
ಎಲ್ಲಿದೆ ಅಚ್ಛೇ ದಿನ್..? ತೆರಿಗೆ ಹೆಸರಲ್ಲಿ ಜನರ ಲೂಟಿ ಮಾಡ್ತಿದೆ ಸರ್ಕಾರ: ಡಿಕೆಶಿ
ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಸಮರ ಸಾರಿದೆ. 'ತೆರಿಗೆ ಹೆಸರಲ್ಲಿ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ. ಬೆಲೆ ಇಳಿಕೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು (ಏ. 03): ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಸಮರ ಸಾರಿದೆ.
Add Asianetnews Kannada as a Preferred Source

ಮುಸ್ಲಿಮರು ಹಲಾಲ್ ಕಟ್ ಮಾಡಿಕೊಳ್ಳಲಿ ಬಿಡಿ, ಯಾಕೆ ವಿರೋಧಿಸ್ತೀರಾ.? ಸಿದ್ದು ಪ್ರಶ್ನೆ
'ರೈತರ ಆದಾಯ ಡಬಲ್ ಆಗುತ್ತೆ ಅಂದ್ರು, ಎಲ್ಲಿ ಆಯ್ತು..? ತೈಲ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪದಾರ್ಥಗಳ ಬೆಲೆ ಏರಿಕೆಯಾಗಿದೆ, ಆದರೆ ಜನರ ಆದಾಯ ಮಾತ್ರ ಪಾತಾಳಕ್ಕಿಳಿದಿದೆ. ತೆರಿಗೆ ಹೆಸರಲ್ಲಿ ಸರ್ಕಾರ ಜನರ ಸುಲಿಗೆ ಮಾಡುತ್ತಿದೆ. ಬೆಲೆ ಇಳಿಕೆ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.