ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್‌ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ.

ದಳಪತಿ ಈಗ ತಮಿಳುನಾಡಿನ ಅಧಿಪತಿ: ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ತ್ರಿಶಾ!

Add Asianetnews Kannada as a Preferred SourcegooglePreferred

ಕಾಲಿವುಡ್‌ನ 'ದಳಪತಿ' ವಿಜಯ್ ಈಗ ಕೇವಲ ಬೆಳ್ಳಿ ಪರದೆಯ ನಾಯಕನಲ್ಲ, ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದಿರುವ ಹೊಸ ಮುಖ್ಯಮಂತ್ರಿ! ಭಾನುವಾರ ನಡೆದ ಆ ಐತಿಹಾಸಿಕ ಕ್ಷಣದಲ್ಲಿ ವಿಜಯ್ (Thalapathy Vijay) ತಮಿಳುನಾಡಿನ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಬದುಕಿನ ಅತಿದೊಡ್ಡ ಮೈಲಿಗಲ್ಲನ್ನು ತಲುಪಿದ್ದಾರೆ. ಇಡೀ ತಮಿಳುನಾಡು ಈ ವಿಜಯೋತ್ಸವದಲ್ಲಿ ತೇಲುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೂ ಒಂದು ದೊಡ್ಡ ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಕಾಡುತ್ತಿದೆ - "ಅಣ್ಣನ ಗೆಲುವಿನ ಸಂಭ್ರಮದಲ್ಲಿ ಅಣ್ಣಿ (ಅತ್ತಿಗೆ) ಎಲ್ಲಿದ್ದಾರೆ?" ಎಂಬುದು!

ಮುಂದಿನ ಸಾಲಿನಲ್ಲಿ ಪೋಷಕರು, ಪಕ್ಕದಲ್ಲೇ ತ್ರಿಶಾ: ಎಲ್ಲಿದ್ದಾಳೆ ಸಂಗೀತಾ?

ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಚಂದ್ರಶೇಖರ್ ಮುಂದಿನ ಸಾಲಿನಲ್ಲಿ ಕುಳಿತು ಮಗನ ಸಾಧನೆಯನ್ನು ಕಂಡು ಆನಂದಬಾಷ್ಪ ಸುರಿಸಿದರು. ಆದರೆ, ಎಲ್ಲರ ಕಣ್ಣುಗಳು ಹುಡುಕುತ್ತಿದ್ದುದು ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳನ್ನು. ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಕುಟುಂಬದ ಅನುಪಸ್ಥಿತಿ ಎಲ್ಲರಿಗೂ ತುಸು ಅಚ್ಚರಿ ಮತ್ತು ಅಪೂರ್ಣತೆಯ ಭಾವ ಮೂಡಿಸಿತು. ಪ್ರಸ್ತುತ ಸಂಗೀತಾ ಲಂಡನ್‌ನಲ್ಲಿದ್ದಾರೆ ಎಂಬ ವರದಿಗಳಿವೆ. ಇಡೀ ರಾಜ್ಯವೇ ಸಂಭ್ರಮಿಸುತ್ತಿದ್ದರೂ, ಪತಿ ಸಿಎಂ ಆದ ಬಗ್ಗೆ ಸಂಗೀತಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಕೂಡ ಮಾಡದಿರುವುದು ಅಭಿಮಾನಿಗಳಲ್ಲಿ ಅನುಮಾನದ ಕಿಚ್ಚು ಹಚ್ಚಿದೆ.

ತ್ರಿಶಾ ಕೃಷ್ಣನ್ ಎಂಟ್ರಿ ಮತ್ತು ಹಬ್ಬಿರೋ ವದಂತಿಗಳು!

ಈ ಸಮಾರಂಭದ ಹೈಲೈಟ್ ಎಂದರೆ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಉಪಸ್ಥಿತಿ. ವಿಜಯ್ ಅವರ ಅತ್ಯಾಪ್ತ ಗೆಳತಿ ಎನ್ನಲಾಗುವ ತ್ರಿಶಾ, ಮುಂದಿನ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ಈಗ ಕಾಲಿವುಡ್ ಅಂಗಳದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಜಯ್ ಮತ್ತು ತ್ರಿಶಾ ನಡುವಿನ ಸ್ನೇಹದ ಬಗ್ಗೆ ಈ ಹಿಂದೆಯೇ ಹಲವು ಗಾಳಿಸುದ್ದಿಗಳು ಹರಿದಾಡಿದ್ದವು. ಈಗ ಪತ್ನಿ ಇಲ್ಲದ ಸಮಯದಲ್ಲಿ ತ್ರಿಶಾ ಹಾಜರಿರುವುದು ಅಭಿಮಾನಿಗಳ ನಡುವೆ ಹೊಸ ಪಿಸುಮಾತಿಗೆ ನಾಂದಿ ಹಾಡಿದೆ.

ಪತ್ನಿ ಮನಸ್ಸು ಬದಲಿಸುತ್ತಾರಾ? ಅಥವಾ ವಿಚ್ಛೇದನ ಫಿಕ್ಸ್?

ಸಂಗೀತಾ ಅವರ ಈ ಗೈರುಹಾಜರಿಯನ್ನು ನೋಡಿ ಅನೇಕರು ವಿಜಯ್ ಮತ್ತು ಸಂಗೀತಾ ನಡುವಿನ ವೈವಾಹಿಕ ಜೀವನ ಅಂತ್ಯಗೊಂಡಿದೆ, ವಿಚ್ಛೇದನ ಖಚಿತ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಅಭಿಮಾನಿಗಳ ಒಂದು ವರ್ಗ ಮಾತ್ರ ಆಶಾವಾದದ ಮಾತುಗಳನ್ನಾಡುತ್ತಿದೆ. "ಈಗ ವಿಜಯ್ ಒಂದು ರಾಜ್ಯದ ಮುಖ್ಯಮಂತ್ರಿ. ಇಷ್ಟು ದೊಡ್ಡ ಜವಾಬ್ದಾರಿ ಹೊತ್ತಿರುವ ಪತಿಯನ್ನು ನೋಡಿ ಸಂಗೀತಾ ಮನಸ್ಸು ಕರಗಬಹುದು. ಹಳೆಯ ಕಹಿ ಘಟನೆಗಳನ್ನು ಮರೆತು ಅವರು ಮತ್ತೆ ಒಂದಾಗಬಹುದು," ಎಂಬುದು ಅವರ ವಾದ.

ಮಿಲಿಯನ್ ಡಾಲರ್ ಪ್ರಶ್ನೆ!

ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್‌ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ. ದಳಪತಿ ವಿಜಯ್ ರಾಜಕೀಯ ಇತಿಹಾಸ ಬರೆಯುತ್ತಿದ್ದಾರೆ ನಿಜ, ಆದರೆ ಈ ಇತಿಹಾಸದ ಪುಟಗಳಲ್ಲಿ ಸಂಗೀತಾ ಹೆಸರು ಸ್ಥಾನ ಪಡೆಯುತ್ತದೆಯೇ ಎಂಬುದು ಸದ್ಯಕ್ಕೆ ಸಸ್ಪೆನ್ಸ್!

ಒಟ್ಟಿನಲ್ಲಿ, ವಿಜಯ್ ಅವರ ಈ ರಾಜಕೀಯ ಪಯಣ ಸಿನಿಮಾದಷ್ಟೇ ರೋಚಕ ತಿರುವುಗಳನ್ನು ಪಡೆಯುತ್ತಿರುವುದಂತೂ ಸುಳ್ಳಲ್ಲ!