Asianet Suvarna News Asianet Suvarna News

ತಂದೆಯ ಚಿತೆಗೆ ಮಗಳಿಂದ ಅಗ್ನಿಸ್ಪರ್ಶ, ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಕಾರವಾರ..!

ತಂದೆಯ ಚಿತೆಗೆ ಮಗಳು ಅಗ್ನಿಸ್ಪರ್ಶ ಮಾಡಿರುವ ಅಪರೂಪದ ಘಟನೆ ಕಾರವಾರ ತಾ. ಮಲ್ಲಾಪುರ ಗ್ರಾಪಂ ಕುರ್ನಿಪೇಟೆಯಲ್ಲಿ ನಡೆದಿದೆ. 

ಉತ್ತರ ಕನ್ನಡ (ಜ. 24): ತಂದೆಯ ಚಿತೆಗೆ ಮಗಳು ಅಗ್ನಿಸ್ಪರ್ಶ ಮಾಡಿರುವ ಅಪರೂಪದ ಘಟನೆ ಕಾರವಾರ ತಾ. ಮಲ್ಲಾಪುರ ಗ್ರಾಪಂ ಕುರ್ನಿಪೇಟೆಯಲ್ಲಿ ನಡೆದಿದೆ. ಇಲ್ಲಿನ  ಸ್ಥಳೀಯ ನಿವಾಸಿ ಚಂದ್ರಕಾಂತ್ ಬುದೊಪಾಗಿ (56) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ 9 ಮಂದಿ ಹೆಣ್ಣು ಮಕ್ಕಳಿದ್ದು, ಗಂಡು ಮಕ್ಕಳಿರಲಿಲ್ಲ. ಈ ಹೆಣ್ಣು ಮಕ್ಕಳ ಪೈಕಿ ಮೂವರ ಮದುವೆಯಾಗಿತ್ತು ನಾಲ್ಕನೇ ಪುತ್ರಿ ಸರೋಜಾ ತಂದೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. 

ಜ. 26 ರಂದು ಬೆಂಗಳೂರಿಗೆ 10 ಸಾವಿರ ರೈತರ ಲಗ್ಗೆ: ಕೋಡಿಹಳ್ಳಿ ಚಂದ್ರಶೇಖರ್