ್ಯ ಕಾಮಿಡಿ

ನಂದಮೂರಿ ಬಾಲಕೃಷ್ಣ ಅವರು 'ಸಿಂಹ' ಹೆಸರಿನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಹಿಟ್ ಆಗಿವೆ. ಆದರೆ, ತಮ್ಮ ತಂದೆ ಎನ್‌ಟಿಆರ್ ಜೊತೆ ನಟಿಸಿದ್ದ ಒಂದು ಸಿನಿಮಾ ಮಾತ್ರ ಫ್ಲಾಪ್ ಆಗಿತ್ತು. ಈಗ ಅದೇ ಸಿನಿಮಾ ಬಗ್ಗೆ ಬಾಲಯ್ಯ ತಮಾಷೆ ಮಾಡಿದ್ದಾರೆ.

Read Full Story
10:27 PM (IST) Mar 20

India Latest News Live 20 March 2026 ನಿಗೂಢ ಸೌರಮಂಡಲ - ವಜ್ರದ ಮಳೆಯಿಂದ ಹಿಡಿದು ನೀರಿನಲ್ಲಿ ತೇಲುವ ಗ್ರಹದವರೆಗೆ 10 ಅಚ್ಚರಿಯ ಸಂಗತಿಗಳು!

ಸೌರಮಂಡಲವು ಪಠ್ಯಪುಸ್ತಕಗಳಲ್ಲಿ ವಿವರಿಸುವುದಕ್ಕಿಂತ ಹೆಚ್ಚು ವಿಚಿತ್ರ ಮತ್ತು ಕ್ರಿಯಾತ್ಮಕವಾಗಿದೆ. ಶುಕ್ರ ಗ್ರಹದ ಅತಿಯಾದ ತಾಪಮಾನ, ನೆಪ್ಚೂನ್‌ನಲ್ಲಿ ವಜ್ರದ ಮಳೆ, ಮತ್ತು ಸೂರ್ಯನು ಸೌರಮಂಡಲದ ಬಹುತೇಕ ದ್ರವ್ಯರಾಶಿಯನ್ನು ಹೊಂದಿರುವುದು ಸೇರಿದಂತೆ ಹಲವು ನಂಬಲಾಗದ ರಹಸ್ಯ ಇಲ್ಲಿದೆ.

Read Full Story
09:21 PM (IST) Mar 20

India Latest News Live 20 March 2026 ಓರಲ್ ಸೆ*ಕ್ಸ್‌ನಿಂದ ಬರುತ್ತಂತೆ ಬಾಯಿ ಕ್ಯಾನ್ಸರ್; ತಡೆಗಟ್ಟಲು ಬಂದಿದೆ ನಾಲಿಗೆಗೆ ಹಾಕುವಂಥ ಕಾಂಡೋಮ್‌!

ಓರಲ್ ಸೆ*ಕ್ಸ್ ಮೂಲಕ ಹರಡುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ (HPV) ಬಾಯಿ ಮತ್ತು ಗಂಟಲಿನ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಇತ್ತೀಚಿನ ಅಧ್ಯಯನಗಳು ದೃಢಪಡಿಸಿವೆ. ಈ ಅಪಾಯವನ್ನು ತಗ್ಗಿಸಲು, ಆರೋಗ್ಯ ತಜ್ಞರು ಕಾಂಡೋಮ್ ಮತ್ತು 'ಡೆಂಟಲ್ ಡ್ಯಾಮ್'ಗಳಂತಹ ಸುರಕ್ಷತಾ ಕ್ರಮಗಳನ್ನು ಬಳಸಲು ಶಿಫಾರಸು ಮಾಡಿದ್ದಾರೆ. 

Read Full Story
08:47 PM (IST) Mar 20

India Latest News Live 20 March 2026 ಭೀಕರ ರಸ್ತೆ ಅಪಘಾತ - ಗರ್ಭಿಣಿ, ಹಸುಗೂಸು ಸೇರಿ ಎಂಟು ಮಂದಿ ದುರ್ಮರಣ! ನಿಯಂತ್ರಣ ತಪ್ಪಿ ನುಗ್ಗಿದ ಬಸ್

ತಮಿಳುನಾಡಿನ ಸೇಲಂ-ಕೊಯಮತ್ತೂರು ಹೆದ್ದಾರಿಯಲ್ಲಿ ಸರ್ಕಾರಿ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಗರ್ಭಿಣಿ ಮತ್ತು 11 ತಿಂಗಳ ಹಸುಗೂಸು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story
08:41 PM (IST) Mar 20

India Latest News Live 20 March 2026 ರೀಲ್ಸ್​ ಹುಚ್ಚಿನ ಪರಮಾವಧಿ - ಪಿಜ್ಜಾ ಬಾಯ್​ಗೆ ಟಿಪ್ಸ್​ ಎಂದು ಅಂಗಾಂಗ ತೋರಿ ಯುವತಿಯರ ವಿಡಿಯೋ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವ ಹುಚ್ಚಿಗೆ ಬಿದ್ದ ಯುವತಿಯರು ಪಿಜ್ಜಾ ಡೆಲಿವರಿ ಹುಡುಗನಿಗೆ ಪ್ರಾಂಕ್ ಮಾಡಿದ್ದಾರೆ. ಟಿಪ್ಸ್ ಕೊಡುವ ನೆಪದಲ್ಲಿ ತಮ್ಮ ಅಂಗಾಂಗ ಪ್ರದರ್ಶನ ಮಾಡಿದ್ದು, ಈ ವಿಡಿಯೋ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದರೂ, ಈ ಮೂಲಕ ಹೆಚ್ಚು ವೀಕ್ಷಣೆ ಪಡೆದು ತಮ್ಮ ಉದ್ದೇಶವನ್ನು ಯುವತಿಯರು ಸಾಧಿಸಿದ್ದಾರೆ.
Read Full Story
08:39 PM (IST) Mar 20

India Latest News Live 20 March 2026 Sobhita Dhulipala - ಆ ಎಲ್ಲಾ ಗಾಸಿಪ್‌ಗಳಿಗೆ ಫೋಟೋ ಮೂಲಕವೇ ಫುಲ್ ಕ್ಲಾರಿಟಿ ಕೊಟ್ಟ ಶೋಭಿತಾ!

ತಮ್ಮ ಬಗ್ಗೆ ಹಬ್ಬಿದ್ದ ಗಾಸಿಪ್‌ಗಳಿಗೆ ನಟಿ ಶೋಭಿತಾ ಧೂಳಿಪಾಲ ಬ್ರೇಕ್ ಹಾಕಿದ್ದಾರೆ. ಗದ್ದರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಶೋಭಿತಾ ಬಗ್ಗೆ ಹಬ್ಬಿದ್ದ ಆ ವದಂತಿಗಳು ಯಾವುವು? ಇಲ್ಲಿದೆ ಪೂರ್ತಿ ವಿವರ.

Read Full Story
08:24 PM (IST) Mar 20

India Latest News Live 20 March 2026 'ನ್ಯಾಟೋ ನಾಯಕರು ಹೇಡಿಗಳು..' ಇರಾನ್‌ ವಿರುದ್ಧ ಸಹಾಯಕ್ಕೆ ಬರದ ಆಪ್ತರ ವಿರುದ್ಧ ಟ್ರಂಪ್‌ ರಣಾಕ್ರೋಶ!

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷತೆಗೆ ಸಹಾಯ ಮಾಡದ ನ್ಯಾಟೋ ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಗತಿಕ ತೈಲ ಬೆಲೆ ಏರಿಕೆಗೆ ಮಿತ್ರರಾಷ್ಟ್ರಗಳ ನಿರಾಸಕ್ತಿಯೇ ಕಾರಣ ಎಂದು ದೂಷಣೆ ಮಾಡಿದ್ದಾರೆ.

Read Full Story
08:15 PM (IST) Mar 20

India Latest News Live 20 March 2026 40 ಕೋಟಿ ಠೇವಣಿ, 20 ಕೋಟಿ ವಿಥ್ ಡ್ರಾ, 50 ಆಸ್ತಿ - ತೆಲಂಗಾಣ, ಆಂಧ್ರದಾದ್ಯಂತ ಡಾ.ನಮ್ರತಾ ಸರೊಗಸಿ ದಂಧೆ ಪತ್ತೆ!

ಅಕ್ರಮ ಬಾಡಿಗೆ ತಾಯ್ತನ ಮತ್ತು ಶಿಶು ಮಾರಾಟ ಜಾಲದ ಕುರಿತು ಜಾರಿ ನಿರ್ದೇಶನಾಲಯ (ED) ನಡೆಸಿದ ತನಿಖೆಯಲ್ಲಿ ಭಾರಿ ಹಣಕಾಸು ಅವ್ಯವಹಾರಗಳು ಬೆಳಕಿಗೆ ಬಂದಿವೆ. ಡಾ. ಪಚಿಪಾಲ ನಮೃತಾ ನೇತೃತ್ವದ ಈ ಜಾಲದಲ್ಲಿ ₹40 ಕೋಟಿ ನಗದು ಠೇವಣಿ ಪತ್ತೆಯಾಗಿದ್ದು, ₹29.7 ಕೋಟಿ ಮೌಲ್ಯದ 50ಕ್ಕೂ ಹೆಚ್ಚು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.

Read Full Story
08:06 PM (IST) Mar 20

India Latest News Live 20 March 2026 ಮದ್ವೆ ದಿನ ನಟಿಗೆ ಪತಿ ಯಾರೆಂದೇ ಮರೆತೋಯ್ತು - ಸಹ ನಟನಿಗೆ ತುತ್ತು ತಿನ್ನಿಸೋದಾ? Video Viral

ಮರಾಠಿ ನಟಿಯೊಬ್ಬರು ತಮ್ಮ ಮದುವೆಯ ಊಟದ ಸಮಯದಲ್ಲಿ, ತಮ್ಮ ಪತಿಗೆ ಊಟ ತಿನ್ನಿಸುವ ಬದಲು ಪಕ್ಕದಲ್ಲಿದ್ದ ಸಹನಟನಿಗೆ ತಿನ್ನಿಸಲು ಹೋಗಿದ್ದಾರೆ. ಈ ಎಡವಟ್ಟಿನಿಂದ ಪತಿಗೆ ಕೋಪ ಬಂದಿದ್ದು, ಈ ಫನ್ನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
08:02 PM (IST) Mar 20

India Latest News Live 20 March 2026 ಭವಿಷ್ಯದಲ್ಲಿ ತಂದೆ-ತಾಯಿ ಎರಡೂ ಆಗಲಿರುವ ಸಂಜಯ್‌ ಬಂಗಾರ್‌ ಪುತ್ರಿ ಅನಾಯಾ ಬಂಗಾರ್‌!

ಸಂಜಯ್ ಬಂಗಾರ್ ಅವರ ಪುತ್ರಿ ಅನಾಯಾ ಬಂಗಾರ್, ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಭವಿಷ್ಯದಲ್ಲಿ ತಾಯಿಯಾಗುವ ಕನಸನ್ನು ನನಸಾಗಿಸಲು, ಅವರು ಶಸ್ತ್ರಚಿಕಿತ್ಸೆಗೂ ಮುನ್ನ ತಮ್ಮ ವೀರ್ಯವನ್ನು ಶೇಖರಿಸಿಟ್ಟಿದ್ದು, ಬಾಡಿಗೆ ತಾಯ್ತನದ ಮೂಲಕ ಜೈವಿಕ ಮಗುವನ್ನು ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Read Full Story
07:40 PM (IST) Mar 20

India Latest News Live 20 March 2026 20 ವರ್ಷಗಳ ನಂತರ ತೆರೆ ಮೇಲೆ ಮೋಡಿ ಮಾಡ್ತಾರಾ ಸೂರ್ಯ-ತ್ರಿಷಾ ಜೋಡಿ - ಯಾವುದು ಆ ಸಿನಿಮಾ?

ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕರುಪ್ಪು' ರಿಲೀಸ್ ದಿನಾಂಕ ಘೋಷಣೆಯಾಗಿದೆ. ಆರ್.ಜೆ. ಬಾಲಾಜಿ ನಿರ್ದೇಶನದ ಈ ಚಿತ್ರ ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

Read Full Story
07:33 PM (IST) Mar 20

India Latest News Live 20 March 2026 ಏರ್ ಇಂಡಿಯಾ ಎಡವಟ್ಟು - 7 ಗಂಟೆ ಜರ್ನಿ ಬಳಿಕ ವಾಪಸ್ ಬಂದ 300 ಪ್ರಯಾಣಿಕರಿದ್ದ ವಿಮಾನ - ಆದ ನಷ್ಟವೆಷ್ಟು?

ಏರ್ ಇಂಡಿಯಾದ ಅವಾಂತರವೊಂದು ತಡವಾಗಿ ಬೆಳಕಿಗೆ ಬಂದಿದೆ. 300 ಜನರಿದ್ದ ವಿಮಾನವನ್ನು ತಪ್ಪಾಗಿ ಕೆನಡಾಗೆ ಕಳುಹಿಸಿದ್ದರಿಂದ ಆ ವಿಮಾನವೂ 7 ಗಂಟೆಗಳ ಕಾಲ ನಿರಂತರ ಪ್ರಯಾಣ ಮಾಡಿ ಚೀನಾ ಮೂಲಕ ವಾಪಸ್ ಬಂದಿದ್ದು, ಇದರಿಂದ ಏರ್ ಇಂಡಿಯಾಗೆ ಭಾರಿ ನಷ್ಟ ಉಂಟಾಗಿದೆ.

Read Full Story
07:03 PM (IST) Mar 20

India Latest News Live 20 March 2026 ಮಧುಮೇಹಿಗಳಿಗೆ ಇನ್ನು ಚಿಂತೆಯೇ ಇಲ್ಲ, ಜಗತ್ತಿನ ಅತ್ಯಂತ ಪ್ರಖ್ಯಾತ ಡಯಾಬಿಟಿಸ್‌ ಡ್ರಗ್‌ ಬೆಲೆಯಲ್ಲಿ ಭಾರತದಲ್ಲಿ ಭಾರೀ ಇಳಿಕೆ!

ಭಾರತದಲ್ಲಿ 'ಸೆಮಾಗ್ಲುಟೈಡ್' ಔಷಧದ ಪೇಟೆಂಟ್ ಮುಕ್ತಾಯಗೊಂಡಿದ್ದರಿಂದ ಅದರ ಬೆಲೆ ಶೇ. 50-70ರಷ್ಟು ಕುಸಿದಿದೆ. ಮಧುಮೇಹ, ತೂಕ ಇಳಿಕೆ, ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಈ ಔಷಧವನ್ನು ಹಲವು ಭಾರತೀಯ ಕಂಪನಿಗಳು ಮಾರುಕಟ್ಟೆಗೆ ತರುತ್ತಿವೆ, ಆದರೆ ವೈದ್ಯರ ಸಲಹೆ ಇಲ್ಲದೆ ಬಳಸುವುದು ಅಪಾಯಕಾರಿ.
Read Full Story
06:52 PM (IST) Mar 20

India Latest News Live 20 March 2026 ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆ, ಮುಖ್ಯ ಹಣಕಾಸು ಅಧಿಕಾರಿ ಶ್ರೀರಾಮ್ ರಾಜೀನಾಮೆ!

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಗ್ರೂಪ್ ಸಿಎಫ್‌ಒ ಶ್ರೀರಾಮ್ ವೆಂಕಟರಾಮನ್ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ. ಕಂಪನಿಯ ಐಪಿಒ ಯೋಜನೆಗಳ ನಡುವೆ ಈ ಮಹತ್ವದ ಬದಲಾವಣೆ ನಡೆದಿದ್ದು, ರವಿ ಅಯ್ಯರ್ ಅವರು ಮಧ್ಯಂತರವಾಗಿ ಹಣಕಾಸು ವಿಭಾಗವನ್ನು ನೋಡಿಕೊಳ್ಳಲಿದ್ದಾರೆ.
Read Full Story
06:19 PM (IST) Mar 20

India Latest News Live 20 March 2026 ಅಧಿಕಪ್ರಸಂಗಿ ಅಮೆರಿಕಾದ ಮೇಲೆ ಐರೋಪ್ಯ ರಾಷ್ಟ್ರಗಳ ಸಿಟ್ಟು - USಗೆ ಶಸ್ತ್ರಾಸ್ತ್ರ ರಫ್ತಿಗೆ ಅನುಮೋದನೆ ನಿರಾಕರಿಸಿದ ಸ್ವಿಟ್ಜರ್ಲೆಂಡ್

ಅಮೆರಿಕಾ ಇಸ್ರೇಲ್ ನಡುವಣ ಯುದ್ಧ ಸತತ 21ನೇ ದಿನವೂ ಮುಂದುವರೆದಿದೆ. ತನಗೆ ಸಂಬಂಧವಿಲ್ಲದಿದ್ದರೂ ಇರಾನ್ ಮೇಲೆ ಯುದ್ಧಕ್ಕಿಳಿದು ಇಡೀ ಪ್ರಪಂಚದ ಆರ್ಥಿಕತೆಯನ್ನೇ ಬುಡಮೇಲಾಗುವಂತೆ ಮಾಡಿದ ಅಮೆರಿಕಾದ ಈ ವರ್ತನೆ ವಿರುದ್ಧ ಈಗ ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡ ಸಿಟ್ಟಾಗಿವೆ.

Read Full Story
06:07 PM (IST) Mar 20

India Latest News Live 20 March 2026 ಬಿಸಿಸಿಐ ಮೇಲೆ ವರ್ಣಭೇದ ನೀತಿ ಆರೋಪ ಮಾಡಿ ಹಠಾತ್‌ ನಿವೃತ್ತಿ ಹೇಳಿದ ಪ್ರಖ್ಯಾತ ಕ್ರಿಕೆಟ್‌ ವಿಶ್ಲೇಷಕ!

ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 23 ವರ್ಷಗಳ ಕಾಮೆಂಟರಿ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಗಮನದ ವೇಳೆ, ಅವರು ಬಿಸಿಸಿಐ ಕಾಮೆಂಟರಿ ಪ್ಯಾನಲ್‌ನಲ್ಲಿ ತಮಗಾದ ವರ್ಣಭೇದ ಮತ್ತು ವ್ಯವಸ್ಥಿತ ಪಕ್ಷಪಾತದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 

Read Full Story
06:01 PM (IST) Mar 20

India Latest News Live 20 March 2026 Pawan Kalyan House - ಪವನ್ ಮನೆ ಬೆಲೆ ಎಷ್ಟು? ಹೈದರಾಬಾದ್ ಬಂಗಲೆ, ಫಾರ್ಮ್‌ಹೌಸ್ ವಿಶೇಷತೆಗಳೇನು?

ಪವರ್ ಸ್ಟಾರ್ ಪವನ್ ಕಲ್ಯಾಣ್ ಹೈದರಾಬಾದ್‌ನ ಜೂಬ್ಲಿ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಇದು ದೇಶದ ಅತ್ಯಂತ ದುಬಾರಿ ಸೆಲೆಬ್ರಿಟಿ ಏರಿಯಾಗಳಲ್ಲಿ ಒಂದು. ಸುಮಾರು 6,300 ಚದರ ಅಡಿ ವಿಸ್ತೀರ್ಣದ ಈ ಬಂಗಲೆಯನ್ನು ಅವರು ಎಷ್ಟು ಕೋಟಿಗೆ ಖರೀದಿಸಿದ್ದಾರೆ ಗೊತ್ತಾ?

Read Full Story