11:46 PM (IST) Jul 15

India Latest News Live 15 July 202622 ವರ್ಷಗಳ ಬಳಿಕ ನಟ ಅಜಿತ್‌ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!

ನಟ ಅಜಿತ್ ಕುಮಾರ್ ಪತ್ನಿ, ಮಾಜಿ ನಟಿ ಶಾಲಿನಿ ಅಜಿತ್‌ ಕುಮಾರ್ ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ನಟಿಯಾಗಿ ಅಲ್ಲ, ಬದಲಿಗೆ ನಿರ್ಮಾಪಕಿಯಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.

Read Full Story
10:48 PM (IST) Jul 15

India Latest News Live 15 July 2026ಸೆನ್ಸಾರ್‌ಶಿಪ್ ಅನ್ನೋದೇ ಬೇಕಾಗಿಲ್ಲ, ಇದೊಂದು ಹಳಸಲು ಪದ್ಧತಿ - ರಾಮ್ ಗೋಪಾಲ್ ವರ್ಮಾ ಕಿಡಿ

India Film Censorship: ಭಾರತದಲ್ಲಿ ಫಿಲ್ಮ್ ಸೆನ್ಸಾರ್‌ಶಿಪ್ ಅನ್ನೇ ತೆಗೆದುಹಾಕಬೇಕು, ಈಗಿನ ವ್ಯವಸ್ಥೆ ಸಂಪೂರ್ಣ ಹಳಸಲಾಗಿದೆ ಅಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

Read Full Story
10:30 PM (IST) Jul 15

India Latest News Live 15 July 2026IRCTC ಹೊಸ ವೆಬ್‌ಸೈಟ್‌ ಬೀಟಾ ಆವೃತ್ತಿ ರಿಲೀಸ್‌ - ಕ್ಯಾಪ್ಚಾ ಕಿರಿಕಿರಿ ಇಲ್ಲ, ಟಿಕೆಟ್ ಬುಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ

ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ನ ಹೊಸ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದ್ದು, ಇದು ಬಳಕೆದಾರರಿಗೆ ಸುಧಾರಿತ ಅನುಭವ ನೀಡಲಿದೆ. ಅನಗತ್ಯ ಕ್ಯಾಪ್ಚಾ ತೆಗೆದುಹಾಕುವುದು, ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ, ಮತ್ತು ವೇಗದ ಚೆಕ್‌ಔಟ್ ಪ್ರಕ್ರಿಯೆಯಂತಹ ಪ್ರಮುಖ ಸುಧಾರಣೆಗಳನ್ನು ಇದು ಒಳಗೊಂಡಿದೆ.

Read Full Story
09:35 PM (IST) Jul 15

India Latest News Live 15 July 2026ರಾಮ್ ಚರಣ್ RC17 ಚಿತ್ರಕ್ಕೆ ಲೇಡಿ ಸೂಪರ್‌ಸ್ಟಾರ್ ಎಂಟ್ರಿ - ನಿರ್ದೇಶಕ ಸುಕುಮಾರ್ ಪ್ಲ್ಯಾನ್ ಏನು?

ರಾಮ್ ಚರಣ್ ಅವರ ಮುಂದಿನ ಸಿನಿಮಾ RC17 ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

Read Full Story
09:02 PM (IST) Jul 15

India Latest News Live 15 July 2026ಪಾತಾಳಕ್ಕೆ ಕುಸಿದ ಬಾಬಾ ರಾಮ್‌ದೇವ್‌ ಪತಂಜಲಿ, ಒಂದೇ ದಿನ ಶೇ. 15ರಷ್ಟು ಮಹಾಕುಸಿತ!

ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಷೇರುಗಳು ಶೇ. 20ರಷ್ಟು ಕುಸಿದು 52 ವಾರಗಳ ಕನಿಷ್ಠ ಮಟ್ಟ ತಲುಪಿವೆ. ಇತ್ತೀಚೆಗೆ ಕಂಪನಿಯು ಉತ್ತಮ ಲಾಭ ಗಳಿಸಿದ್ದರೂ, ಈ ಹಠಾತ್ ಕುಸಿತವು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಷೇರು ಕುಸಿತಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
Read Full Story
07:02 PM (IST) Jul 15

India Latest News Live 15 July 2026ಮಾರ್ಕೆಟ್​ಗೆ ಬಂದಿದೆ ಹೊಸ ಉದ್ಯೋಗ - ಕೂದಲಿನ ಜೊತೆ ಮಾತನಾಡಿ ಲಕ್ಷ ಲಕ್ಷ ಆದಾಯ! ಏನಿದು ನೋಡಿ

ಇತ್ತೀಚೆಗೆ "ಹೇರ್ ವಿಸ್ಪರರ್" ಎಂಬ ವಿಚಿತ್ರ ಉದ್ಯೋಗವೊಂದು ಟ್ರೆಂಡ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಜನರ ಕೂದಲಿನೊಂದಿಗೆ ಮಾತನಾಡಿ, ಕೂದಲು ಉದುರುವಿಕೆ ಮತ್ತು ಇತರ ಸಮಸ್ಯೆಗಳಿಗೆ ಕಾರಣಗಳನ್ನು ಹೇಳುತ್ತಾರೆ. ಈ ವಿಶಿಷ್ಟ ಸೇವೆಗೆ ಸುಮಾರು 5,000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
Read Full Story
05:55 PM (IST) Jul 15

India Latest News Live 15 July 2026ಮಿನಿಮಲ್ ಸ್ಟೈಲ್, ಮ್ಯಾಕ್ಸಿಮಮ್ ಗ್ಲಾಮರ್ - 'ಧುರಂಧರ್' ಸಾರಾ ಅರ್ಜುನ್ ಹೊಸ ಅವತಾರ ವೈರಲ್

ರಣವೀರ್ ಸಿಂಗ್ ನಟನೆಯ 'ಧುರಂಧರ್' ಫ್ರಾಂಚೈಸಿಯಲ್ಲಿ ಯಾಲಿನಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅರ್ಜುನ್, ಇದೀಗ ತಮ್ಮ ಲೇಟೆಸ್ಟ್ ಫೋಟೋಶೂಟ್‌ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.

Read Full Story
05:50 PM (IST) Jul 15

India Latest News Live 15 July 2026ಕೇತನ್ ಕೊಲೆ - ಪ್ರಧಾನಿಗೆ ತಲುಪಿದ ತಾಯಿಯ ಕಣ್ಣೀರ ಪತ್ರ! ದಯವಿಟ್ಟು ಇದನ್ನು ಇನ್ನೊಂದು ಘಟನೆಯಾಗಿಸಬೇಡಿ

ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಕೊಲೆ ಮಾಡಿದ್ದರು. ನ್ಯಾಯ ಸಿಗುವುದಿಲ್ಲವೇನೋ ಎಂಬ ಆತಂಕದಲ್ಲಿರುವ ಕೇತನ್ ತಾಯಿ ರಾಖಿ ಅಗರ್ವಾಲ್, ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾವನಾತ್ಮಕ ಪತ್ರ ಬರೆದು, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸುವಂತೆ ಕಣ್ಣೀರಿನ ಮನವಿ ಮಾಡಿದ್ದಾರೆ.
Read Full Story
05:36 PM (IST) Jul 15

India Latest News Live 15 July 2026ರೈಲಿನ ಬೆಡ್‌ಶೀಟ್ ಮನೆಗೆ ತರ್ತೀರಾ? ಭಾರತೀಯ ರೈಲ್ವೆಗೆ ನೂರಾರು ಕೋಟಿ ರುಪಾಯಿ ನಷ್ಟ..! ಸಿಕ್ಕಿಬಿದ್ರೆ ಜೈಲೂಟ ಗ್ಯಾರಂಟಿ!

ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್‌ರೋಲ್ ಕಿಟ್‌ಗಳು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಡ್‌ರೋಲ್ ವಸ್ತುಗಳು ಕಣ್ಮರೆಯಾಗಿದ್ದು, ಇದರಿಂದ ರೈಲ್ವೆ ವ್ಯವಸ್ಥೆಗೆ ₹104 ಕೋಟಿಗೂ ಹೆಚ್ಚು ನಷ್ಟವಾಗಿದೆ.

Read Full Story
05:31 PM (IST) Jul 15

India Latest News Live 15 July 2026ಇಂಡೋ-ನೇಪಾಳ ಗಡಿಯಲ್ಲಿ ಶಂಕಿತ ಅಮೆರಿಕನ್ ನೌಕಾಪಡೆ ಮಾಜಿ ಯೋಧನ ಬಂಧನ, ಬಯಲಾಯ್ತು ಬೆಂಗಳೂರು, ಗೋವಾ ಲಿಂಕ್!

ವೀಸಾ, ಪಾಸ್‌ಪೋರ್ಟ್ ಇಲ್ಲದೆ ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ ಅಮೆರಿಕದ ಜೋರ್ಡಾನ್ ಬ್ರೌನ್ ಎಂಬಾತನನ್ನು ಸೋನೌಲಿ ಗಡಿಯಲ್ಲಿ ಬಂಧಿಸಲಾಗಿದೆ. ಈತ 8 ತಿಂಗಳು ಬೆಂಗಳೂರು ಮತ್ತು ಗೋವಾದಲ್ಲಿ ತಂಗಿದ್ದು, ವಿಚಾರಣೆ ವೇಳೆ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
Read Full Story
05:20 PM (IST) Jul 15

India Latest News Live 15 July 2026ಕೊನೆಗೂ ಆ ಸೀಕ್ರೆಟ್ ರಿವೀಲ್.. - ಪ್ರಿಯಾಂಕಾ ಚೋಪ್ರಾಗೆ ನಿಕ್ ಕಳಿಸಿದ ಮೊದಲ ಸಂದೇಶ ಬಹಿರಂಗ

ಕೊನೆಗೂ ಆ ಸೀಕ್ರೆಟ್ ರಿವೀಲ್ ಆಗಿದೆ! ಪ್ರಿಯಾಂಕಾ ಚೋಪ್ರಾಗೆ ತಾವು ಕಳಿಸಿದ್ದ ಮೊದಲ ಮೆಸೇಜ್ ಬಗ್ಗೆ ನಿಕ್ ಜೋನಸ್ ಅವರೇ ಹೇಳಿಕೊಂಡಿದ್ದಾರೆ. 'ಹೇ ಜೋನಸ್' ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಾಗ, ಇಬ್ಬರೂ ಮುಜುಗರದಿಂದ ನಕ್ಕಿದ್ದು ಕ್ಯೂಟ್ ಆಗಿತ್ತು.

Read Full Story
04:47 PM (IST) Jul 15

India Latest News Live 15 July 2026ಪಂಡಿತ್ ಭವಿಷ್ಯ ನಿಜವಾಯ್ತು, ಫಿಫಾ ವಿಶ್ವಕಪ್‌ನಿಂದ ಫ್ರಾನ್ಸ್ ಔಟ್! ಈಗ ಅರ್ಜೆಂಟೀನಾ ಫ್ಯಾನ್ಸ್‌ಗೆ ಶುರುವಾಯ್ತು ನಡುಕ!

ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸ್ಪೇನ್ ಗೆಲ್ಲುತ್ತದೆ ಎಂಬ ಸಂತೋಷ್ ಪಂಡಿತ್‌ರ ಭವಿಷ್ಯ ನಿಜವಾಗಿದೆ. ಇದೀಗ, ಇಂಗ್ಲೆಂಡ್ ತಂಡ ಅರ್ಜೆಂಟೀನಾವನ್ನು ಸೋಲಿಸಿ, ಫೈನಲ್‌ನಲ್ಲಿ ಸ್ಪೇನ್‌ಅನ್ನು ಮಣಿಸಿ ಕಪ್ ಗೆಲ್ಲಲಿದೆ ಎಂದು ಅವರು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Read Full Story
04:23 PM (IST) Jul 15

India Latest News Live 15 July 2026IND vs ENG 2nd ODI - ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿದೆ ಸಂಭಾವ್ಯ ತಂಡ.

Read Full Story
03:25 PM (IST) Jul 15

India Latest News Live 15 July 202616 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್; ಫ್ರಾನ್ಸ್ ಕನಸು ಭಗ್ನ!

2026ರ ಫಿಫಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್ ಅನ್ನು 2-0 ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಸ್ಪೇನ್ ಪರ ಮಿಕೆಲ್ ಒಯರ್ಸಬಾಲ್ ಮತ್ತು ಪೆಡ್ರೊ ಪೊರೊ ಗೋಲು ಗಳಿಸಿದರೆ, ಫ್ರಾನ್ಸ್‌ನ ಸ್ಟಾರ್ ಆಟಗಾರರನ್ನು ಕಟ್ಟಿಹಾಕುವಲ್ಲಿ ಸ್ಪೇನ್ ಯಶಸ್ವಿಯಾಯಿತು.
Read Full Story
02:52 PM (IST) Jul 15

India Latest News Live 15 July 2026Supreme Court - ಸುಪ್ರೀಂ ಕೋರ್ಟ್‌ನಲ್ಲೇ ಪೇಪರ್ ಎಸೆದು ಸಿಜೆಗೆ ನಿಂದಿಸಿದ ಇಬ್ಬರು ಕಾನೂನು ವಿದ್ಯಾರ್ಥಿಗಳ ಬಂಧನ

ಸುಪ್ರೀಂ ಕೋರ್ಟ್ ಕಲಾಪದ ವೇಳೆ ಗಲಾಟೆ ಮಾಡಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಲಕ್ನೋ ವಿಶ್ವವಿದ್ಯಾಲಯದ ಇಬ್ಬರು ಕಾನೂನು ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪ್ರಬಲ್ ಪ್ರತಾಪ್ ಸಿಂಗ್ ಎಂಬಾತನೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
Read Full Story
02:36 PM (IST) Jul 15

India Latest News Live 15 July 2026ಯುವತಿಯ ಆನ್‌ಲೈನ್ ಆರ್ಡರ್‌ನಲ್ಲಿತ್ತು ಕಾನ್ಫಿಡೆನ್ಶಿಯಲ್ ಫೋಟೋ, ಆತಂಕದಿಂದ ತೆರೆದಾಗ ಕಾದಿತ್ತು ಅಚ್ಚರಿ

ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯಂತ ರಹಸ್ಯ ಫೋಟೋಗಳು ಅನ್ನೋ ಎನ್‌ವಲಪ್ ಕವರ್ ಇದೇ ಆರ್ಡರ್ ಒಳಗಿತ್ತು. ಆತಂಕದಿಂದಲೇ ಯುವತಿ ಈ ಕವರ್ ತೆರೆದಾಗ ಅಚ್ಚರಿ ಕಾದಿತ್ತು.

Read Full Story
01:53 PM (IST) Jul 15

India Latest News Live 15 July 2026ಅಹಮದಾಬಾದ್ ವಿಮಾನ ದುರಂತ - 13 ತಿಂಗಳ ಬಳಿಕ ಸುಪ್ರೀಂಗೆ AAIBಯಿಂದ ಅಫಿಡವಿಟ್ ಸಲ್ಲಿಕೆ

2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Read Full Story
01:37 PM (IST) Jul 15

India Latest News Live 15 July 2026ತಿರಸ್ಕೃತರಿಂದಲೇ ಸನ್ಮಾನ - ಶೌಚಾಲಯ ಕ್ಲೀನ್​ ಮಾಡುತ್ತಲೇ ಮಂಗಳನ ಅಂಗಳದವರೆಗೆ- ಧೀರೆಯ ರೋಚಕ ಸ್ಟೋರಿ

14ನೇ ವಯಸ್ಸಿನಲ್ಲಿ ನಾಸಾದಿಂದ ತಿರಸ್ಕೃತಳಾದ ಕ್ಲೇರ್ ಪರ್ಫಿಟ್, ಬಾಹ್ಯಾಕಾಶ ಶೌಚಾಲಯ ಸ್ವಚ್ಛಗೊಳಿಸುವ ಕೆಲಸದಿಂದ ವೃತ್ತಿ ಆರಂಭಿಸಿದರು. ತಮ್ಮ ಛಲ ಮತ್ತು ಪರಿಶ್ರಮದಿಂದ ಇಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಮಂಗಳ ಗ್ರಹದ ಪರಿಶೋಧನಾ ತಂಡವನ್ನು ಮುನ್ನಡೆಸುತ್ತಿದ್ದಾರೆ.
Read Full Story
01:16 PM (IST) Jul 15

India Latest News Live 15 July 2026ಪತಿ ಅಕ್ರಮ ಸಂಬಂಧ ಪತ್ತೆಗೆ ಶಾಲೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತ್ನಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ

ಶಿಕ್ಷಕ ಪತಿಯ ಮೇಲೆ ಪತ್ನಿಗೆ ಅನುಮಾನಗಳು ಹೆಚ್ಚಾಗಿದೆ. ಗೊತ್ತಿಲ್ಲದೆ ಶಾಲೆಗೆ ತೆರಳಿ ಹಿಡನ್ ಕ್ಯಾಮೆರಾ ಇಟ್ಟು ಬಂದಿದ್ದಾಳೆ. ಇದರ ಅರಿವೇ ಇಲ್ಲದ ಪತಿ, ಶಾಲಾ ಟೀಚರ್ ಜೊತೆಗಿನ ರಹಸ್ಯ ಕಾರ್ಯಾಚರಣೆಗಳು ಸೆರೆಯಾಗಿದೆ.

Read Full Story
12:54 PM (IST) Jul 15

India Latest News Live 15 July 2026ನಾನಿನ್ನೂ ವರ್ಜಿನ್, ಮದ್ವೆ ಆದ್ಮೇಲೆ - ಸಹನಟಿ ಕ್ಯಾರೆಕ್ಟರ್‌ ಬಗ್ಗೆ ಶಿಲ್ಪಾ ಶಿಂಧೆ ಮಾತು

'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶಿಂಧೆ, ಸಹ ಸ್ಪರ್ಧಿ ಶ್ರೇಯಾ ಕಾಲ್ರಾ ಜೊತೆ ಸೇರಿ ನಟಿ ಶಿವಾಂಗಿ ಜೋಶಿಯವರನ್ನು ಮಿಮಿಕ್ರಿ ಮಾಡಿದ್ದಾರೆ. ಶಿವಾಂಗಿಯವರ ಕ್ಯಾರೆಕ್ಟರ್, ವರ್ಜಿನ್ ಹೇಳಿಕೆ ಬಗ್ಗೆ ಕೊಂಕು ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Read Full Story