Asianet Suvarna News Asianet Suvarna News

Mekedatu Padayatre: ಹೈಕೋರ್ಟ್ ಗರಂ, ಗೃಹ ಸಚಿವರಿಂದ ತುರ್ತು ಸಭೆ, ಪಾದಯಾತ್ರೆಗೆ ತಡೆ.?

ಕೋವಿಡ್ ಹೆಚ್ಚಾಗುತ್ತಿರುವ (Covid 19) ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆ (Mekedatu Padaytare) ಬಗ್ಗೆ ಹೈಕೋರ್ಟ್ (High Court) ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಿದೆ. 

ಬೆಂಗಳೂರು (ಜ. 12): ಕೋವಿಡ್ ಹೆಚ್ಚಾಗುತ್ತಿರುವ (Covid 19) ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆ (Mekedatu Padaytare) ಬಗ್ಗೆ ಹೈಕೋರ್ಟ್ (High Court) ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಿದೆ. 

Covid 19 Control:ನಾಳೆ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ, ರಾಜ್ಯದ ಲಾಕ್‌ಡೌನ್ ಭವಿಷ್ಯ ನಿರ್ಧಾರ?

ಪಾದಯಾತ್ರೆಗೆ ಯಾಕೆ ಅವಕಾಶ ಕೊಟ್ಟಿದ್ದೀರಿ..? ಯಾಕೆ ತಡೆಯುತ್ತಿಲ್ಲ, ಪಾದಯಾತ್ರೆ ತಡೆಯಲು ನೀವು ಅಸಹಾಯಕರೇ.? ಎಂದು ಹೈಕೋರ್ಟ್ ಪ್ರಶ್ನಿಸಿದೆ.  ಪಾದಯಾತ್ರೆ ತಡೆಯದಿದ್ರೆ ನಾವು ನಿರ್ದೇಶನ ಕೊಡಬೇಕಾಗುತ್ತದೆ ಎಂದು ಒಂದು ದಿನ ಕಾಲಾವಕಾಶ ಕೊಟ್ಟಿದೆ. ಕೆಪಿಸಿಸಿಗೂ ಷೋಕಾಸ್ ನೋಟಿಸ್ ಕೊಟ್ಟಿದೆ. 

ಹೈಕೋರ್ಟ್ ಚಾರ್ಟ್ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದು ಚರ್ಚೆ ನಡೆಸಿದ್ದಾರೆ. ನಾವು ಸಿಎಂ ಜೊತೆ ಚರ್ಚಿಸಿ, ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ' ಎಂದಿದ್ದಾರೆ. 
 

Video Top Stories