Asianet Suvarna News Asianet Suvarna News

ಕರ್ನಾಟಕ KSRTC ಬ್ರಾಂಡ್‌ ಕೇರಳ ಪಾಲು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ

* ಕರ್ನಾಟಕ, ಕೇರಳ ರಾಜ್ಯಗಳ ನಡುವೆ ಕೆಎಸ್‌ಆರ್‌ಟಿಸಿ ಹೆಸರಿನ ವಿವಾದ
* ಕೊನೆಗೂ ಕೇರಳ ಪಾಲಾದ KSRTC ಟ್ರೇಡ್‌ ಮಾರ್ಕ್‌ 
* ಆದೇಶದ ಪ್ರತಿ ತರಿಸಿಕೊಂಡು ಮುಂದಿನ ತೀರ್ಮಾನ: ಸವದಿ 

ಬೆಂಗಳೂರು(ಜೂ.03): ಕರ್ನಾಟಕ, ಕೇರಳ ರಾಜ್ಯಗಳ ನಡುವೆ ಕೆಎಸ್‌ಆರ್‌ಟಿಸಿ ಹೆಸರಿನ ವಿವಾದಕ್ಕೆ ಎದ್ದಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ KSRTC ಟ್ರೇಡ್‌ ಮಾರ್ಕ್‌ ಕೊನೆಗೂ ಕೇರಳ ಪಾಲಾಗಿದೆ. ಈ ಸಂಬಂಧ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನಿನ್ನೆ ಆದೇಶದ ಬಗ್ಗೆ ನನಗೂ ಮಾಹಿತಿ ಇದೆ. ಆದೇಶದ ಪ್ರತಿ ತರಿಸಿಕೊಂಡು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನವನ್ನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. 

ಯೋಗೀಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಭೇಟಿಗೆ ಡಿಕೆಶಿ ಅರ್ಜಿ