
ಕರ್ನಾಟಕಕ್ಕೆ ಅಕ್ಟೋಬರ್ ತಿಂಗಳೇ ಡೇಂಜರ್: ಬೇಕಾಬಿಟ್ಟಿ ತಿರುಗಾಡೋ ಹಾಗಿಲ್ಲ
* ಅಕ್ಟೋಬರ್ ಅಂತ್ಯದವರೆಗೂ ಕಠಿಣ ರೂಲ್ಸ್ ಜಾರಿಗೆ ನಿರ್ದೇಶನ
* ಮುಂದಿನ ತಿಂಗಳಲ್ಲಿ ಸಾಲು ಸಾಲು ಹಬ್ಬ
* ಕೋವಿಡ್ ಸೋಂಕು ಉಲ್ಬಣವಾಗುವ ಸಾಧ್ಯತೆ
ಬೆಂಗಳೂರು(ಸೆ.23): ರಾಜ್ಯಕ್ಕೆ ಅಕ್ಟೋಬರ್ ತಿಂಗಳೇ ಡೇಂಜರ್ ಅಂತ ಕೇಂದ್ರ ಸರ್ಕಾರ ಎಚ್ಚರಿಕೆಯನ್ನ ನೀಡಿದೆ. ಹೌದು, ಕೊರೋನಾ ಕಡಿಮೆಯಾಗಿದೆ ಅಂತ ಬೇಕಾಬಿಟ್ಟಿ ತಿರುಗಾಡಬೇಡಿ. ಮುಂದಿನ ತಿಂಗಳು ಸಾಲು ಸಾಲು ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಉಲ್ಬಣವಾಗುವ ಸಾಧ್ಯತೆ ಇದೆ. ಹೀಗಾಗಿ ಕೊರೋನಾ ಮೂರನೇ ಅಲೆಯ ಬಗ್ಗೆ ಈಗಲೇ ರಾಜ್ಯಕ್ಕೆ ಕೇಂದ್ರ ಎಚ್ಚರಿಕೆಯನ್ನ ನೀಡಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಪದೇ ಪದೆ ಎಚ್ಚರಿಕೆಯನ್ನ ರವಾನಿಸತ್ತಿದೆ. ಅಕ್ಟೋಬರ್ ಅಂತ್ಯದವರೆಗೂ ಕಠಿಣ ರೂಲ್ಸ್ಗಳನ್ನ ಜಾರಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
Add Asianetnews Kannada as a Preferred Source
