11:14 PM (IST) Oct 17

India Latest News Live ಮತ್ತೆ ಭುಗಿಲೆದ್ದ ಭಾರತ-ಬಾಂಗ್ಲಾ ಗಡಿ ವಿವಾದ - ತ್ರಿಪುರಾದಲ್ಲಿ 3 ಬಾಂಗ್ಲಾದೇಶಿಗರ ಹತ್ಯೆ!

India Bangladesh Diplomatic Tensions Rise: ಮತ್ತೆ ಭುಗಿಲೆದ್ದ ಭಾರತ-ಬಾಂಗ್ಲಾ ಗಡಿ ವಿವಾದ: ತ್ರಿಪುರಾದಲ್ಲಿ 3 ಬಾಂಗ್ಲಾದೇಶಿಗರ ಹತ್ಯೆ! ತ್ರಿಪುರಾದ ಬಾಂಗ್ಲಾದೇಶ ಗಡಿ ಗ್ರಾಮದಲ್ಲಿ ಒಬ್ಬ ಭಾರತೀಯ ಮತ್ತು ಮೂವರು ಬಾಂಗ್ಲಾದೇಶಿ ಪ್ರಜೆಗಳು ಕೊಲ್ಲಲ್ಪಟ್ಟ ನಂತರ ರಾಜತಾಂತ್ರಿಕ ವಿವಾದ ಭುಗಿಲೆದ್ದಿದೆ. 

Read Full Story
11:08 PM (IST) Oct 17

India Latest News Live 148 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಯಾರೂ ಮಾಡಲಾಗದ ದಾಖಲೆಯ ಸನಿಹ ವಿರಾಟ್‌ ಕೊಹ್ಲಿ!

Virat Kohli Chasing 148-Year-Old Unique Record ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಐತಿಹಾಸಿಕ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ, ಅವರು ಏಕದಿನ ಮಾದರಿಯಲ್ಲಿ 52 ಶತಕಗಳನ್ನು ಪೂರೈಸಲಿದ್ದಾರೆ.

Read Full Story
10:23 PM (IST) Oct 17

India Latest News Live ಚೆನ್ನೈನ ರಸ್ತೆಗಳಿಗೆ ಇಟ್ಟ ಜಾತಿಸೂಚಕ ಹೆಸರುಗಳನ್ನು ತೆಗೆಯಲು ಮುಂದಾದ ತಮಿಳುನಾಡು ಸರ್ಕಾರ!

Tamil Nadu Govt to Remove Caste Names from 3400+ Chennai Roads ಗ್ರೇಟರ್ ಚೆನ್ನೈ ಕಾರ್ಪೊರೇಷನ್ ನಗರದ 3400ಕ್ಕೂ ಹೆಚ್ಚು ಜಾತಿ ಆಧಾರಿತ ರಸ್ತೆಗಳ ಹೆಸರುಗಳನ್ನು ಬದಲಿಸಲು ನಿರ್ಧರಿಸಿದೆ.  ಈ ಉಪಕ್ರಮವು ಸಾರ್ವಜನಿಕ ಸ್ಥಳಗಳಿಂದ ಜಾತಿ ಗುರುತುಗಳನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.

Read Full Story
09:34 PM (IST) Oct 17

India Latest News Live ಗೆದ್ದ ಕಪ್‌ ಸಿಗದಿದ್ರೆ ಏನಂತೆ.. ಏಷ್ಯಾಕಪ್‌ನಿಂದ ಪಾಕಿಸ್ತಾನಕ್ಕೆ 100 ಕೋಟಿಯ ಶಾಕ್‌ ನೀಡಿದ ಬಿಸಿಸಿಐ!

BCCI Earns ₹100 Crore Profit from Asia Cup ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದರೂ, ಮೊಹ್ಸಿನ್ ನಖ್ವಿ ಜೊತೆಗಿನ ವಿವಾದದಿಂದಾಗಿ ಭಾರತ ತಂಡಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಆದರೆ, ಈ ಪಂದ್ಯಾವಳಿಯಿಂದ ಬಿಸಿಸಿಐ 100 ಕೋಟಿ ರೂಪಾಯಿಗಳ ಭಾರಿ ಆದಾಯ ಗಳಿಸಿದೆ.

Read Full Story
09:03 PM (IST) Oct 17

India Latest News Live ಕೇಂದ್ರ ಸರ್ಕಾರಕ್ಕೆ ಭಾರೀ ಯಶಸ್ಸು, ಮೆಹುಲ್‌ ಚೋಕ್ಸಿ ಭಾರತಕ್ಕೆ ಗಡಿಪಾರು ಆದೇಶ ನೀಡಿದ ಬೆಲ್ಜಿಯಂ ಕೋರ್ಟ್‌!

Belgian Court Orders Extradition of Fugitive Mehul Choksi to India ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಆಂಟ್ವೆರ್ಪ್ ನ್ಯಾಯಾಲಯ ಆದೇಶಿಸಿದೆ. ಭಾರತದ ಕೋರಿಕೆಯ ಮೇರೆಗೆ ಬೆಲ್ಜಿಯಂ ಅಧಿಕಾರಿಗಳು ಆತನನ್ನು ಬಂಧಿಸಿದ್ದು ಮಾನ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ. 

Read Full Story
08:42 PM (IST) Oct 17

India Latest News Live ಭೇಟಿ ನೀಡಿದ್ದು ಅದಿನಾ ಮಸೀದಿ ಅಲ್ಲ, ಆದಿನಾಥ ದೇಗುಲ; ಸಂಸದ ಯೂಸುಫ್ ಪಠಾಣ್‌ಗೆ ಬಿಜೆಪಿ ಪಾಠ

ನೀವು ಭೇಟಿ ನೀಡಿದ್ದು ಅದಿನಾ ಮಸೀದಿ ಅಲ್ಲ, ಆದಿನಾಥ ದೇಗುಲ; ಸಂಸದ ಯೂಸುಫ್ ಪಠಾಣ್‌ಗೆ ಬಿಜೆಪಿ ಪಾಠ ಮಾಡಿದೆ. ಟಿಎಂಸಿ ಸಂಸದ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಆದಿನಾಥ ದೇಗುಲ ಮರಳಿ ಪಡೆಯಿರಿ ಅನ್ನೋ ಕೂಗು ಕೇಳಿಬರುತ್ತಿದೆ.

 

Read Full Story
08:39 PM (IST) Oct 17

India Latest News Live ಸ್ವೀಟೋ ಅಥವಾ ಚಿನ್ನವೋ..? ಒಂದು ಕೆಜಿ ಸ್ವೀಟ್‌ಗೆ 1.11 ಲಕ್ಷ ರೂಪಾಯಿ.. ಅಂಥದ್ದೇನಿದೆ ವಿಶೇಷ!

Most Expensive Sweet Swarna Prasadam ರಾಜಸ್ಥಾನದ ಜೈಪುರದಲ್ಲಿ 'ಸ್ವರ್ಣ ಪ್ರಸಾದಂ' ಎಂಬ ವಿಶೇಷ ಸಿಹಿತಿಂಡಿಯನ್ನು ತಯಾರಿಸಲಾಗಿದ್ದು, ಇದರ ಬೆಲೆ ಕೆಜಿಗೆ 1 ಲಕ್ಷ 11 ಸಾವಿರ ರೂಪಾಯಿ. ಚಿನ್ನದ ಬೂದಿ, ಕೇಸರಿ ಮತ್ತು ಪೈನ್ ಬೀಜಗಳಂತಹ ದುಬಾರಿ ಪದಾರ್ಥಗಳಿಂದ ಈ ಸಿಹಿ ತಿಂಡಿ ತಯಾರಿಸಲಾಗಿದೆ.

Read Full Story
08:00 PM (IST) Oct 17

India Latest News Live ಪೂನಾವಾಲ್ಲಾ ಬಳಿಕ ಆರ್‌ಸಿಬಿ ಖರೀದಿಸಲು ಆಸಕ್ತಿ ತೋರಿದ ಗೌತಮ್‌ ಅದಾನಿ!

6 Companies Adani and Poonawalla Interested in Buying RCB ಐಪಿಎಲ್ 2026ಕ್ಕೆ ಮುಂಚಿತವಾಗಿ ಆರ್‌ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡುವ ಸಾಧ್ಯತೆಗಳಿವೆ. ಡಿಯಾಜಿಯೊ ತಂಡವನ್ನು ಖರೀದಿಸಲು ಆದರ್ ಪೂನವಾಲ್ಲಾ, ಜೆಎಸ್‌ಡಬ್ಲ್ಯೂ ಮತ್ತು ಅದಾನಿ ಗ್ರೂಪ್ ಆಸಕ್ತಿ ತೋರಿಸಿವೆ. 

 

Read Full Story
07:22 PM (IST) Oct 17

India Latest News Live ಕೌನ್​ ಬನೇಗಾ ಕರೋರ್​ಪತಿಯಲ್ಲಿ ರೋಚಕ ಕ್ಷಣ - ರಜನಿ ಸ್ಟೈಲ್​ನಲ್ಲಿ Rishab Shetty- ಬೆರಗಾದ ಅಮಿತಾಭ್​

'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ಅವರು ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್​ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಅವರು ರಜನಿಕಾಂತ್ ಅವರಂತೆ ನಡಿಗೆಯನ್ನು ಅನುಕರಿಸಿ ಅಮಿತಾಭ್ ಅವರನ್ನು ಬೆರಗುಗೊಳಿಸಿದರು.  

Read Full Story
06:44 PM (IST) Oct 17

India Latest News Live ಆಹಾರ ಉತ್ಪನ್ನ ಮೇಲೆ ORS ಲೇಬಲ್ ಬಳಕೆ ನಿಷೇಧ, 8 ವರ್ಷಗಳ ಕಾನೂನು ಹೋರಾಟ ಗೆದ್ದ ವೈದ್ಯೆ

ಆಹಾರ ಉತ್ಪನ್ನ ಮೇಲೆ ORS ಲೇಬಲ್ ಬಳಕೆ ನಿಷೇಧ, 8 ವರ್ಷಗಳ ಕಾನೂನು ಹೋರಾಟ ಗೆದ್ದ ವೈದ್ಯೆ, ಹಣ್ಣಿನ ಪಾನೀಯ ಸೇರಿದಂತೆ ಹಲವು ಪಾನಿಯಗಳ ಮೇಲೆ ಒಆರ್‌ಎಸ್ ಎಂದು ಬಳಕೆ ಮಾಡಲಾಗುತ್ತಿದೆ. ಇದೀಗ FSSAI ಮಹತ್ವದ ಆದೇಶ ನೀಡಿದೆ.

Read Full Story
06:41 PM (IST) Oct 17

India Latest News Live ಕೌನ್​ ಬನೇಗಾ ಕರೋರ್​ಪತಿ - ದೇಶದ ಭವಿಷ್ಯದ ಮಾತನಾಡಿ ಪ್ರಧಾನಿಗೇ ಪ್ರಶ್ನೆ ಮಾಡಿದ ಗುಜರಾತ್​ ಬಾಲಕ!

ಕೌನ್​ ಬನೇಗಾ ಕರೋರ್​ಪತಿ ಮಕ್ಕಳ ಸೀಸನ್​ನಲ್ಲಿ, ರುದ್ರ ಚಿಟ್ಟೆ ಎಂಬ ಬಾಲಕ ತನ್ನ ಹಾಸ್ಯ ಪ್ರಜ್ಞೆ ಮತ್ತು ತಿಳುವಳಿಕೆಯಿಂದ ಗಮನ ಸೆಳೆದಿದ್ದಾನೆ. ಆತ್ಮನಿರ್ಭರ ಭಾರತಕ್ಕಾಗಿ ದೇಶದ ಮೊದಲ ಆಪರೇಟಿಂಗ್ ಸಿಸ್ಟಮ್ ರಚಿಸುವ ತನ್ನ ಗುರಿಯನ್ನು ಬಹಿರಂಗಪಡಿಸಿ, ಅಮಿತಾಭ್ ಬಚ್ಚನ್ ಸೇರಿದಂತೆ ಬೆರಗುಗೊಳಿಸಿದ್ದಾನೆ.

Read Full Story
05:15 PM (IST) Oct 17

India Latest News Live ಸಚಿನ್ ತೆಂಡೂಲ್ಕರ್ ಅಪರೂಪದ ದಾಖಲೆ ಉಡೀಸ್ ಮಾಡಲು ಕೊಹ್ಲಿಗೆ ಬೇಕಿದೆ ಒಂದೇ ಒಂದು ಸೆಂಚುರಿ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂಬರುವ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ಮಹತ್ವದ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಒಂದು ಶತಕ ಬಾರಿಸಿದರೆ, ಅವರು ಒಂದೇ ಮಾದರಿಯಲ್ಲಿ 52 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಆಟಗಾರನಾಗಲಿದ್ದಾರೆ.  

Read Full Story
05:13 PM (IST) Oct 17

India Latest News Live BSNL ದೀಪಾವಳಿ ಭರ್ಜರಿ ಆಫರ್, ಕೇವಲ 1 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಇಂಟರ್ನೆಟ್

BSNL ದೀಪಾವಳಿ ಭರ್ಜರಿ ಆಫರ್, ಕೇವಲ 1 ರೂಪಾಯಿಗೆ ಅನ್‌ಲಿಮಿಟೆಡ್ ಕಾಲ್, ಡೇಟಾ ಘೋಷಿಸಲಾಗಿದೆ. ಬಿಎಸ್ಎನ್ಎಲ್ ಬಳಕೆದಾರರು, ಹೊಸ ಗ್ರಾಹಕರಿಗೆ ದೀಪಾವಳಿ ಬೋನಾನ್ಜಾ ಆಫರ್ ನೀಡಲಾಗಿದೆ. ಆಫರ್ ಮಾಹಿತಿ ಇಲ್ಲಿದೆ.

Read Full Story
04:32 PM (IST) Oct 17

India Latest News Live ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ - ಎಷ್ಟು ಗಂಟೆಗೆ ಪಂದ್ಯ ಆರಂಭ? ಯಾವ ಚಾನೆಲ್‌ನಲ್ಲಿ ನೋಡಬಹುದು?

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 19ರಿಂದ 3 ಪಂದ್ಯಗಳ ಸರಣಿ ಆರಂಭವಾಗಲಿದ್ದು, ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ? ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು ನೋಡೋಣ ಬನ್ನಿ.

 

Read Full Story
04:30 PM (IST) Oct 17

India Latest News Live ದೀಪಾವಳಿಗೆ ಗೂಗಲ್ ಮೆಗಾ ಆಫರ್, ಕೇವಲ 11 ರೂಪಾಯಿಗೆ 2ಟಿಬಿ ಸ್ಟೋರೇಜ್

ದೀಪಾವಳಿಗೆ ಗೂಗಲ್ ಮೆಗಾ ಆಫರ್, ಕೇವಲ 11 ರೂಪಾಯಿಗೆ 2ಟಿಬಿ ಸ್ಟೋರೇಜ್ ಘೋಷಿಸಿದೆ. ತಿಂಗಳಿಗೆ 130 ರಿಂದ 210 ರೂಪಾಯಿವರೆಗಿದ್ದ ಸ್ಟೋರೇಜ್ ಪ್ಲಾನ್ ಇದೀಗ 11 ರೂಗೆ ಗೂಗಲ್ ನೀಡುತ್ತಿದೆ. ಆ್ಯಕ್ಟಿವೇಟ್ ಮಾಡುವುದು ಹೇಗೆ?

Read Full Story
04:29 PM (IST) Oct 17

India Latest News Live ಪ್ರಧಾನಿ ಹುದ್ದೆಗೆ ಅನ್​ಫಿಟ್​- I Hate Indiaಕ್ಕೆ ಮಾತ್ರ ಲಾಯಕ್ಕು! ರಾಹುಲ್​ ವಿರುದ್ಧ ಅಮೆರಿಕದ ಗಾಯಕಿ ಶಾಕಿಂಗ್​ ಹೇಳಿಕೆ

ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಟ್ರಂಪ್‌ಗೆ ಹೆದರುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಧಾನಿ ಮೋದಿಯವರ ರಾಜತಾಂತ್ರಿಕತೆಯನ್ನು ಶ್ಲಾಘಿಸಿದ ಅವರು, ರಾಹುಲ್ ಗಾಂಧಿಯ ನಾಯಕತ್ವದ ಗುಣ ಪ್ರಶ್ನಿಸಿದ್ದಾರೆ.

Read Full Story
03:52 PM (IST) Oct 17

India Latest News Live ಅಫ್ಘಾನ್ ಪಾಕ್ ಗಡಿಯಲ್ಲಿ ಮತ್ತೆ ರಕ್ತದೋಕುಳಿ - ಆತ್ಮಾಹುತಿ ಬಾಂಬ್ ದಾಳಿಗೆ 7 ಪಾಕಿಸ್ತಾನಿ ಯೋಧರು ಬಲಿ

ಪಾಕಿಸ್ತಾನ-ಅಫ್ಘಾನ್ ಗಡಿಯ ಉತ್ತರ ವಜರಿಸ್ತಾನದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಏಳು ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್‌ ಸಂಘಟನೆಯು ಈ ದಾಳಿಯ ಹೊಣೆ ಹೊತ್ತಿದೆ.

Read Full Story
03:47 PM (IST) Oct 17

India Latest News Live ದೀಪಾವಳಿಗೆ ಊರಿಗೆ ತೆರಳುತ್ತಿದ್ದೀರಾ? ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಟ

ದೀಪಾವಳಿಗೆ ಊರಿಗೆ ತೆರಳುತ್ತಿದ್ದೀರಾ? ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೇ ಪರದಾಟ, ಭಾರತೀಯ ರೈಲ್ವೇ ವೆಬ್‌ಸೈಟ್ ಹಾಗೂ ಆ್ಯಪ್ ಡೌನ್ ಆಗಿದೆ. ಟಿಕೆಟ್ ಸಿಗದೆ ಜನರು ಕಂಗಾಲಾಗಿದ್ದಾರೆ. ಈಗ ಟಿಕೆಟ್ ಪಡೆಯುವುದು ಹೇಗೆ?

Read Full Story
03:33 PM (IST) Oct 17

India Latest News Live ಆಸ್ಟ್ರೇಲಿಯಾ ಎದುರಿನ ODI ಸರಣಿಯಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸೋರು ಯಾರು?

ಸುಮಾರು 7 ತಿಂಗಳ ಬಳಿಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮರಳಿದ್ದಾರೆ. ಇದು ಅವರ ಕೊನೆಯ ಆಸೀಸ್ ಪ್ರವಾಸವಾಗುವ ಸಾಧ್ಯತೆಯಿದ್ದು, ಅಭಿಮಾನಿಗಳು ಅವರಿಂದ ಮತ್ತೊಂದು ಸ್ಫೋಟಕ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.  

Read Full Story
02:36 PM (IST) Oct 17

India Latest News Live ಕ್ರಿಕೆಟರ್ ಪತ್ನಿಗೆ ಒಲಿದಾ ಸಚಿವ ಸ್ಥಾನ - ರಿವಾಬಾ ಜಡೇಜಾ ಈಗ ಗುಜರಾತ್ ಸಚಿವೆ

ಜಾಮ್‌ನಗರ ಶಾಸಕಿ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿನ್ನೆಯಷ್ಟೇ ಗುಜರಾತ್ ಸಚಿವ ಸಂಪುಟದ ಸಚಿವರು ಹೊಸ ಸಂಪುಟ ರಚನೆಯ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಇಂದು ಸಂಪುಟ ಪುನರಚನೆಯಾಗಿದ್ದು, ರಿವಾಬಾ ಜಡೇಜಾಗೆ ಸಚಿವ ಸ್ಥಾನ ಸಿಕ್ಕಿದೆ.

Read Full Story