Asianet Suvarna News Asianet Suvarna News

ಸಿದ್ದರಾಮಯ್ಯ ವಿಧಾನಸೌಧದ ಮುಂದೆ ಕಂಬಳಿ ಹೆಣೆಯಲಿ ನೋಡೋಣ: ಎಚ್‌ಡಿಕೆ

ಸಿಂದಗಿಯಲ್ಲಿ ಕೊನೆಯ ದಿನದ  ಪ್ರಚಾರ ರಂಗೇರಿದೆ.  ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಪ್ರಚಾರ ಜೋರಾಗಿದೆ.  ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಂದು ರೋಡ್ ಶೋ ನಡೆಸಲಿದ್ದಾರೆ. ಇನ್ನು ಕುಮಾರಣ್ಣ ಸ್ವಲ್ಪ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ. 

ಬೆಂಗಳೂರು (ಅ. 27): ಸಿಂದಗಿಯಲ್ಲಿ (Sindagi) ಕೊನೆಯ ದಿನದ  ಪ್ರಚಾರ ರಂಗೇರಿದೆ.  ಬಿಜೆಪಿ, ಕಾಂಗ್ರೆಸ್ ಹಾಗೂ ದಳದ ಪ್ರಚಾರ ಜೋರಾಗಿದೆ.  ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ಇಂದು ರೋಡ್ ಶೋ ನಡೆಸಲಿದ್ದಾರೆ. ಇನ್ನು ಕುಮಾರಣ್ಣ ಸ್ವಲ್ಪ ವಿಭಿನ್ನವಾಗಿ ಪ್ರಚಾರ ನಡೆಸುತ್ತಿದ್ದಾರೆ.

'ಉಪಕಣದಲ್ಲಿ ಕಂಬಳಿ ಸಮರ, ಮತ್ತೆ ಡೆಲ್ಟಾ ಅವಾಂತರ!

ದಳಪತಿಗಳು ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಸಭೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಕಂಬಳಿ ವಿಚಾರಕ್ಕೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧದ ಮುಂದೆ ಕಂಬಳಿ ಹೆಣೆಯಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.