Madenur Manu ವಿರುದ್ಧ ಆರೋಪ ಮಾಡಿ, ನ್ಯಾಯ ಕೊಡಿಸಿ ಎಂದಿದ್ದ ಸಂತ್ರಸ್ತೆ ಈಗ ಕೇಸ್‌ ಹಿಂಪಡೆದಿದ್ದು ಯಾಕೆ?

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅತ್ಯಾ*ಚಾರ ಆರೋಪ ಹೊತ್ತು ಜೈಲು ಸೇರಿದ್ದ ವಿಷ್ಯ ಗೊತ್ತೇ ಇದೆ. ಈಗ ಮಡೆನೂರು ಕೇಸ್​ ಮುಕ್ತಾಯ ಗೊಂಡಿದೆ. ಈತನ ಮೇಲೆ ಅತ್ಯಾ*ಚಾರ ಆರೋಪ ಹೊರಿಸಿದ್ದ ನಟಿ ಈಗ ಕೇಸ್ ವಾಪಾಸ್ ಪಡೆದಿದ್ದಾಳೆ.

Share this Video
  • FB
  • Linkdin
  • Whatsapp

 ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ಅತ್ಯಾ*ಚಾರ ಕೇಸ್ ದಾಖಲಾಗಿತ್ತು. ತನ್ನ ಸಿನಿಮಾ ರಿಲೀಸ್​​ ಆಗುವ ಹಿಂದಿನ ದಿನವೇ ನಾಯಕ ಮಡೆನೂರು ಜೈಲು ಸೇರಿದ್ದ. ಈ ನಡುವೆ ಈತ ಕನ್ನಡ ಸ್ಟಾರ್​ಗಳ ವಿರುದ್ದ ಹಗುರವಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿ ಫಿಲ್ಮ್ ಚೇಂಬರ್ ಈತನನ್ನ ಬ್ಯಾನ್ ಮಾಡಿತ್ತು. ಬೇಲ್ ಪಡೆದು ಹೊರಬಂದ ಮೇಲೆ ಮಡೆನೂರು ಮನು ಆಯಾ ನಟರ, ಮತ್ತವರ ಅಭಿಮಾನಿಗಳ ಕ್ಷಮೆ ಕೇಳಿದ್ದ. ಫಿಲ್ಮ್ ಚೇಂಬರ್ ಈತನ ಮೇಲಿನ ಬ್ಯಾನ್​ನ ವಾಪಾಸ್ ಪಡೆದಿದೆ. ಈಗ ಅತ್ಯಾ*ಚಾರ ಕೇಸ್ ಕೂಡ ವಾಪಾಸ್ ಪಡೆಯಲಾಗಿದೆ.

Related Video