Asianet Suvarna News Asianet Suvarna News

'ನಮ್ಮ ಮಕ್ಕಳು ನಮ್ಮ ಮನೆಗೆ ಬಂದಿದ್ದಾರೆ. ನಮಗೆ ಖುಷಿಯಾಗಿದೆ: ಆರ್ ಅಶೋಕ್

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ. 
 

First Published Feb 27, 2022, 12:00 PM IST | Last Updated Feb 27, 2022, 12:04 PM IST

ಬೆಂಗಳೂರು (ಫೆ. 27): ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ. ಪೋಷಕರನ್ನು ತಬ್ಬಿಕೊಂಡು ವಿದ್ಯಾರ್ಥಿಗಳು ಖುಷಿಪಟ್ಟಿದ್ದಾರೆ. 

ಭಾರತಕ್ಕೆ ಬಂದಿರುವುದು ತುಂಬಾ ನೆಮ್ಮದಿ ಎನಿಸುತ್ತಿದೆ, ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿಗಳ ಸಂತಸ

'ನಮ್ಮ ಮಕ್ಕಳು ನಮ್ಮ ಮನೆಗೆ ಬಂದಿದ್ದಾರೆ. ನಮಗೆ ಖುಷಿಯಾಗಿದೆ. ನಮ್ಮ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಬರುವವರಿದ್ದಾರೆ. ಅವರನ್ನೂ ಸುರಕ್ಷಿತವಾಗಿ ಕರೆ ತರುತ್ತೇವೆ' ಎಂದು ಆರ್ ಅಶೋಕ್ ಹೇಳಿದ್ದಾರೆ. 

Video Top Stories