ಬಿಗ್ ಬಾಸ್ ರಹಸ್ಯ ಬಯಲು: ತೆರೆಮರೆಯ ಅಸಲಿ ಬಾಸ್ ಯಾರೆಂದು ರಿವೀಲ್ ಮಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ!

ಕನ್ನಡ ಬಿಗ್ ಬಾಸ್‌ನ ನಿಜವಾದ ಬಾಸ್ ಯಾರು ಎಂಬ ರಹಸ್ಯ ಈಗ ಬಯಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಶೋಗೆ ಬೀಗ ಹಾಕಿದಾಗ, ಕಿಚ್ಚ ಸುದೀಪ್ ಅವರೇ ಮಧ್ಯಪ್ರವೇಶಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು. 

Share this Video
  • FB
  • Linkdin
  • Whatsapp

ಬಿಗ್​ಬಾಸ್, ಈ ಕಂಠದ ಹಿಂದೆ ಬಿದ್ದವರು ಅದೆಷ್ಟೋ ಜನ.. ಈ ಬಿಗ್​ ಬಾಸ್ ಯಾರು..? ಬರಿ ವಾಯ್ಸ್ ಬಿಟ್ರೆ ಅವರ ಮುಖವನ್ನ ಇದುವರೆಗೂ ನೋಡೇ ಇಲ್ಲವಲ್ಲ ಅಂತ ಬಿಗ್​ಬಾಸ್​​ನ ಹುಡುಕಿದವರು ಲಕ್ಷಾಂತರ ಜನ. ಆದ್ರೆ ಈಗ ಒಂಟಿ ಮನೆಯ ರಿಯಲ್ ಬಿಗ್​ಬಾಸ್​ ಯಾರು ಅನ್ನೋ ಸೀಕ್ರೆಟ್​ ರಿವಿಲ್ ಆಗಿದೆ. ಆ ಸತ್ಯವನ್ನ ಬಿಟ್ಟಿಟ್ಟಿರೋದು ಮಾಲಿನ್ಯ ನಿಯಂತ್ರಣ ಮಂಡಳಿ. ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್​​​​ಬಾಸ್ ಶೋ ನಡೆಯುತ್ತಿರೋ ಇನವೇಟೀವ್ ಫಿಲ್ಮ್ ಸಿಟಿಗೆ ಬೀಗ ಜಡಿದಿದ್ದೇ ತಡ.. ಅಲ್ಲಿದ್ದ ಬಿಗ್​​ಬಾಸ್​​​​​​ ಯಾರು ಅನ್ನೋದು ಬಟಾ ಬಯಲಾಗಿದೆ. ಅಷ್ಟಕ್ಕು ಕನ್ನಡದ ಆ ಬಿಗ್​ ಬಾಸ್ ಯಾರು ಗೊತ್ತಾ..? ಕಂಠ ಬೇರೆ ಆದ್ರು ಆ ಬಿಗ್​​ಬಾಸ್ ಶಕ್ತಿ ಕಿಚ್ಚ ಸುದೀಪ್.

Add Asianetnews Kannada as a Preferred SourcegooglePreferred

ಬಿಗ್​ಬಾಸ್​​ ವಿಷಯಕ್ಕೆ ಬಂದ್ರೆ ರಿಯಲ್ ಬಿಗ್​ಬಾಸ್​ ಅಂದ್ರೆ ಅದು ಕಿಚ್ಚ ಸುದೀಪ್.. ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಹಾಗುತ್ತಿದ್ದಂತೆ ಎಚ್ಚೆತ್ತ ಕಿಚ್ಚ ಸುದೀಪ್ ರಾತ್ರೋ ರಾತ್ರಿ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್​ ಜೊತೆ ಮಾತನಾಡಿ ಬಿಗ್​ಬಾಸ್ ಮನೆ ರೀ ಓಪನ್ ಆಗೋ ಹಾಗೆ ನೋಡಿಕೊಂಡ್ರು. ಕಾರ್ಯಕ್ರಮ ಆಯೋಜಕರು ಮಾಡಲು ಆಗದ ಕೆಲಸವನ್ನ ಬಾದ್​ಷಾ ಮಾಡಿ ಮುಗಿಸಿದ್ರು..

ಅಷ್ಟೆ ಅಲ್ಲ ಬಿಗ್​​​ಬಾಸ್​ ಸೀಸನ್ 12 ವರೆಗೆ ದೊಡ್ಡ ಶೋ ಆಗಿ ಮೂಡಲು ಕಾರಣ ಸುದೀಪ್..ಅವರ ಬ್ರ್ಯಾಂಡ್ ವ್ಯಾಲ್ಯೂ, ವ್ಯಕ್ತಿತ್ವ, ಖಡಕ್​ ಮಾತು, ಪ್ರತಿಯೊಂದು ವಿಷಯದಲ್ಲಿ ಸ್ಟ್ಯಾಂಡ್ಗ್ ತೆಗೆದುಕೊಳ್ಳೋ ಕಲೆ. ಎಲ್ಲವೂ ಸುದೀಪ್ ಬಿಟ್ರೆ ಈ ಬಿಗ್ ಶೋ ನಡೆಸಿಕೊಡೋಕೆ ಬೇರೆ ಆಪ್ಷನ್ನೇ ಇಲ್ಲದಂತೆ ಮಾಡಿದೆ. ಹೀಗಾಗೆ ಬಿಗ್​​ಬಾಸ್​ಗೆ ಸುದೀಪ್ ಅನಿವಾರ್ಯ..

ಇದಕ್ಕೆ ನಿದರ್ಶನ ಅಂದ್ರೆ ಕಿಚ್ಚ ಸುದೀಪ್​ ಬಿಗ್​ಬಾಸ್​ನಿಂದ ಹೊರ ಬಂದಾಗ. ಕಾರ್ಯಕ್ರಮ ಆಯೋಜಕರು ಕಿಚ್ಚನಿಗಾಗೆ ದುಂಬಾಲು ಬಿದ್ದಿದ್ರು, ನೀವಿಲ್ಲ ಅಂದ್ರೆ ಬಿಗ್​​ಬಾಸ್​ ಕನ್ನಡ ಇಲ್ಲ ಎಂದು ಸುದೀಪ್​ರ ಎಲ್ಲಾ ಬೇಡಿಕೆ ಈಡೇರಿಸಿ ಮನ ವೊಲಿಸಿ ಮತ್ತೆ ಕರೆ ತಂದಿದ್ದಾರೆ. ಈಗ ಬಿಗ್​ಬಾಸ್​ಗೆ ಸಂಕಷ್ಟ ಎದುರಾದಾಗ ರಾತ್ರೋ ರಾತ್ರಿ ಡಿಕೆಶಿ ಜೊತೆ ಮಾತಾಡಿ ಸಮಸ್ಯೆ ಬಗೆ ಹರಿಸಿ ಮತ್ತೆ ಬಿಗ್ ಬಾಸ್ ಶುರುವಾಗೋ ಹಾಗೆ ಮಾಡಿದ್ದು ಸುದೀಪ್. ಹೀಗಾಗಿ ಇಷ್ಟು ದಿನ ಕನ್ನಡ ಕಿರುತೆರೆಯಲ್ಲಿ ಬರೋ ಬಿಗ್​​ಬಾಸ್​​​ ಯಾರು ಅಂತ ಹುಡುಕುತ್ತಿದ್ದವರಿಗೆ ಆ ರಿಯಲ್ ಬಿಗ್​ಬಾಸ್ ಕಿಚ್ಚನೇ ಅನ್ನೋದು ಗೊತ್ತಾಗಿದೆ.

Related Video