
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ: ಮಂಡ್ಯ ಯೂತ್ ಕಾಂಗ್ರೆಸ್ ಮುಖಂಡ ಅರೆಸ್ಟ್
ಪಿಎಸ್ಐ ಪರೀಕ್ಷಾ ಹಗರಣ (PSI Recruitment Scam) ಮಂಡ್ಯಕ್ಕೂ (Mandya) ಕಾಲಿಟ್ಟಿದೆ. ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣನನ್ನು ಬಂಧಿಸಲಾಗಿದೆ. ಇವರು ಚೆಲುವರಾಯ ಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಮಂಡ್ಯ (ಮೇ.11): ಪಿಎಸ್ಐ ಪರೀಕ್ಷಾ ಹಗರಣ (PSI Recruitment Scam) ಮಂಡ್ಯಕ್ಕೂ (Mandya) ಕಾಲಿಟ್ಟಿದೆ. ಪ್ರಕರಣ ಸಂಬಂಧ ನಾಗಮಂಗಲದಲ್ಲಿ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ರಾಮಣ್ಣನನ್ನು ಬಂಧಿಸಲಾಗಿದೆ. ಇವರು ಚೆಲುವರಾಯ ಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
News Hour ಆಜಾನ್ ವಿವಾದ ಅಂತ್ಯಕ್ಕೆ ಹೊಸ ಮಾರ್ಗಸೂಚಿ ಪ್ರಕಟ, ಕಠಿಣ ನಿಯಮ ಜಾರಿ!
ಶರತ್ ರಾಮಣ್ಣ ಪಿಎಸ್ಐ ಕೆಲಸದ ವಿಚಾರದಲ್ಲಿ ಮಧ್ಯವರ್ತಿಯಾಗಿದ್ದರು. ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ನಲ್ಲಿದ್ದ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ಈ ಆರೋಪಿಗಳು ತಿದ್ದಿದ್ದಾರೆ. ಇದಕ್ಕೆ ತಲಾ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರು. ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.