
ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಟ್ಯಾಬ್ಲೋಗೆ 2ನೇ ಪ್ರಶಸ್ತಿ: ವಾರ್ತಾ ಇಲಾಖೆ ಆಯುಕ್ತ ಹರ್ಷ ಸಂತಸ
* 2ನೇ ಪ್ರಶಸ್ತಿ ಸಿಕ್ಕಿರೋದಕ್ಕೆ ವಾರ್ತಾ ಇಲಾಖೆ ಆಯುಕ್ತ ಪಿ.ಎಸ್. ಹರ್ಷ ಸಂತಸ
* 6 ತಿಂಗಳ ಸತತ ಪ್ರಯತ್ನದಿಂದ ವಿಶೇಷವಾದ ಟ್ಯಾಬ್ಲೋ ಸಿದ್ಧಪಡಿಸಲಾಗಿತ್ತು
* ಕಲಾವಿದರಿಗೆ ಹರ್ಷ ಧನ್ಯವಾದ ಸಲ್ಲಿಸಿದ ಹರ್ಷ
ಬೆಂಗಳೂರು(ಫೆ.06): ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಕರಕುಶಲ ಕಲೆಗಳ ತೊಟ್ಟಿಲು ಶೀರ್ಷಿಕೆಯಡಿ ಪ್ರದರ್ಶನಗೊಂಡಿದ್ದ ಟ್ಯಾಬ್ಲೋಗೆ 2ನೇ ಪ್ರಶಸ್ತಿ ಸಿಕ್ಕಿರೋದಕ್ಕೆ ವಾರ್ತಾ ಇಲಾಖೆ ಆಯುಕ್ತ ಪಿ.ಎಸ್. ಹರ್ಷ ಸಂತಸ ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಪಿ.ಎಸ್. ಹರ್ಷ ಅವರು, ಆರು ತಿಂಗಳ ಸತತ ಪ್ರಯತ್ನದಿಂದ ವಿಶೇಷವಾದ ಟ್ಯಾಬ್ಲೋ ಸಿದ್ಧಪಡಿಸಲಾಗಿತ್ತು. ದೆಹಲಿಯ ಕೊರೆಯುವ ಚಳಿಯಲ್ಲಿ ರಾಜ್ಯದ 16 ಕಲಾಪ್ರಕಾರಗಳನ್ನ ಸಿದ್ಧಗೊಳಿಸಲಾಗಿದ್ದ ಕಲಾವಿದರಿಗೆ ಹರ್ಷ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
4 ತಿಂಗಳು ಸಂಬಳವಿಲ್ಲದೇ, ಕೆಲಸವಿಲ್ಲದೇ ಪರದಾಡುತ್ತಿದ್ದ ಕರ್ನಾಟಕದ ಕಾರ್ಮಿಕರ ರಕ್ಷಣೆ