
ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದುಗುಳಿಯ ಕಾನನದೊಳಗೆ ನೆಲೆನಿಂತಿರುವ ಘಂಟೆ ಗಣಪತಿ ಕ್ಷೇತ್ರವು ಮಹಿಮೆಯಿಂದ ಪ್ರಸಿದ್ಧವಾಗಿದೆ. ವಿನಾಯಕ ಚತುರ್ಥಿಯ ದಿನ ಈ ಸುಕ್ಷೇತ್ರದಲ್ಲಿ ದರ್ಶನ ಮಾಡುವುದು ಅತ್ಯಂತ ಶುಭಕರವಾಗಿದೆ. ಇಲ್ಲಿ ಗಣೇಶನ ದರ್ಶನ ಮಾಡುವಾಗ ಘಂಟಾ ಶ್ರವಣದಿಂದಲೇ ಫಲಸಿದ್ಧಿ ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಘಂಟೆ ಸಮರ್ಪಣೆ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ. ನೊಂದ ಮನಸ್ಸುಗಳಿಗೆ ಶಾಂತಿ ಮತ್ತು ಸಮಾಧಾನವನ್ನು ತರುವ ಪವಿತ್ರ ಸ್ಥಳವೆಂದು ಭಕ್ತರು ನಂಬುತ್ತಾರೆ. ಜೀವನದ ಸಮಸ್ಯೆಗಳಿಗೆ ಹೂವಿನ ಪ್ರಸಾದ ಕೇಳುವ ಪರಂಪರೆ ಈ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಗಣೇಶನು ಹೂವಿನ ಪ್ರಸಾದ ರೂಪದಲ್ಲಿ ಭಕ್ತರಿಗೆ ವರವನ್ನು ನೀಡುತ್ತಾನೆ ಎಂದು ವಿಶ್ವಾಸವಿದೆ.