Asianet Suvarna News Asianet Suvarna News

ಹುಬ್ಬಳ್ಳಿ ಜನರ ನಿದ್ದೆಗೆಡಿಸಿದ ಚಿರತೆ: ಶಾಲೆಗಳಿಗೆ ರಜೆ ಘೋಷಣೆ

*  ನೃಪತುಂಗ ಬೆಟ್ಟದ ಸುತ್ತ ಕಾಣಿಸಿಕೊಂಡಿದ್ದ ಚಿರತೆ
*  ಚಿರತೆಯನ್ನ ಹಿಡಿಯಲು ಹರಸಾಹಸ
*  ಮನೆಯಿಂದ ಜನರು ಹೊರಬರದಂತೆ ಮನವಿ 

ಹುಬ್ಬಳ್ಳಿ(ಸೆ.23): ನಗರದ ನೃಪತುಂಗ ಬೆಟ್ಟದ ಸುತ್ತ ಕಾಣಿಸಿಕೊಂಡಿದ್ದ ಚಿರತೆಯನ್ನ ಹಿಡಿಯಲಿ ಜಿಲ್ಲಾಡಳಿತ ಇನ್ನಿಲ್ಲದ ಕಸರತ್ತು ನಡೆಸಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಚಿರತೆಯನ್ನ ಹಿಡಿಯಲು ಹರಸಾಹಸ ಪಡಲಾಗುತ್ತಿದೆ. ಚಿರತೆಯ ಹಾವಳಿಯಿಂದ ನಗರದ 12 ಶಾಲೆಗಳಿಗೆ ಜಿಲ್ಲಾಧಿಕಾರಿ ಅವರು ರಜೆಯನ್ನ ಘೋಷಿಸಿದ್ದಾರೆ. ಕೇಂದ್ರಿಯ ವಿವಿಯ ಸುತ್ತ ಅಧಿಕಾರಿಗಳು ಕೂಂಬಿಂಗ್‌ ನಡೆಸುತ್ತಿದ್ದಾರೆ. ರಾತ್ರಿ ಕಾರ್ಯಾಚರಣೆಗೆ ಇನ್ಫ್ರಾರೆಡ್‌ ಡ್ರೋಣ್‌ ಕೂಡ ಬಳಕೆಯಾಗಿದೆ. ಮನೆಯಿಂದ ಜನರು ಹೊರಬರದಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.  

ಎಜುಕೇಷನ್ ಎಕ್ಸ್‌ಪೋ : CET ರ‍್ಯಾಂಕ್ ಹೋಲ್ಡರ್‌ ಮೇಘನ್ ಆಸೆಯಂತೆ ನಟ ಗಣೇಶ್ ಉದ್ಘಾಟನೆ

Video Top Stories