
Karnataka News: SDPI ಬ್ಯಾನ್ ಮಾಡೋದಾದ್ರೆ ಮಾಡಿ, ನಾವು ಬೇಡ ಅಂದಿದ್ದೇವಾ.? ಸಿದ್ದರಾಮಯ್ಯ
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸುತ್ತಾ, ಎಸ್ಡಿಪಿಐ ಬ್ಯಾನ್ ಮಾಡುವುದಾದರೆ ಮಾಡಿ, ನಾವು ಬೇಡ ಅಂದಿದ್ದೇವಾ.? ಕೇಂದ್ರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲೇ ಇದೆ. ನಾವು ಬ್ಯಾನ್ ಮಾಡೋದು ಬೇಡ ಎಂದಿದ್ದೇವಾ..? ಎಂದಿದ್ಧಾರೆ.
ಬೆಂಗಳೂರು (ಫೆ. 27): ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸುತ್ತಾ, ಎಸ್ಡಿಪಿಐ ಬ್ಯಾನ್ ಮಾಡುವುದಾದರೆ ಮಾಡಿ, ನಾವು ಬೇಡ ಅಂದಿದ್ದೇವಾ.? ಕೇಂದ್ರ, ರಾಜ್ಯ ಸರ್ಕಾರ ನಿಮ್ಮ ಕೈಯಲ್ಲೇ ಇದೆ. ನಾವು ಬ್ಯಾನ್ ಮಾಡೋದು ಬೇಡ ಎಂದಿದ್ದೇವಾ..? ಎಂದಿದ್ಧಾರೆ. ಹರ್ಷನದ್ದು ವೈಯಕ್ತಿಕ ದ್ವೇಷಕ್ಕೆ ನಡೆದ ಮರ್ಡರ್. ಅದಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದೆ. ಹಿಜಾಬ್ ಸಂಘರ್ಷಕ್ಕೂ, ಈ ಹತ್ಯೆಗೂ ಸಂಬಂಧ ಇಲ್ಲ. ಹತ್ಯೆ ಬಳಿಕ ನಡೆದ ಗಲಭೆಗೆ ಈಶ್ವರಪ್ಪನೇ ಕಾರಣ ಎಂದು ವಾಗ್ದಾಳಿ ನಡೆಸಿದರು.
Add Asianetnews Kannada as a Preferred Source
