Asianet Suvarna News Asianet Suvarna News

ಮುರುಘಾ ಮಠದಲ್ಲಿದ್ದ 11 ಅನಾಥ ಮಕ್ಕಳು ಏನಾದರು?: ಪರಶುರಾಮ್‌ ಕಳವಳ

ಮುರುಘಾ ಮಠದಲ್ಲಿ ಆಶ್ರಯ ಪಡೆದಿದ್ದ 11 ಅನಾಥ ಮಕ್ಕಳನ್ನು ಕೂಡಲೇ ಪತ್ತೆ ಹಚ್ಚಲು ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್‌ ಒತ್ತಾಯಿಸಿದ್ದಾರೆ.
 

ಮುರುಘಾ ಮಠದಲ್ಲಿ 11 ಅನಾಥ ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ ಅನಾಥ ಮಕ್ಕಳು ಏನಾದರು ಎಂದು ಪರಶುರಾಮ್ ಪ್ರಶ್ನೆ ಮಾಡಿದ್ದಾರೆ. ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಸದಸ್ಯರೇ ಕಳ್ಳರು. ಮಕ್ಕಳು ಭಿಕ್ಷಾಟನೆಗೆ ಹೋಗಿರಬಹುದು ಅಥವಾ ಅತ್ಯಾಚಾರಕ್ಕೆ ಒಳಗಾಗಿರಬಹುದು. ತನಿಖೆ ಮಾಡುವ ಜವಾಬ್ದಾರಿ ಸರ್ಕಾರದ್ದು ಆದ್ರೆ ಕೆಲಸ ಮಾಡಿಲ್ಲ. ಒಟ್ಟು 73 ಮಕ್ಕಳಲ್ಲಿ ಕೆಲವರು ಮುರುಘಾ ಮಠದಲ್ಲಿ ಓದುತ್ತಿದ್ದಾರೆ, ಇದರಲ್ಲಿ 11 ಮಕ್ಕಳು ಪತ್ತೆಯಿಲ್ಲ. ಕೂಡಲೇ ಅಧಿಕಾರಿಗಳು ಮಕ್ಕಳನ್ನು ಪತ್ತೆ ಹಚ್ಚಬೇಕಾಗಿದೆ ಎಂದು  ಪರಶುರಾಮ್‌ ಒತ್ತಾಯಿಸಿದ್ದಾರೆ.

Bengaluru: ವೆಸ್ಟ್‌ ಆಫ್‌ ಕಾರ್ಡ್ ರಸ್ತೆ ಮೇಲ್ಸೇತುವೆಯಲ್ಲಿ ದೋಷ, ವಾಹನ ಸವಾರರೇ ಎಚ್ಚರ

Video Top Stories