Asianet Suvarna News Asianet Suvarna News

ಸೀಡಿ ಕೇಸಲ್ಲಿ ನನ್ನನ್ನು ಸಿಲುಕಿಸುವ ಸಂಚು, ಹೆದರುವ ಮಗ ನಾನಲ್ಲ: ಡಿಕೆಶಿ

ಮಾಜಿ ಸಚಿವರ ಸಿ.ಡಿ. ಪ್ರಕರಣದಲ್ಲಿ ನನ್ನನ್ನು ಕೂಡ ಸಿಲುಕಿಸಲು ಏನೇನೋ ಸಂಚು ಮಾಡುತ್ತಿದ್ದಾರೆ. ಈ ಸಂಬಂಧ ಸಮಯ ಬಂದಾಗ ನಾನು ಮಾತನಾಡುತ್ತೇನೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು (ಮಾ, 14): ಮಾಜಿ ಸಚಿವರ ಸಿ.ಡಿ. ಪ್ರಕರಣದಲ್ಲಿ ನನ್ನನ್ನು ಕೂಡ ಸಿಲುಕಿಸಲು ಏನೇನೋ ಸಂಚು ಮಾಡುತ್ತಿದ್ದಾರೆ. ಈ ಸಂಬಂಧ ಸಮಯ ಬಂದಾಗ ನಾನು ಮಾತನಾಡುತ್ತೇನೆ. ನಾನು ಸುಮ್ಮನೆ ಇದ್ರೂ ಇವರು ಸಿ.ಡಿ, ಸಿ.ಡಿ ಎನ್ನುತ್ತಿದ್ದಾರೆ. ನನ್ನನ್ನು ಸಿಲುಕಿಸಲು ಮಹಾ ಸಂಚು ಮಾಡುತ್ತಿದ್ದಾರೆ. ಇದರಲ್ಲಿ ಯಾರಾರ‍ಯರು ಇದ್ದಾರೆ ಎಂದು ಗೊತ್ತಿದೆ. ಆದರೆ ಇದಕ್ಕೆಲ್ಲಾ ಹೆದರುವ ಮಗ ಈ ಡಿಕೆಶಿ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯದಲ್ಲಿ ವ್ಯವಸ್ಥಿತ ಮತಾಂತರದ ಜಾಲ ತೆರೆದಿಟ್ಟ ಕವರ್ ಸ್ಟೋರಿ ತಂಡ

Video Top Stories