- Home
- News
- India News
- India Latest News Live ವಾಹನಗಳಲ್ಲಿ ಶೇ.100ರಷ್ಟು ಎಥೆನಾಲ್ ಬಳಸಲು ಅನುಮತಿ: ಚೆಂದದ ಪೆನ್ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್; ಬ್ಲಾಸ್ಟ್ ಆಗಿ ನಿಮ್ಮ ಕಥೆ ಫಿನಿಷ್- ಏನಿದು ವೈರಲ್ ಸುದ್ದಿ
India Latest News Live ವಾಹನಗಳಲ್ಲಿ ಶೇ.100ರಷ್ಟು ಎಥೆನಾಲ್ ಬಳಸಲು ಅನುಮತಿ: ಚೆಂದದ ಪೆನ್ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್; ಬ್ಲಾಸ್ಟ್ ಆಗಿ ನಿಮ್ಮ ಕಥೆ ಫಿನಿಷ್- ಏನಿದು ವೈರಲ್ ಸುದ್ದಿ

ನಾಗ್ಪುರ: ವಾಹನಗಳಲ್ಲಿ ಶೇ.100ರಷ್ಟು ಎಥೆನಾಲ್ ಬಳಸಲು ಅನುಮತಿ ನೀಡುವ ಕಡತಕ್ಕೆ ಸಹಿ ಹಾಕಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶನಿವಾರ ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಿಂದೆ ನಾನು ಎಥೆನಾಲ್ ಬಗ್ಗೆ ಮಾತನಾಡುವಾಗ ಜನ ನಗುತ್ತಿದ್ದರು. ಕೆಲವು ಸ್ನೇಹಿತರು ಟೀಕಿಸಿದ್ದರು. ಆದರೆ ಈಗ ಎಥೆನಾಲ್ ಪೆಟ್ರೋಲ್ಗೆ ಪರ್ಯಾಯವಾಗಿ ಹೊರಹೊಮ್ಮಿದೆ. ನಿನ್ನೆ ರಾತ್ರಿ 8 ಗಂಟೆಗೆ, ನಾನು ಶೇ.100 ಎಥೆನಾಲ್ ಬಳಕೆಯನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವ ಕಡತಕ್ಕೆ ಸಹಿ ಹಾಕಿದೆ’ ಎಂದರು. ಮುಂದಿನ 1.5 ತಿಂಗಳೊಳಗೆ ಆಟೋಮೊಬೈಲ್ ಕಂಪನಿಗಳು ಎಥೆನಾಲ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲಿವೆ ಎಂದೂ ಹೇಳಿದರು.
ಹೊಸ ನಿಯಮವು 1989ರ ಕೇಂದ್ರ ಮೋಟರ್ ವಾಹನಗಳ ನಿಯಮಕ್ಕೆ ತಿದ್ದುಪಡಿ ತಂದು, ವಾಹನಗಳಲ್ಲಿ ಇ85 (ಪೆಟ್ರೋಲ್ ಜತೆ ಶೇ.85 ಎಥೆನಾಲ್ ಮಿಶ್ರಣ), ಇ100 (ಶೇ.1000ರಷ್ಟು ಎಥೆನಾಲ್) ಹಾಗೂ ಬಿ100 ಬಯೋಡೀಸೆಲ್ ಮತ್ತು ಹೈಡ್ರೋಜನ್-ಸಿಎನ್ಜಿ ಮಿಶ್ರಿತ ಇಂಧನ ಬಳಸಲು ಅನುವು ಮಾಡಿಕೊಡುತ್ತದೆ.
India Latest News Live 15 June 2026ಚೆಂದದ ಪೆನ್ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್; ಬ್ಲಾಸ್ಟ್ ಆಗಿ ನಿಮ್ಮ ಕಥೆ ಫಿನಿಷ್- ಏನಿದು ವೈರಲ್ ಸುದ್ದಿ
India Latest News Live 15 June 2026Rashmika Mandanna - 'ನನ್ನ ಜೀವನದ ಬೆಸ್ಟ್ ನಿರ್ಧಾರ ಇದೇ' - ರಶ್ಮಿಕಾ ಬಹಿರಂಗಪಡಿಸಿದ ಸತ್ಯ ಕೇಳಿ ಫ್ಯಾನ್ಸ್ ಶಾಕ್!
Instagram Q&A ವೇಳೆ ವಿಜಯ್ ದೇವರಕೊಂಡ ಬಗ್ಗೆ ಮನದಾಳದ ಮಾತು ಹಂಚಿಕೊಂಡ ರಶ್ಮಿಕಾ ಮಂದಣ್ಣ, ತಮ್ಮ ಜೀವನದ ಅತ್ಯಂತ ಸಂತೋಷದ ನಿರ್ಧಾರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಉತ್ತರ ಈಗ ವೈರಲ್ ಆಗಿದೆ.
India Latest News Live 15 June 2026ಉಚಿತ ಪಾಸ್ ವಿತರಣೆ ವೇಳೆ ಅವಘಡ - ಸಚಿವೆ ಮೇಲೆ ಬಿಸಿಬಿಸಿ ಪಾಯಸ ಚೆಲ್ಲಿದ ಕಾರ್ಯಕರ್ತರು
India Latest News Live 15 June 2026Indore Tragedy - ಮಗನ ಶವ ನೋಡಿ ಅಲ್ಲೇ ಪ್ರಾಣಬಿಟ್ಟ ತಾಯಿ - ಒಂದೇ ಮನೆಯಿಂದ ಹೊರಟಿತು ಎರಡು ಹೆಣ!
Human Interest Story: ಮಧ್ಯಪ್ರದೇಶದ ಇಂದೋರ್ನಲ್ಲಿ 55 ವರ್ಷದ ಮಗ ಸಾವನ್ನಪ್ಪಿದ ಕೆಲವೇ ನಿಮಿಷಗಳಲ್ಲಿ 75 ವರ್ಷದ ತಾಯಿಯೂ ಆಘಾತದಿಂದ ಪ್ರಾಣಬಿಟ್ಟ ಮನಕಲಕುವ ಘಟನೆ ನಡೆದಿದೆ. ಒಂದೇ ಮನೆಯಿಂದ..
India Latest News Live 15 June 2026Dishani Engagement - ಮಿಥುನ್ ಚಕ್ರವರ್ತಿ ಮಗಳಿಗೆ ಎಂಗೇಜ್ಮೆಂಟ್! ಯಾರು ಈ ಹುಡುಗ? ಮದುವೆ ಯಾವಾಗ?
Bollywood: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರಿ ದಿಶಾನಿ ಚಕ್ರವರ್ತಿ ಅವರ ನಿಶ್ಚಿತಾರ್ಥ ನಡೆದಿದೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಅವರು ಎಂಗೇಜ್ ಆಗಿದ್ದು, ಮದುವೆ ದಿನಾಂಕವನ್ನೂ ಘೋಷಿಸಿದ್ದಾರೆ. ಯಾರು ಈ ಹುಡುಗ? ಇಲ್ಲಿದೆ ವಿವರ.
India Latest News Live 15 June 2026Sanchita Ugale - ಯಾರು ಈ ಸಂಚಿತಾ? 22ನೇ ವಯಸ್ಸಿಗೆ ನಿಧನರಾದ ನಟಿಯ ಬಗ್ಗೆ ಗೊತ್ತಿರದ 5 ಸಂಗತಿಗಳು!
Who Is Sanchita Ugale? ಟಿವಿ ಮತ್ತು ಸಿನಿಮಾಗಳಲ್ಲಿ ಹೇಗೆ ಗುರುತಿಸಿಕೊಂಡಿದ್ದರು? ಅವರ ಬದುಕಿನ ಬಗ್ಗೆ ಅಭಿಮಾನಿಗಳು ತಿಳಿಯಬಯಸುವ 5 ಪ್ರಮುಖ ಸಂಗತಿಗಳೇನು? ಅವರ ಕುಟುಂಬದ ಹಿನ್ನೆಲೆ ಏನು? ಇಲ್ಲಿದೆ ಪೂರ್ತಿ ವಿವರ.
India Latest News Live 15 June 2026Lagaan ಸೆಟ್ನಲ್ಲೇ ವಿದೇಶಿ ಹುಡುಗಿ ಜೊತೆ ಲವ್ - ಆದ್ರೆ ಇದೇ ಸಿನಿಮಾ ನನ್ನ ಕೆರಿಯರ್ ಹಾಳು ಮಾಡ್ತು ಎಂದ ನಟ!
Lagaan ಸಿನಿಮಾದ ಬಾಘಾ ಪಾತ್ರಧಾರಿ ಅಮೀನ್ ಹಾಜಿ, ಈ ಸಿನಿಮಾ ತಮ್ಮ ವೃತ್ತಿಜೀವನವನ್ನು ಹಾಳುಮಾಡಿತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅವರ ಕರಿಯರ್, ಪ್ರೇಮಕಥೆ ಹಾಗೂ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
India Latest News Live 15 June 2026Magic Mushroom - ಮದ್ಯ-ಮ್ಯಾಜಿಕ್ ಮಶ್ರೂಮ್ ಸೇವಿಸಿ ಅಮರತ್ವ ಹುಡುಕಿದ ವ್ಯಕ್ತಿ, ನಂತರ ನಡೆದಿದ್ದು ಭಯಾನಕ!
China News: ಚೀನಾದಲ್ಲಿ ಮ್ಯಾಜಿಕ್ ಮಶ್ರೂಮ್ ಹಾಗೂ ಮದ್ಯ ಸೇವಿಸಿ ಅಮರನಾಗಲು ಹೊರಟ ವ್ಯಕ್ತಿಯೊಬ್ಬ 27ನೇ ಮಹಡಿಯ ಫ್ಲ್ಯಾಟ್ನಿಂದ ಹೊರಗೆ ಇಳಿದಿದ್ದಾನೆ. ಪೈಪ್ ಮೂಲಕ ಕೆಳಗೆ ಜಾರುತ್ತಿದ್ದಾಗ..
India Latest News Live 15 June 2026ಸಾವಿಗೂ ಮುನ್ನ ಮಾಡಿರೋ ಆ ವಿಡಿಯೋ ಸಖತ್ ವೈರಲ್! ನಟಿ ಸಂಚಿತಾ ಉಗಾಳೆ ಸಾವಿನ ರಹಸ್ಯ ಬಯಲಾಗುತ್ತಾ?
ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹ*ತ್ಯೆ ಎಂದು ಕಂಡುಬಂದರೂ, ಪೋಸ್ಟ್ ಮಾರ್ಟಮ್ ವರದಿ ಬಂದ ನಂತರವೇ ಸಾವಿನ ಹಿಂದಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಏನಿದೆ ಗೊತ್ತಾ?
India Latest News Live 15 June 2026ಆಘಾತಕಾರಿ ಬೆಳವಣಿಗೆ, ಪಂಜಾಬ್ ಸಿಎಂ ಮಾನ್ ಗುರು ದ್ರೋಹಿ, ಸಿಖ್ ವಿರೋಧಿ, ಧಾರ್ಮಿಕ ಪೀಠ ಘೋಷಣೆ
ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿಗೆ ಭಾರಿ ಹಿನ್ನಡೆಯಾಗಿದೆ. ಭಗವಂತ್ ಮಾನ್ ಸಿಖ್ ಪಂತದ ವಿರೋಧಿ, ಗುರು ದ್ರೋಹಿ ಎಂದು ಸಿಖ್ ಶ್ರೇಷ್ಠ ಧಾರ್ಮಿಕ ಪೀಠ ಘೋಷಿಸಿದೆ. ಪಂಜಾಬ್ನಲ್ಲಿ ಅಲ್ಲೋಕಲ್ಲೋಲ ಶುರುವಾಗಿದೆ.
India Latest News Live 15 June 2026Ranveer Singh - ಆ ವಿವಾದದ ಮಧ್ಯೆ ಕೋಟಿ ಕೋಟಿ ಬೆಲೆಯ ಹೊಸ ಫೆರಾರಿ ಖರೀದಿಸಿದ ರಣವೀರ್ - ಬೆಲೆ ಎಷ್ಟು?
Ranveer Singh Ferrari: 'ಡಾನ್ 3' ಚಿತ್ರದ ವಿವಾದದಿಂದಾಗಿ ಸುದ್ದಿಯಾಗಿದ್ದ ರಣವೀರ್ ಸಿಂಗ್, ಇದೀಗ ಹೊಚ್ಚ ಹೊಸ ಐಷಾರಾಮಿ ಕಾರು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರಿನ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!
India Latest News Live 15 June 2026First A-Rated Film - 16ರ ನಟಿಯ ಆ ಚಿತ್ರಕ್ಕೆ 'A' ಸರ್ಟಿಫಿಕೇಟ್ ಕೊಟ್ಟಿದ್ದೇಕೆ? ದೇಶಾದ್ಯಂತ ವಿವಾದ ಆಗಿದ್ದೇಕೆ?
Madhubala: ಭಾರತದ ಮೊದಲ A ರೇಟೆಡ್ ಸಿನಿಮಾ 'ಹಂಸತೇ ಆಂಸೂ' ಬಗ್ಗೆ ಸಂಪೂರ್ಣ ಮಾಹಿತಿ. ಕೇವಲ 16 ವರ್ಷದ ಮಧುಬಾಲಾ ನಟಿಸಿದ್ದ ಈ ಚಿತ್ರಕ್ಕೆ ಯಾಕೆ A ಸರ್ಟಿಫಿಕೇಟ್ ಸಿಕ್ಕಿತ್ತು, ಅದರ ಕಥೆ ಮತ್ತು ವಿವಾದಗಳ ವಿವರ ಇಲ್ಲಿದೆ.
India Latest News Live 15 June 2026Ronaldo Marriage - ಕೊನೆಗೂ ಗೆಳತಿ ಜೊತೆ ದಾಂಪತ್ಯಕ್ಕೆ ಕಾಲಿಡ್ತಾರಾ ರೊನಾಲ್ಡೊ? ಏನಿದು ಹೊಸ ಸುದ್ದಿ?
Cristiano Ronaldo: ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅವರ ಪ್ರೇಮಕಥೆ ಮತ್ತು ಐಷಾರಾಮಿ ಜೀವನದ ಮಾಹಿತಿ ಇಲ್ಲಿದೆ.
India Latest News Live 15 June 2026CM Vijay-Sangeetha Divorce Case - ಸಿಎಂ ವಿಜಯ್ ಮೇಲೆ ಪತ್ನಿ ಸಂಗೀತಾ ಮಾಡಿರೋ ಗಂಭೀರ ಆರೋಪಗಳಿವು, ನಿಜವಾಗಿಯೂ ಶಾಕಿಂಗ್!
ತಮ್ಮ 27 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವ ಸಂಗೀತಾ ಸ್ವರ್ಣಲಿಂಗಂ, ಪತಿ ಸಿಎಂ ವಿಜಯ್ ವಿರುದ್ಧ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರು ವಿಜಯ್ ವಿರುದ್ಧ ಮಾಡಿರೋ ಗಂಭೀರ ಆರೋಪಗಳೇನು ಗೊತ್ತಾ? ಈ ಸ್ಟೋರಿ ನೋಡಿ..
India Latest News Live 15 June 2026ಎಥೆನಾಲ್ನಲ್ಲಿ ಚಲಿಸುವ E85 ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಲಾಂಚ್, ಕಾರಿನ ಬೆಲೆ, ಮೈಲೇಜ್ ಎಷ್ಟು?
ಇ20 ಯಿಂದ ಇ100ರ ವರೆಗೆ ಎಥೆನಾಲ್ ಮೂಲಕ ಚಲಿಸುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಾರಿನ ಬೆಲೆ, ಮೈಲೇಜ್ , ಎಂಜಿನ್ ಸೇರಿದಂತೆ ಇತರ ಮಾಹಿತಿಗಳು ಇಲ್ಲಿದೆ. ಪೆಟ್ರೋಲ್ ಕಾರಿಗಿಂತ ಕಡಿಮೆ ಇದೆಯಾ?
India Latest News Live 15 June 2026ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ ಮುಂದೂಡಿಕೆ; ಇಂದು ಆಗಲಿಲ್ಲ ಏಕೆ?
ಇಂದು, ಅಂದರೆ ಜೂನ್ 15, ಸೋಮವಾರದಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ. ಏಕೆ ಇಂದು ಇತ್ಯರ್ಥ ಆಗಲಿಲ್ಲ? ನೋಡಿ ಈ ಸ್ಟೋರಿ..
India Latest News Live 15 June 2026ಫೇಲ್ ಆದ್ರೂ ವಿಶ್ವದಾಖಲೆ ಬರೆದ ಶಫಾಲಿ ವರ್ಮಾ! ಮಹಿಳಾ ಟಿ20 ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್
ಬರ್ಮಿಂಗ್ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಎದುರು ಶುಭಾರಂಭ ಮಾಡಿದೆ. ಇನ್ನು ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ, ಭಾರತದ ಶಫಾಲಿ ವರ್ಮಾ ವಿಶ್ವದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ.
India Latest News Live 15 June 2026ಶಾಕಿಂಗ್ ಸ್ಟೋರಿ.. 500 ರೂ.ಗಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದ ಈ ನಟಿ ಸಿನಿಮಾಗೆ ಬಂದಿದ್ದು ಹೇಗೆ?
"ನಾನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದೆ. ಆದರೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ. ಆ ಬಳಿಕ 500 ರೂ.ಗೆ ಮದುವೆಮನೆಗಳಲ್ಲಿ ಕೆಲಸ ಮಾಡಿದ್ದೇನೆ.
India Latest News Live 15 June 2026ಇರಾನ್-ಅಮೆರಿಕ ಒಪ್ಪಂದ - ಭಾರತಕ್ಕೆ ತೆರೆದ ಅದೃಷ್ಟದ ಬಾಗಿಲು, ಇದೇ ನೋಡಿ ಜಾಕ್ಪಾಟ್
India Latest News Live 15 June 2026ಐಶ್ವರ್ಯಾ ರೈಗೆ 'ಆಂಟಿ' ಎಂದು ಕರೆದಿದ್ದ ಸೋನಂ ಕಪೂರ್! ಬಿರುಗಾಳಿ ಎಬ್ಬಿಸಿದ್ದ ಆ ವಿವಾದ ಅಂತ್ಯವಾಗಿದ್ದು ಹೇಗೆ?
ಐಶ್ವರ್ಯಾ ಅವರನ್ನು 'ಆಂಟಿ' ಎಂದು ಕರೆದಿದ್ದಕ್ಕೆ ಸೋನಂ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಐಶ್ವರ್ಯಾ ಅಭಿಮಾನಿಗಳು ಸೋನಂ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಸೋನಂ ಕೊಟ್ಟ ಕಾರಣ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಏನದು ಈ ಬಿರುಗಾಳಿ ಸುದ್ದಿ?