ದೆಹಲಿಯಿಂದ ಮಹತ್ವದ ವಿಡಿಯೋ ಬಿಡುಗಡೆ, ಸಾಹುಕಾರ್ ಹೊಸ ಬಾಂಬ್..!
- ಬಿಜೆಪಿ ಮೂವರಿಂದ ನನ್ನ ಬೆನ್ನಿಗೆ ಚೂರಿ, ತಕ್ಕ ಪಾಠ ಕಲಿಸುವೆ: ಜಾರಕಿಹೊಳಿ
- ದಿಢೀರ್ ದೆಹಲಿಗೆ ತೆರಳಿದ ಜಾರಕಿಹೊಳಿ
- ದೆಹಲಿಯಿಂದ ಷಡ್ಯಂತ್ರದ ವಿಡಿಯೋ ರಿಲೀಸ್ ಸಾಧ್ಯತೆ..?
ಬೆಂಗಳೂರು (ಜೂ. 30): ಶತಾಯ ಗತಾಯ ಮತ್ತೆ ಮಂತ್ರಿಗಿರಿ ಪಡೆಯುವ ಪ್ರಯತ್ನದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ತೆರಳಿದ್ದಾರೆ. ದೆಹಲಿ ಭೇಟಿ ವೈಯಕ್ತಿಕವಾಗಿರುವುದು. ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ಧಾರೆ. ಇದೇ ವೇಳೆ ಆಪ್ತರ ಬಳಿ ಮಾತನಾಡುತ್ತಾ, ಪಕ್ಷದ ಮೂವರು ನಾಯಕರು ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ಅವರಿಗೆ ಪಾಠ ಕಲಿಸುತ್ತೇನೆ. ಷಡ್ಯಂತ್ರದ ಕುರಿತು ಸಾಕ್ಷ್ಯ ಎನ್ನಲಾದ ವಿಡಿಯೋವೊಂದನ್ನು ದೆಹಲಿಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದಿದ್ಧಾರೆ.
ದಿಢೀರ್ ದೆಹಲಿಗೆ ಹಾರಿದ ಜಾರಕಿಹೊಳಿ, ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ