ರೈತನಿಗೆ ಹೆಣ್ಣು ಕೊಡುವಂತೆ ಕಾಯ್ದೆನಾದ್ರೂ ತನ್ನಿ ಸ್ವಾಮಿ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..!
ಕೃಷಿಕರಿಗೆ, ರೈತರಿಗೆ, ಮನೆಯಲ್ಲಿಯೇ ಇರುವವರಿಗೆ ಹೆಣ್ಣು ಸಿಕ್ತಾಯಿಲ್ಲ, ಮದುವೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲೊಬ್ಬ ಯುವ ರೈತ ಸಿಪಿ ಯೋಗೇಶ್ವರ್ಗೆ ಕರೆ ಮಾಡಿ, ಯುವ ರೈತರೊಬ್ಬರು ವಿಶೇಷ ಮನವಿ ಮಾಡಿದ್ದಾರೆ.
ಬೆಂಗಳೂರು (ಫೆ. 18): ಕೃಷಿಕರಿಗೆ, ರೈತರಿಗೆ, ಮನೆಯಲ್ಲಿಯೇ ಇರುವವರಿಗೆ ಹೆಣ್ಣು ಸಿಕ್ತಾಯಿಲ್ಲ, ಮದುವೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇಲ್ಲೊಬ್ಬ ಯುವ ರೈತ ಸಿಪಿ ಯೋಗೇಶ್ವರ್ಗೆ ಕರೆ ಮಾಡಿ, ಯುವ ರೈತರೊಬ್ಬರು ವಿಶೇಷ ಮನವಿ ಮಾಡಿದ್ದಾರೆ.
ಸಂಚಲನ ಹುಟ್ಟಿಸಿದೆ ಮೋದಿ ಸರ್ಕಾರದ ಹೊಸ ಹೆಜ್ಜೆ: ಬ್ಯಾಂಕಿಂಗ್ ವ್ಯವಸ್ಥೆ ಕತೆ ಏನು?
'ರೈತರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ. ಕೆಲಸದಲ್ಲಿ ಇರುವವರಿಗೆ ಮಾತ್ರ ಹೆಣ್ಣು ಕೊಡ್ತಾರೆ. ಸಿಎಂ ಬಳಿ ಮಾತನಾಡಿ ರೈತರಿಗಾಗಿ ಒಂದು ಕಾಯ್ದೆ ತನ್ನಿ. ರೈತರನ್ನು ಮದುವೆಯಾದ್ರೆ ವಿಶೇಷ ಸವಲತ್ತು ಕೊಡುವ ಯೋಜನೆಯನ್ನು ತನ್ನಿ. ಆಗಲಾದರೂ ಹೆಣ್ಣು ಕೊಡಬಹುದೇನೋ ' ಎಂದು ಮಳವಳ್ಳಿ ಮೂಲದ ರೈತ ಪ್ರವೀಣ್ ಮನವಿ ಮಾಡಿದ್ದಾರೆ.