
ಬೆಂಗಳೂರಲ್ಲಿ ವರುಣನ ಅಬ್ಬರ: ಮೈಸೂರು ರಸ್ತೆಯಲ್ಲಿ ಓಡಾಡೋರೇ ಎಚ್ಚರ..!
ಭಾರೀ ಮಳೆಗೆ ತಡೆಗೋಡೆಯೇ ಕುಸಿದು ಬಿದ್ದ ಘಟನೆ| ಸುಮಾರು 300 ಅಡಿ ಉದ್ದದ ತಡೆಗೋಡೆ ಕುಸಿತ| ಒಂದು ಕಡೆ ರಸ್ತೆ ಕುಸಿತವಾಗಿದೆ, ಮತ್ತೊಂದೆಡೆ ಟ್ರಾಫಿಕ್ ಜಾಮ್|
ಬೆಂಗಳೂರು(ಜೂ.26): ನಗರದಲ್ಲಿ ನಿನ್ನೆ(ಗುರುವಾರ) ಸುರಿದ ಭಾರೀ ಮಳೆಗೆ ತಡೆಗೋಡೆಯೇ ಕುಸಿದು ಬಿದ್ದಿರುವ ಘಟನೆ ಕೆಂಗೇರಿ ಬಳಿ ನಡೆದಿದೆ. ಸುಮಾರು 300 ಅಡಿ ಉದ್ದದ ತಡೆಗೋಡೆ ಕುಸಿತವಾಗಿದೆ. ಸುಮಾರು ಅರ್ಧ ಕಿಲೋಮೀಟರ್ ಉದ್ದದ ತಡೆಗೋಡೆ ಕುಸಿದಿದೆ.
Add Asianetnews Kannada as a Preferred Source

ವಿಶ್ವನಾಥ್ ಖೇಲ್ ಖತಂ? ಮುಲಾಜಿಲ್ಲದೇ ನೇರವಾಗಿ ಹೇಳಿಬಿಟ್ರು ಸಿಎಂ!
ಒಂದು ಕಡೆ ರಸ್ತೆ ಕುಸಿತವಾಗಿದೆ, ಮತ್ತೊಂದೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಮಳೆ ಅಬ್ಬರಕ್ಕೆ ವೃಷಭಾವತಿ ನದಿ ಅಪಾಯದ ಮಟ್ಟ ಮೀರಿ ಹರಿದಿದೆ. ಇದರಿಂದ ಇಲ್ಲಿನ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ.