Asianet Suvarna News Asianet Suvarna News

PSI Recruitment Scam: ಗನ್‌ಮ್ಯಾನ್ ಅಕ್ರಮಕ್ಕೂ ನನಗೂ ಸಂಬಂಧವಿಲ್ಲ: ಎಂ ವೈ ಪಾಟೀಲ್

ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟೂಹೊಸ ತಿರುವು ಪಡೆದುಕೊಳ್ಳುತ್ತಾ ಸಾಗಿದ್ದು, ಈವರೆಗೂ ಬಿಜೆಪಿ ನಾಯಕಿ ಸುತ್ತ ಸುತ್ತುತ್ತಿದ್ದ ಹಗರಣ ಇದೀಗ ಕಾಂಗ್ರೆಸ್‌ ನಾಯ​ಕ​ರ​ತ್ತವೂ ಹೊರಳಿದೆ. ಅಕ್ರ​ಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಫಜಲ್ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲರ ಗನ್‌ಮ್ಯಾನ್‌ ಸೇರಿ ಇಬ್ಬರು ಪೇದೆ​ಗಳನ್ನು  ಬಂಧಿ​ಸಿ​ದ್ದಾ​ರೆ.

ಕಲಬುರಗಿ (ಏ.22):  ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಬಗೆದಷ್ಟೂಹೊಸ ತಿರುವು ಪಡೆದುಕೊಳ್ಳುತ್ತಾ ಸಾಗಿದ್ದು, ಈವರೆಗೂ ಬಿಜೆಪಿ ನಾಯಕಿ ಸುತ್ತ ಸುತ್ತುತ್ತಿದ್ದ ಹಗರಣ ಇದೀಗ ಕಾಂಗ್ರೆಸ್‌ ನಾಯ​ಕ​ರ​ತ್ತವೂ ಹೊರಳಿದೆ. ಅಕ್ರ​ಮಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು ಅಫಜಲ್ಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲರ ಗನ್‌ಮ್ಯಾನ್‌ ಸೇರಿ ಇಬ್ಬರು ಪೇದೆ​ಗಳನ್ನು  ಬಂಧಿ​ಸಿ​ದ್ದಾ​ರೆ.

ಜೆಡಿಎಸ್‌ಗೆ ಶಾಕ್, ಪಕ್ಷಕ್ಕೆ ಗುಡ್‌ಬೈ ಹೇಳ್ತಾರಾ ಶಾಸಕ ಶಿವಲಿಂಗೇಗೌಡ..?

ಕಲಬುರಗಿ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಪೇದೆ ರುದ್ರಗೌಡ ಮತ್ತು ಶಾಸಕರ ಗನ್‌ಮ್ಯಾನ್‌ ಅಯ್ಯಣ್ಣ ದೇಸಾಯಿ ಬಂಧಿತ ಆರೋ​ಪಿ​ಗ​ಳು. ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಹೈಟೆಕ್‌ ನಕಲು ಮಾಡಿದ ಆರೋ​ಪದ ಮೇರೆಗೆ ಬಂಧಿ​ಸ​ಲಾ​ಗಿ​ದೆ.

'ಗನ್‌ಮ್ಯಾನ್ ಅಯ್ಯಣ್ಣ ದೇಸಾಯಿ ನನ್ನ ಜೊತೆ 3 ವರ್ಷದಿಂದ ಜೊತೆಗಿದ್ದ. ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ. ಅವನ ಸರ್ವೀಸ್‌ನಲ್ಲಿ ನಮಗೆ ತೊಂದರೆಯಾಗಿಲ್ಲ. ನನಗಾಗಲಿ, ಪಕ್ಷಕ್ಕಾಗಲಿ ಸಂಬಂಧ ಇಲ್ಲ. ಇದರ ಹಿಂದೆ ಬಿಜೆಪಿ ಕುತಂತ್ರ ಇದೆ' ಎಂದು ಕಾಂಗ್ರೆಸ್ ಶಾಸಕ ಎಂ ವೈ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. 

Video Top Stories