MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Kaun Banega Crorepati: ದೇಶದ ಭವಿಷ್ಯದ ಮಾತನಾಡಿ ಪ್ರಧಾನಿಗೇ ಪ್ರಶ್ನೆ ಮಾಡಿದ ಗುಜರಾತ್​ ಬಾಲಕ!

Kaun Banega Crorepati: ದೇಶದ ಭವಿಷ್ಯದ ಮಾತನಾಡಿ ಪ್ರಧಾನಿಗೇ ಪ್ರಶ್ನೆ ಮಾಡಿದ ಗುಜರಾತ್​ ಬಾಲಕ!

ಕೌನ್​ ಬನೇಗಾ ಕರೋರ್​ಪತಿ ಮಕ್ಕಳ ಸೀಸನ್​ನಲ್ಲಿ, ರುದ್ರ ಚಿಟ್ಟೆ ಎಂಬ ಬಾಲಕ ತನ್ನ ಹಾಸ್ಯ ಪ್ರಜ್ಞೆ ಮತ್ತು ತಿಳುವಳಿಕೆಯಿಂದ ಗಮನ ಸೆಳೆದಿದ್ದಾನೆ. ಆತ್ಮನಿರ್ಭರ ಭಾರತಕ್ಕಾಗಿ ದೇಶದ ಮೊದಲ ಆಪರೇಟಿಂಗ್ ಸಿಸ್ಟಮ್ ರಚಿಸುವ ತನ್ನ ಗುರಿಯನ್ನು ಬಹಿರಂಗಪಡಿಸಿ, ಅಮಿತಾಭ್ ಬಚ್ಚನ್ ಸೇರಿದಂತೆ ಬೆರಗುಗೊಳಿಸಿದ್ದಾನೆ.

2 Min read
Suchethana D
Published : Oct 17 2025, 06:41 PM IST
Share this Photo Gallery
  • FB
  • TW
  • Linkdin
  • Whatsapp
18
ಮಕ್ಕಳ ಟ್ಯಾಲೆಂಟ್​ಗೆ KBC ವೇದಿಕೆ
Image Credit : bleedblue.cricinfo/Instagram

ಮಕ್ಕಳ ಟ್ಯಾಲೆಂಟ್​ಗೆ KBC ವೇದಿಕೆ

ನಟ ಅಮಿತಾಭ್​ ಬಚ್ಚನ್​ ನಡೆಸಿಕೊಡ್ತಿರೋ ಕೌನ್​ ಬನೇಗಾ ಕರೋರ್​ಪತಿ (Kaun Banega Crorepati 17)ನಲ್ಲಿ ಇದೀಗ ಮಕ್ಕಳ ಸೀಸನ್​ ಶುರುವಾಗಿದೆ. ಒಬ್ಬರಿಗಿಂತ ಒಬ್ಬರು ಟ್ಯಾಲೆಂಟ್​ ಮಕ್ಕಳನ್ನು ಈ ಷೋನಲ್ಲಿ ನೋಡಬಹುದು. 

28
ಉದ್ಧಟತನ ತೋರಿದ ಬಾಲಕ
Image Credit : twitter

ಉದ್ಧಟತನ ತೋರಿದ ಬಾಲಕ

ಕೆಲ ದಿನಗಳ ಹಿಂದಷ್ಟೇ ಅಮಿತಾಭ್​ ಅವರ ಮುಂದೆಯೇ ಉದ್ಧಟತನ ತೋರಿದ್ದ ಬಾಲಕನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗಿತ್ತು.

Related Articles

Related image1
ಅಮಿತಾಭ್‌ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್‌
Related image2
ತಮಿಳಿನಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿ ಬಾಚಿಕೊಂಡ Amruthadhaare ಭೂಮಿಕಾ: ಪತಿಯ ನೋಡಿ ಕಣ್ಣೀರ ಕೋಡಿ
38
ದೇಶದ ಭವಿಷ್ಯದ ಬಗ್ಗೆ ಚಿಂತನೆ
Image Credit : Instagram

ದೇಶದ ಭವಿಷ್ಯದ ಬಗ್ಗೆ ಚಿಂತನೆ

ಇದೀಗ ಇನ್ನೋರ್ವ ಬಾಲಕನ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ಆದರೆ ಈ ಬಾಲಕ ವೈರಲ್​ ಆಗ್ತಿರೋದು ಆತನ ಅಗಾಧ ತಿಳಿವಳಿಕೆ, ದೇಶದ ಭವಿಷ್ಯದ ಬಗೆಗೆ ಚಿಂತನೆ ಮತ್ತು ಆತನ ಹಾಸ್ಯ ಪ್ರಜ್ಞೆಯಿಂದಾಗಿ. ಈತನ ಹೆಸರು ರುದ್ರ ಚಿಟ್ಟೆ. ಪ್ರಧಾನಿಯ ನರೇಂದ್ರ ಮೋದಿ (PM Narendra Modi) ತವರು ಗುಜರಾತ್​ನ ವಡೋದರಾದ ಬಾಲಕ ಈತ. 6ನೇ ಕ್ಲಾಸ್​​ ಓದುತ್ತಿರುವ ಬಾಲಕ ಇವನು.

48
ಹಾಸ್ಯದಲ್ಲಿ ತೇಲಾಡಿಸಿದ ಬಾಲಕ
Image Credit : Social Media

ಹಾಸ್ಯದಲ್ಲಿ ತೇಲಾಡಿಸಿದ ಬಾಲಕ

ಮೊದಲಿಗೆ ಹಲವಾರು ರೀತಿಯಲ್ಲಿ ಹಾಸ್ಯ ಮಾಡಿದ್ದಾನೆ ರುದ್ರ. ನನಗೆ ತಿಂಗಳಿಗೆ 50 ರೂಪಾಯಿ ಮಾತ್ರ ಪಾಕೆಟ್​ ಮನಿ ಕೊಡ್ತಾ ಇದ್ರು. ನನಗೆ ವಡಾಪಾವ್​, ಪಾವ್​ಬಾಜಿ ತಿನ್ನೋದು ಎಂದರೆ ತುಂಬಾ ಆಸೆ. ಆದ್ರೆ ಹಣ ಸಾಕಾಗ್ತಾ ಇರಲಿಲ್ಲ. ಮೊದಲಿಗೆ ಅಪ್ಪ ಆಫೀಸ್​ನಿಂದ ಬಂದಾಗ ಫ್ರೀ ಆಗಿ ಕಾಲು ಒತ್ತುತ್ತಿದ್ದೆ. ಅಮ್ಮ ಅಂಗಡಿಗೆ ಕಳಿಸಿದಾಗ ಫ್ರೀ ಆಗಿ ಹೋಗಿ ಬರ್ತಿದ್ದೆ. ಆದರೆ ಈಗ ಎಲ್ಲದ್ದಕ್ಕೂ ಚಾರ್ಜ್​ ಮಾಡ್ತೇನೆ. ಹಾಗಾಗಿ ಪಾಕೆಟ್​ ಮನಿ ಜಾಸ್ತಿ ಆಗುತ್ತಿದೆ ಎಂದು ತಮಾಷೆ ಮಾಡಿ, ಅಮಿತಾಭ್​ ಬಚ್ಚನ್​ ಸೇರಿ ಎಲ್ಲರನ್ನೂ ನಗಿಸಿದ್ದಾನೆ.

58
ಗುರಿ ಕೇಳಿ ಎಲ್ಲರಿಗೂ ಅಚ್ಚರಿ
Image Credit : Instagram

ಗುರಿ ಕೇಳಿ ಎಲ್ಲರಿಗೂ ಅಚ್ಚರಿ

ಆರಂಭದಲ್ಲಿ ಹೀಗೆ ಮಾತನಾಡಿದ ಬಾಲಕ ಕೊನೆಗೆ ಈತನ ಗುರಿಯ ಬಗ್ಗೆ ಹೇಳುತ್ತಲೇ ಎಲ್ಲರೂ ಬೆಕ್ಕಸಬೆರಗಾಗಿ ಹೋದರು. ಕೋಡಿಂಗ್ ತನ್ನ ಶಕ್ತಿ ಎಂದು ಹೇಳಿಕೊಂಡ ರುದ್ರ, ಆತ್ಮನಿರ್ಭರ ಭಾರತ್‌ದ ಕನಸಿಗೆ ಅನುಗುಣವಾಗಿ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸುವ ಗುರಿಯನ್ನು ಹೊಂದಿದ್ದೇನೆ ಎಂದಾಗ ಚಪ್ಪಾಳೆಗಳ ಸುರಿಮಳೆಯೇ ಆಯಿತು.

68
ಪ್ರಧಾನಿಗೇ ಸವಾಲೆನ್ನುವ ಪ್ರಶ್ನೆ
Image Credit : Instagram

ಪ್ರಧಾನಿಗೇ ಸವಾಲೆನ್ನುವ ಪ್ರಶ್ನೆ

2047ರ ವೇಳೆಗೆ ಸ್ವಾತಂತ್ರ್ಯದ ಶತಮಾತೋತ್ಸವದ ಸಂದರ್ಭದಲ್ಲಿ ಅಭಿವೃದ್ಧಿಶೀಲ ರಾಷ್ಟ್ರದ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅದಕ್ಕೆ ಅನುಗುಣವಾಗಿ, ಎಲ್ಲಾ ಕ್ಷೇತ್ರಗಳಲ್ಲಿಯೂ ಆತ್ಮನಿರ್ಭರತೆ ಅಂದರೆ ಸ್ವಾವಲಂಬಿಯಾಗುವತ್ತ ದೇಶ ಮುನ್ನಡೆಯುತ್ತಿದೆ. ರಕ್ಷಣಾ ವಲಯದಲ್ಲಿಯೂ ಆತ್ಮನಿರ್ಭರವಾಗಿರುವ ಭಾರತ ತನ್ನ ತಾಕತ್ತು ಏನೆಂದು ಇಡೀ ಜಗತ್ತಿಗೆ ಆಪರೇಷನ್​ ಸಿಂದೂರ್​ ಸಮಯದಲ್ಲಿ ತೋರಿಸಿದೆ. ಇದೇ ವೇಗಗತಿಯಲ್ಲಿ ಮುನ್ನುಗ್ಗುತ್ತಿರುವ ಭಾರತದ ಅರ್ಥ ವ್ಯವಸ್ಥೆ ಕಳೆದ ಹತ್ತು ದಶಕದಲ್ಲಿಯೇ 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದು, ಇನ್ನು 3ನೇ ಸ್ಥಾನದ ಗುರಿ ಹೊಂದಿದೆ.

78
ಆತ್ಮನಿರ್ಭರ ಭಾರತ
Image Credit : Instagram

ಆತ್ಮನಿರ್ಭರ ಭಾರತ

ಎಲ್ಲಾ ಕ್ಷೇತ್ರಗಳಲ್ಲಿಯೂ ಈ ರೀತಿಯಾಗಿ ಆತ್ಮನಿರ್ಭರತೆ ಇರುವಾಗ, ಸ್ಪ್ಯಾಮ್ ಜಾಹೀರಾತುಗಳನ್ನು ತಪ್ಪಿಸಲು ಸಹಾಯ ಮಾಡುವ ಅಪ್ಲಿಕೇಶನ್ ಅನ್ನು ಅವರು ಪ್ರಸ್ತುತ ಅಭಿವೃದ್ಧಿಪಡಿಸುವ ಗುರಿಯನ್ನು ಬಾಲಕ ಹೊಂದಿರುವ ಬಗ್ಗೆ ವಿವರಿಸಿದ. ಈ ಹಂತದಲ್ಲಿ ಪ್ರಧಾನಿಯವರೇ ಸವಾಲು ಹಾಕುವ ರೀತಿಯಲ್ಲಿ ಆತ, ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ಆತ್ಮನಿರ್ಭರವಾಗಿದೆ. ಈ ಕ್ಷೇತ್ರದಲ್ಲಿ ಮಾತ್ರ ಏಕೆ ಇನ್ನೂ ಅಮೆರಿಕದ ಮೇಲೆ ನಾವು ಅವಲಂಬಿತರಾಗಿದ್ದೇವೆ? ಇದು ಸರಿಯಲ್ಲ. ಆದ್ದರಿಂದ ನಾನು ಕೋಡಿಂಗ್ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸುತ್ತಿದ್ದೇನೆ. ಅದನ್ನು ನಾನೇ ಮಾಡುತ್ತೇನೆ. ನಂಬರ್​ 1 ಆಗುವ ಮೂಲಕ ಈ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬಿ ಎನ್ನುವುದನ್ನು ತೋರಿಸುತ್ತೇನೆ ಎಂದಿದ್ದಾನೆ.

(ಅಂದಹಾಗೆ ರುದ್ರ ಇದಾಗಲೇ ಹಲವು ಪ್ರಶಸ್ತಿಗಳನ್ನೂ ಗಳಿಸಿದ್ದಾನೆ. ಪ್ರತಿಷ್ಠಿತ ವಡೋದರಾ ಟಾಯ್‌ಕ್ಯಾಥನ್ 2024 ಪ್ರಶಸ್ತಿಯ ಚಿತ್ರ ಇಲ್ಲಿದೆ)

88
ಅಮಿತಾಭ್​ ಭಾವುಕ
Image Credit : instagram

ಅಮಿತಾಭ್​ ಭಾವುಕ

ಬಾಲಕನ ಈ ಸೃಜನಶೀಲ ಕಲ್ಪನೆಯನ್ನು ನೋಡಿದ ಜನರಿಂದ ಚಪ್ಪಾಳೆಗಳ ಸುರಿಮಳೆಯಾದರೆ, ಅಮಿತಾಭ್​ ಬಚ್ಚನ್​ ಭಾವುಕರಾಗಿ ಅರೆಕ್ಷಣ ಅವರ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ. ಭಾರತದ ಭವಿಷ್ಯ ಇಂಥ ಮಕ್ಕಳಲ್ಲಿ ಅಡಗಿದೆ ಎಂದು ಅವರು ಹೇಳಿದರು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕೌನ್ ಬನೇಗಾ ಕರೋಡ್ಪತಿ
ಅಮಿತಾಭ್ ಬಚ್ಚನ್
ಭಾರತ ಸುದ್ದಿ
ಆಪರೇಷನ್ ಸಿಂಧೂರ
ನರೇಂದ್ರ ಮೋದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved