Asianet Suvarna News Asianet Suvarna News

ಸಂತೋಷ್‌ ಆತ್ಮಹತ್ಯೆ ಪ್ರಕರಣ: ಕಾಮಗಾರಿಗೆ ಅನುಮತಿ ನೀಡಿದ್ರಾ ಅಧಿಕಾರಿಗಳು?

ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೇರೆ ಬೇರೆ ಸಂಗತಿಗಳು ಹೊರ ಬರುತ್ತಿವೆ. ಹಿಂಡಲಗಾ ಗ್ರಾಮದ ರಸ್ತೆ, ಚರಂಡಿ, ಅಭಿವೃದ್ಧಿ ಕುರಿತು 108 ಕಾಮಗಾರಿಗಳ ಪಟ್ಟಿ ಲಗತ್ತಿಸಿ, ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಪತ್ರ ಬರೆದಿದ್ದರು. ಈ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

First Published Apr 21, 2022, 10:55 AM IST | Last Updated Apr 21, 2022, 11:05 AM IST

ಬೆಂಗಳೂರು (ಏ. 21): ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೇರೆ ಬೇರೆ ಸಂಗತಿಗಳು ಹೊರ ಬರುತ್ತಿವೆ. ಹಿಂಡಲಗಾ ಗ್ರಾಮದ ರಸ್ತೆ, ಚರಂಡಿ, ಅಭಿವೃದ್ಧಿ ಕುರಿತು 108 ಕಾಮಗಾರಿಗಳ ಪಟ್ಟಿ ಲಗತ್ತಿಸಿ, ಹಿಂದಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಪತ್ರ ಬರೆದಿದ್ದರು.

ಮೇ 9 ರೊಳಗೆ ಆಝಾನ್ ತೆಗೆಸಿ, ಇಲ್ಲದಿದ್ರೆ ಹನುಮಾನ್ ಚಾಲೀಸ್ ಪಠಣ: ಶ್ರೀರಾಮಸೇನೆ ಪಟ್ಟು

ಈ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಇದೇ ಪತ್ರದ ಆಧಾರದ ಮೇಲೆ ಉಪಗುತ್ತಿಗೆದಾರರಿಂದ ಸಂತೋಷ್ ಕೆಲಸ ಮಾಡಿಸಿದ್ದರು. ಇದೀಗ ಹಾಲಿ ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಬಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಆದರೆ ಆಶಾ ಐಹೊಳೆ ಈ ಪ್ರಕರಣದಿಂದ ದೂರ ಉಳಿದಿದ್ದಾರೆ.