MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ

ಕ್ರುನಾಲ್ ಪಾಂಡ್ಯ ಅಲ್ಲೇ ಸಾಯಲಿ, RCB ವಿರುದ್ದ ಕಮೆಂಟ್ರಿ ಹೇಳಿದ ಬದ್ರಿನಾಥ್ ವಜಾಗೆ ಹೆಚ್ಚಿದ ಆಕ್ರೋಶ

ಆರ್‌ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್‌ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ. 

2 Min read
Author : Chethan Kumar
Published : May 11 2026, 03:28 PM IST
Share this Photo Gallery
  • FB
  • TW
  • Linkdin
  • Whatsapp
16
ವಿಷ ಕಾರಿದ ತಮಿಳು ಕಮೆಂಟೇಟರ್ ಎಸ್ ಬದ್ರಿನಾಥ್
Image Credit : x social media

ವಿಷ ಕಾರಿದ ತಮಿಳು ಕಮೆಂಟೇಟರ್ ಎಸ್ ಬದ್ರಿನಾಥ್

ಮುಂಬೈ ಇಂಡಿಯನ್ಸ್ ವಿರುದ್ದ ಕ್ರುನಾಲ್ ಪಾಂಡ್ಯ ದಿಟ್ಟ ಹೋರಾಟ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟಿತ್ತು. ಇದರ ನಡುವೆ ಇಂಜುರಿಗೆ ತುತ್ತಾದ ಕ್ರುನಾಲ್ ಪಿಚ್‌ನಲ್ಲಿ ಬಿದ್ದಿದ್ದರು. ಈ ವೇಳೆ ತಮಿಳು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಕಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಾತಿ ಮಾತಿಗೂ ವಿಷ ಕಾರಿದ ಬದ್ರಿನಾತ್ ಕ್ರುನಾಲ್ ಪಾಂಡ್ಯ ಅಲ್ಲೆ ಸಾಯಲಿ ಎಂದು ಕಮೆಂಟ್ರಿ ಹೇಳಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred
26
ಮುಂಬೈ ಕ್ರೀಡಾಸ್ಪೂರ್ತಿ ಮೆರೆದೆರೆ, ಕಮೆಂಟೇಟರ್ ವಿಷ ಕಕ್ಕಿದ
Image Credit : x

ಮುಂಬೈ ಕ್ರೀಡಾಸ್ಪೂರ್ತಿ ಮೆರೆದೆರೆ, ಕಮೆಂಟೇಟರ್ ವಿಷ ಕಕ್ಕಿದ

ಈ ರೋಚಕ ಪಂದ್ಯದ ಕೊನೆಯ ಎಸೆತದಲ್ಲಿ ಆರ್‌ಸಿಬಿ ಎರಡು ವಿಕೆಟ್‌ಗಳ ಜಯ ಸಾಧಿಸಿತು. ತೀವ್ರ ಕಾಲಿನ ನೋವಿನೊಂದಿಗೆ ಹೋರಾಡಿದ ಕೃನಾಲ್ ಪಾಂಡ್ಯ, 46 ಎಸೆತಗಳಲ್ಲಿ 73 ರನ್ ಗಳಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಬ್ಯಾಟಿಂಗ್ ವೇಳೆ ಕೃುನಾಲ್ ಪಾಂಡ್ಯ ನೋವಿನಿಂದ ಕ್ರೀಸ್‌ನಲ್ಲೇ ಕುಸಿದುಬಿದ್ದರು. ಆಗ ಎದುರಾಳಿ ತಂಡದ ವಿಕೆಟ್‌ಕೀಪರ್, ಮುಂಬೈ ಇಂಡಿಯನ್ಸ್‌ನ ರಿಯಾನ್ ರಿಕೆಲ್ಟನ್ ತಕ್ಷಣವೇ ಪಾಂಡ್ಯ ಬಳಿ ಓಡಿಬಂದು ಸಹಾಯ ಮಾಡಲು ಮುಂದಾದರು. ಇದು ಅವರ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿತ್ತು.

Related Articles

Related image1
ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ
Related image2
ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ
36
ತಮಿಳು ಕಮೆಂಟೇಟರ್ ಬದ್ರಿನಾಥ್ ಕಮೆಂಟ್ರಿಯಲ್ಲಿ ವ್ಯಂಗ್ಯ ಹಾಗೂ ವಿಷ
Image Credit : S Badrinath

ತಮಿಳು ಕಮೆಂಟೇಟರ್ ಬದ್ರಿನಾಥ್ ಕಮೆಂಟ್ರಿಯಲ್ಲಿ ವ್ಯಂಗ್ಯ ಹಾಗೂ ವಿಷ

ತಮಿಳು ಕಾಮೆಂಟರಿ ಮಾಡುತ್ತಿದ್ದ ಬದ್ರಿನಾಥ್, "ರಿಯಾನ್ ರಿಕೆಲ್ಟನ್ ಪಾಂಡ್ಯಗೆ ಸಹಾಯ ಮಾಡಬಾರದು, ಅವನು ಅಲ್ಲೇ ಸಾಯಲಿ,ಆರ್‌ಸಿಬಿ ತಂಡ ಸೋಲುತ್ತದೆ ಎಂದು ಕಮೆಂಟ್ರಿ ಹೇಳಿದ್ದಾರೆ. ಬದ್ರಿನಾಥ್ ಅವರ ಈ ಮಾತು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್‌ನ ಮೂಲ ಆಶಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

46
ಬದ್ರಿನಾಥ್ ಅಮಾನತಿಗೆ ಆಗ್ರಹ
Image Credit : Getty

ಬದ್ರಿನಾಥ್ ಅಮಾನತಿಗೆ ಆಗ್ರಹ

ಕಮೆಂಟೇಟರ್‌ನಿಂದ ತಕ್ಷಣವೇ ಎಸ್ ಬದ್ರಿನಾಥ್ ವಜಾ ಮಾಡಬೇಕು. ಇಷ್ಟೇ ಅಲ್ಲ ಯಾವುದೇ ಕ್ರಿಕೆಟಿಂಗ್ ಹುದ್ದೆ ನೀಡಬಾರದು. ಕ್ರೀಡಾಸ್ಪೂರ್ತಿಯೇ ಇಲ್ಲದ ಎಸ್ ಬದ್ರಿನಾಥ್ ಕ್ರಿಕೆಟರ್ ಆಗಿರುವ ಅರ್ಹರಲ್ಲ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.

56
ಸ್ಪಷ್ಟನೆ ನೀಡಿದ ಬದ್ರಿನಾಥ್
Image Credit : ANI

ಸ್ಪಷ್ಟನೆ ನೀಡಿದ ಬದ್ರಿನಾಥ್

ಭಾರಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಸ್ ಬದ್ರಿನಾಥ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಹೇಳಿಕೆ ತಿರುಚಿ ಅರ್ಥೈಸಲಾಗಿದೆ. ವೈರಿ ತಂಡಗಳು ಪರಸ್ಪರ ಹೇಗೆ ಸಹಾಯ ಮಾಡುತ್ತಿದೆ ಅನ್ನೋ ಕುರಿತು ಕಮೆಂಟರಿಯಲ್ಲಿ ಹೇಳಿದ್ದೇನೆ. ಇದರಲ್ಲಿ ಸಾಯಲಿ ಅನ್ನೋ ಅರ್ಥವಿಲ್ಲ ಎಂದೆಲ್ಲಾ ಸ್ಪಷ್ಟನೆ ನೀಡಿದ್ದಾರೆ.ಆದರೆ ಬದ್ರಿನಾಥ್ ಕಮೆಂಟರಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

66
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ
Image Credit : Getty

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ

"ತುಂಬಾ ಅವಮಾನಕಾರಿ ಹೇಳಿಕೆ. ಕ್ರಿಕೆಟ್ ಅಂದರೆ ಗೌರವ, ನೋವನ್ನು ಅಣಕಿಸುವುದಲ್ಲ."

"ರಿಕೆಲ್ಟನ್ ನಿಜವಾದ ಕ್ರೀಡಾಸ್ಫೂರ್ತಿ ತೋರಿಸಿದರು, ಬದ್ರಿನಾಥ್‌ನಲ್ಲಿ ಅದು ಇರಲಿಲ್ಲ."

"ಕಾಮೆಂಟರಿಯಲ್ಲಿ ಇಂತಹ ಅಸಂವೇದನಾಶೀಲ ಜೋಕ್‌ಗಳಿಗೆ ಜಾಗವಿಲ್ಲ."

"ಕೃನಾಲ್ ನೋವಿನಲ್ಲೂ ಹೋರಾಡಿದ್ದಾರೆ, ಅವರಿಗೆ ಚಪ್ಪಾಳೆ ಸಿಗಬೇಕು."

"ಆಟಗಾರರಿಗೆ ನಿಮ್ಮ ಕಮೆಂಟ್ರಿ ಬೇಕಿಲ್ಲ, ವೀಕ್ಷಕರಿಗೆ ನಿಮ್ಮ ವಿಷ ಬೇಕಾಗಿಲ್ಲ

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಮಹಾಪೂರ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಐಪಿಎಲ್
ಕ್ರಿಕೆಟ್
ತಮಿಳುನಾಡು

Latest Videos
Recommended Stories
Recommended image1
ಇವರೇ ಕ್ರಿಕೆಟ್ ಇತಿಹಾಸದ ಅಪಾಯಕಾರಿ ಬ್ಯಾಟರ್ಸ್! ಕ್ರೀಸ್‌ಗೆ ಬಂದ್ರೆ ಬೌಲರ್‌ಗಳಿಗೆ ನಡುಕ!
Recommended image2
ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ
Recommended image3
ಐಪಿಎಲ್ 2026ರಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಔಟ್, ಪ್ಲೇ ಆಫ್ ರೇಸ್‌ನಲ್ಲಿ 7+1 ತಂಡ
Related Stories
Recommended image1
ರಾಯಚೂರಿನಲ್ಲೂ ಘರ್ಜಿಸಿದ ಆರ್‌ಸಿಬಿ, ಎಡವಟ್ಟು ಮಾಡಿ ತಕ್ಷಣವೇ ತಿದ್ದಿ ಮನಗೆದ್ದ ವಿಜಯ್ ಮಲ್ಯ
Recommended image2
ಆರ್‌ಸಿಬಿ ಪ್ಲೇ ಆಫ್‌ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved