ಹ್ಯಾಂಡಲ್ ಮಾಡ್ತೀನೆಂದು ಜೈಲು ಸೇರುವಂತೆ ಮಾಡಿದ ಪ್ರದೋಶ್ ಮೇಲೆ ದರ್ಶನ್‌ಗಿದ್ಯಾ ಸಿಟ್ಟು?

ಜೈಲಿನಲ್ಲಿ ನಟ ದರ್ಶನ್ ಗ್ಯಾಂಗ್ ನಡುವೆ ಮನಸ್ತಾಪ, ದರ್ಶನ್ ಮನೆಯೂಟದ ಅರ್ಜಿ ಸೋಮವಾರ ವಿಚಾರಣೆ, ಗುಡ್ಡ ಕುಸಿತದಲ್ಲಿ ಡರ್ಟಿ ಪಾಲಿಟಿಕ್ಸ್ ಮಾಡಿತಾ ಕಾಂಗ್ರೆಸ್ ಸೇರಿದಂತೆ ಜುಲೈ 20ರ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ಆರೋಪಿಗಳ ಕಾನೂನು ಹೋರಾಟಗಳು ನಡೆಯುತ್ತಿದೆ. ಇದರ ನಡುವೆ ದರ್ಶನ್ ಗ್ಯಾಂಗ್ ನಡುವೆ ಮನಸ್ತಾಪ ಮೂಡಿರುವ ಘಟನೆ ಬಹಿರಂಗವಾಗಿದೆ. ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್‌ಗೆ ಚಿಂತೆ ಬಿಡು ಅಣ್ಣಾ ಎಲ್ಲಾ ನಾನು ಹ್ಯಾಂಡಲ್ ಮಾಡುತ್ತೇನೆ ಎಂದಿದ್ದ ಪ್ರದೋಶ್‌ನಿಂದ ಇದೀಗ ಜೈಲು ಸೇರಬೇಕಾಯಿತು ಎಂದು ದರ್ಶನ್ ಸಿಟ್ಟಿಗೆದ್ದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇತ್ತ ಇದೇ ಕಾರಣದಿಂದ ದರ್ಶನ್ ಗ್ಯಾಂಗ್ ನಡುವೆ ಬಿರುಕು ಮೂಡಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video