ಕರುಪ್ಪು ಟ್ರೇಲರ್ ಶುರುವಾಗುವುದೇ ಒಂದು ಭಾವುಕ ಸನ್ನಿವೇಶದಿಂದ. ವಯಸ್ಸಾದ ವ್ಯಕ್ತಿಯೊಬ್ಬರು ಮತ್ತು ಅವರ ಮೊಮ್ಮಗಳು ವರ್ಷಗಳಿಂದ ತಮ್ಮ ಕೇಸ್ ಇತ್ಯರ್ಥವಾಗದೆ ಪದೇ ಪದೇ ಕೋರ್ಟ್ಗೆ ಅಲೆಯುತ್ತಿರುತ್ತಾರೆ.
- Home
- News
- India News
- India Latest News Live: ಕೋರ್ಟ್ನಲ್ಲೂ ಫೈಟ್, ಹೊರಗೂ ಫೈಟ್ - ಸೂರ್ಯ-ತ್ರಿಶಾ 'ಕರುಪ್ಪು' ಟ್ರೇಲರ್ನಲ್ಲಿ ಆ್ಯಕ್ಷನ್ ಧಮಾಕಾ
India Latest News Live: ಕೋರ್ಟ್ನಲ್ಲೂ ಫೈಟ್, ಹೊರಗೂ ಫೈಟ್ - ಸೂರ್ಯ-ತ್ರಿಶಾ 'ಕರುಪ್ಪು' ಟ್ರೇಲರ್ನಲ್ಲಿ ಆ್ಯಕ್ಷನ್ ಧಮಾಕಾ

ಚೆನ್ನೈ: ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಿಎಂ ವಿಜಯ್ ಪ್ರಮಾಣ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಮತ್ತು ಕೊನೆಯದಾಗಿ ತಮಿಳು ನಾಡಗೀತೆ ನುಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಖುದ್ದು ಸಚಿವ ಆಧವ್ ಅರ್ಜುನ ಹಾಗೂ ಸಿಪಿಐ ಮುಖಂಡ ಸಿಪಿಐ ನಾಯಕ ವೀರಪಾಂಡಿಯನ್ ಆಕ್ಷೇಪಿಸಿದ್ದಾರೆ. ‘ಇದನ್ನು ರಾಜಭವನದ ಗಮನಕ್ಕೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಹಾಡು ನುಡಿಸಲಾಗುತ್ತಿದೆ ಎಂಬ ಉತ್ತರ ಬಂತು. ಹೀಗಾಗಿ ಅನಿವಾರ್ಯವಾಗಿ 3ನೇ ಹಾಡಾಗಿ ತಮಿಳು ನಾಡಗೀತೆ ನುಡಿಸಲಾಗಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯಂತೆ, ಆರಂಭದಲ್ಲಿ ತಮಿಳು ಪ್ರಾರ್ಥನೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಆಧವ್ ಎಂದಿದ್ದಾರೆ.
India Latest News Live 11 May 2026ಕೋರ್ಟ್ನಲ್ಲೂ ಫೈಟ್, ಹೊರಗೂ ಫೈಟ್ - ಸೂರ್ಯ-ತ್ರಿಶಾ 'ಕರುಪ್ಪು' ಟ್ರೇಲರ್ನಲ್ಲಿ ಆ್ಯಕ್ಷನ್ ಧಮಾಕಾ
India Latest News Live 11 May 2026500 ಕೋಟಿ ಆಗದೇ ಇದ್ರೂ, 300 ಕೋಟಿ ಆದ್ರೂ ಬರಲಿ - ದೃಶ್ಯಂ 3 ಕಲೆಕ್ಷನ್ ಬಗ್ಗೆ ಮೋಹನ್ಲಾಲ್ ಯಾಕ್ ಹೀಗಂದ್ರು!
'ದೃಶ್ಯಂ 3' ಕಲೆಕ್ಷನ್ ಬಗ್ಗೆ ಮೋಹನ್ಲಾಲ್ ಹೇಳಿದ ಮಾತುಗಳು ಈಗ ಚರ್ಚೆಗೆ ಬಂದಿವೆ. ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುತ್ತಾ ಅನ್ನೋ ಪ್ರಶ್ನೆಗೆ ಮೋಹನ್ಲಾಲ್ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ.
India Latest News Live 11 May 2026ನೀವು ಅನ್ಯಾಯ ಮಾಡ್ಬೋದು, ಜನರು ವಿಡಿಯೋ ಮಾಡಬಾರದಾ? ಸರ್ಕಾರದ ಬೆವರಿಳಿಸಿದ ಹೈಕೋರ್ಟ- ಆಗಿದ್ದೇನು
India Latest News Live 11 May 2026ಕಥೆ ಕೇಳಿ 20 ನಿಮಿಷ ಮಾತೇ ಬರಲಿಲ್ಲ.. ರಾಮ್ ಚರಣ್ ‘ಪೆದ್ದಿ’ಯಲ್ಲಿ ಭೂಗತ ಕುಸ್ತಿ ಅಖಾಡ - ಸೆಟ್ಗಳೇ ಹೈಲೈಟ್!
ರಾಮ್ ಚರಣ್ ನಟನೆಯ, ರಾಷ್ಟ್ರ ಪ್ರಶಸ್ತಿ ವಿಜೇತ ಬುಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾ 2026ರ ಜೂನ್ 4ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ 70ಕ್ಕೂ ಹೆಚ್ಚು ಸೆಟ್ಗಳನ್ನು ನಿರ್ಮಿಸಿರುವುದಾಗಿ ಪ್ರೊಡಕ್ಷನ್ ಡಿಸೈನರ್ ಅವಿನಾಶ್ ಕೊಲ್ಲಾ ತಿಳಿಸಿದ್ದಾರೆ.
India Latest News Live 11 May 2026ದೇಶದಲ್ಲಿ 60 ದಿನಗಳ ಕಚ್ಚಾ ತೈಲ, ನೈಸರ್ಗಿಕ ಅನಿಲ ನಿಕ್ಷೇಪ, ಕೇವಲ 45ದಿನಗಳ LPG ದಾಸ್ತಾನಿದೆ ಮಿತವಾಗಿ ಬಳಸಿ - ಕೇಂದ್ರ
India Latest News Live 11 May 2026ಅಮೆರಿಕ-ಇರಾನ್ ಯುದ್ಧದ ಎಫೆಕ್ಟ್ - ಭಾರತೀಯರಿಗೆ ಪ್ರಧಾನಿ ಮೋದಿ ವಿಶೇಷ ಮನವಿ
ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್ಡೌನ್ ದಿನಗಳನ್ನು ನೆನಪಿಸಿದವು.
India Latest News Live 11 May 2026ಮಗಳ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಮೋಹನ್ಲಾಲ್? ಏನಿದು 'ತುಡಕ್ಕಂ' ರಹಸ್ಯ!
ಮೋಹನ್ಲಾಲ್ ಪುತ್ರಿ ವಿಸ್ಮಯಾ ನಾಯಕಿಯಾಗಿ ನಟಿಸುತ್ತಿರುವ 'ತುಡಕ್ಕಂ' ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. '2018' ಖ್ಯಾತಿಯ ಜ್ಯೂಡ್ ಆ್ಯಂಟನಿ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
India Latest News Live 11 May 2026ವಾರಣಾಸಿ ಶೂಟಿಂಗ್ ಅಪ್ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ - ರಾಜಮೌಳಿ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ?
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ವಾರಣಾಸಿ'. ಇದೀಗ, ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ಶೆಡ್ಯೂಲ್ ಶೂಟಿಂಗ್ ಶುರುವಾಗುವ ಬಗ್ಗೆ ಸುಳಿವು ನೀಡಿದ್ದಾರೆ.
India Latest News Live 11 May 2026ಏರ್ ಇಂಡಿಯಾದಿಂದ 1 ಸಾವಿರ ಸಿಬ್ಬಂದಿಗಳ ವಜಾ, ಭವಿಷ್ಯದಲ್ಲಿ ಕಷ್ಟದ ದಿನಗಳು ಬರದಂತೆ ಈ ನಿರ್ಧಾರವೆಂದ ಸಿಇಒ!
ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
India Latest News Live 11 May 2026CM ವಿಜಯ್ ಟೀಮ್ನಲ್ಲಿ 22 ಇಂಜಿನಿಯರ್ಸ್-18 ವಕೀಲರು-8 ಡಾಕ್ಟರ್ಸ್-6 PHD ಹೋಲ್ಡರ್ಸ್, ಇನ್ನೂ ಯಾರೆಲ್ಲಾ ಇದಾರೆ? ಹೈ-ಟೆಕ್ ಆರ್ಮಿ ಇದು!
ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!
India Latest News Live 11 May 2026ವಿಜಯ್ ತಮಳುನಾಡು ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸಿದ್ಧತೆ, ನಿರ್ಮಾಪಕರ ಸ್ಪಷ್ಟನೆ!
ತಮಿಳುನಾಡು ಸಿಎಂ ವಿಜಯ್ ಅವರ ಬಹುನಿರೀಕ್ಷಿತ ಅಂತಿಮ ಚಿತ್ರ 'ಜನ ನಾಯಗನ್' ಮತ್ತೆ ಚರ್ಚೆಯಲ್ಲಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪ್ರಕಾರ, ಚಿತ್ರವು ಸೆನ್ಸಾರ್ ಹಂತದಲ್ಲಿದ್ದು, ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
India Latest News Live 11 May 2026ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ
ಆರ್ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.
India Latest News Live 11 May 2026ಬರೀ ಭಾಷಣಕಾರರಿಲ್ಲ, ಹೈಲಿ ಕ್ವಾಲಿಫೈಡ್ ಶಾಸಕರು; ರೀಲ್ ಹೀರೋ ದಳಪತಿ ಅಧಿಪತ್ಯದಲ್ಲಿ 'ರಿಯಲ್ ಹೀರೋ'ಗಳೇ ಹೆಚ್ಚು!
ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ಯಾರೆಲ್ಲಾ ಇದ್ದಾರೆ ನೋಡಿ..
India Latest News Live 11 May 2026ಇಂಧನ ಆತಂಕ ನಡುವೆ 3 ಗಂಟೆಗೆ ಪೆಟ್ರೋಲಿಯಂ ಮಿನಿಸ್ಟ್ರಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ ಇಂಧನ ಪೂರೈಕೆ ಕೊರತೆ ಕುರಿತು ಸೂಚನೆ ನೀಡಿದ ಬೆನ್ನಲ್ಲೇ ಹಲವೆಡೆ ಪೆಟ್ರೋಲ್ ಬಂಕ್ ಕ್ಲೋಸ್ ಆಗುತ್ತಿದೆ. ಈ ಆತಂಕದ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಸುದ್ದಿಗೋಷ್ಠಿ ಕರೆದಿದೆ.
India Latest News Live 11 May 2026ಬಟ್ಟೆ ಮೇಲೆ ಬಿದ್ದ ಕೋಳಿ ಸಾರಿನಿಂದ ಮದ್ವೆ ಮನೆಯಲ್ಲಿ ಜಗಳ ಶುರು, ಓರ್ವ ಸಾವು 6 ಮಂದಿಗೆ ಗಾಯ
ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ.
India Latest News Live 11 May 2026Thalapathy Vijay Daughter - ಎಲ್ಲೂ ಕಾಣಿಸದ ದಳಪತಿ ವಿಜಯ್ ಮಗಳು ದಿವ್ಯಾ ಸಾಮಾನ್ಯದವರಲ್ಲ; ಸಾಧಕಿ!
Thalapathy Vijay Daughter: ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಬಂದಿದೆ. ಇವರ ಪತ್ನಿ ಸಂಗೀತಾ ಅವರು, ವಿಜಯ್ ಓರ್ವ ನಟಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಮಾಡಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಸಿಎಂ ಆಗಿ ಪ್ರಮಾಣ ವಚನಕ್ಕೆ ಸಂಗೀತಾ, ಮಕ್ಕಳಾಗಲೀ ಬಂದಿರಲಿಲ್ಲ.
India Latest News Live 11 May 2026'ಅಂತೂ ವಿಜಯ್ ಅಣ್ಣ ಸಿಎಂ ಆದ್ರು' ಅಂತಿರೋ ಫ್ಯಾನ್ಸ್; ಆದ್ರೆ 'ಅತ್ತಿಗೆ' ಆಗೋರು ಯಾರೆಂಬ ಚರ್ಚೆ ಈಗ ಜೋರು!
ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ.
India Latest News Live 11 May 2026ಭಾರತೀಯ ರೈಲ್ವೆಯ ಚಲಿಸುವ ನರಕ; ತಾಳ್ಮೆ, ಗುಂಡಿಗೆ ಗಟ್ಟಿ ಇದ್ರೆ ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಿ
ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.
India Latest News Live 11 May 2026ಅಮ್ಮಂದಿರ ದಿನ ಇಬ್ಬರು ಮಕ್ಕಳ ಎರಡು ಇಮೋಶನ್, ವಿಜಯ್ ಪ್ರಮಾಣವಚನ ಹಿಂದಿನ ಸಿಹಿ ಕಹಿ
ಜೊಸೆಫ್ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿನ ಸಹಿ ಕಹಿ ಘಟನೆ ತಾಯಂದಿರ ದಿನ ಇಬ್ಬರು ತಾಯಂದಿರ ಗೌರವ ಎತ್ತಿ ಹಿಡಿದಿದೆ. ಮಗ ಸಿಎಂ ಆದ ಸಂದರ್ಭ, ಮಗ ಸಿಎಂ ಪ್ರಮಾಣವಚನಕ್ಕೆ ಗೈರಾದ ಸಂದರ್ಭ. ಏನಿದು ?
India Latest News Live 11 May 2026Mother's Day - ಪತ್ನಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟು "ಅತ್ಯಂತ ಪ್ರೀತಿಯ ಸುಂದರ ಅಮ್ಮನಿಗೆ" ಎಂದು ಬರೆದ ಸಿದ್ಧಾರ್ಥ್ ಮಲ್ಹೋತ್ರಾ!
ಈ ಪೋಸ್ಟ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೀತಿಯ ಉಡುಗೊರೆ. ಸಿದ್ಧಾರ್ಥ್ ತಾವೇ ಸ್ವತಃ ಚಾಕೊಲೇಟ್ ಪ್ಯಾನ್ಕೇಕ್ ತಯಾರಿಸಿದ್ದು, ಅದರ ಮೇಲೆ ಪೀನಟ್ ಬಟರ್ ಬಳಸಿ 'MOM' (ಅಮ್ಮ) ಎಂದು ಬರೆದಿದ್ದರು. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.