News Hour: ಜನರಿಗೆ ಟೋಪಿ ಹಾಕಿ, ಚಿಕನ್‌ ಲೆಗ್‌ ಪೀಸ್ ತಿಂದ್ಕೊಂಡು ಮೇಕೆದಾಟು ಪಾದಯಾತ್ರೆ: ಎಚ್‌ಡಿಕೆ

ಡಿಕೆ ಶಿವಕುಮಾರ್‌ ಮೇಕೆದಾಟು ಪಾದಯಾತ್ರೆ ಹೇಗೆ ಮಾಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರಿಗೆ ಟೋಪಿ ಹಾಕಿ ಆತ ಪಾದಯಾತ್ರೆ ಮಾಡಿದ್ದಾನೆ. ಸುಪ್ರೀಂ ಕೋರ್ಟ್‌ ಹೇಳೋಕೆ ಮುಂಚೆಯೇ ಕಾವೇರಿ ನೀರು ಬಿಟ್ಟಿದ್ದಾರೆ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.18): ನೈಸ್‌ ರೋಡ್‌, ಕಾವೇರಿ ನೀರು ವಿಚಾರದಲ್ಲಿ ಇಂದು ಎಚ್‌ಡಿ ಕುಮಾರಸ್ವಾಮಿ, ಡಿಕೆ ಬ್ರದರ್ಸ್‌ ಅನ್ನು ತರಾಟೆಗೆ ತೆಗೆದುಕೊಂಡರು. ಇಂದು ಸುಪ್ರೀಂ ಕೋರ್ಟ್‌ ಹೇಳೋಕು ಮುಂಚೆಯೇ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ಹಾಗಿದ್ದರೆ ಮೇಕೆದಾಟು ಪಾದಯಾತ್ರೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಜನರಿಗೆ ಟೋಪಿ ಹಾಕಿ ಪಾದಯಾತ್ರೆ ಮಾಡಿದ್ದಾರೆ. ಚಿಕನ್‌ ಲೆಗ್‌ ಪೀಸ್‌, ಮಟನ್‌ ಸಾರು ತಿಂದ್ಕೊಂಡು ಹೋರಾಟ ಮಾಡಿದ್ದಷ್ಟೇ. ತಮಿಳುನಾಡಿನಲ್ಲಿ ಇರೋದು ನಿಮ್ಮ ಪಾರ್ಟರ್ನರ್‌ ಆಗಿರುವ ಸ್ಟ್ಯಾಲಿನ್‌ ಇದ್ದಾರೆ. ಅವರನ್ನ ಒಪ್ಪಿಸಿ ನೋಡೋಣ. ಕೊಟ್ಟು ತಗೊಳೋ ನೀತಿ ಮಾಡೋಕೆ ಹೊರಟಿದ್ದೀರಲ್ಲ ಕಾವೇರಿ ನದಿ ನೀರು ವಿಚಾರದಲ್ಲಿ ಅವರನ್ನು ಒಪ್ಪಿಸಿ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ಪರಿಣಿತಿ ಚೋಪ್ರಾ, ರಾಧಿಕಾ ಕುಮಾರಸ್ವಾಮಿ ಸೇರಿ ಈ ನಟಿಯರೂ ರಾಜಕಾರಣಿಗಳ ಮದುವೆಯಾಗಿದ್ದಾರೆ

ಇನ್ನು ನೈಸ್‌ ರಸ್ತೆ ವಿಚಾರವಾಗಿ ಡಿಕೆ ಸುರೇಶ್‌ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವೆ ಮಾತಿನ ಕಾಳಗ ಜೋರಾಗಿದೆ. ಟಿವಿಯಲ್ಲಿ ಪ್ರಚಾರ ಸಿಗುತ್ತೆ ಅಂತಾ ಏನ್‌ ಬೇಕಾದ್ರೂ ಮಾತನಾಡ್ತಾರೆ ಅಂತಾ ಡಿಕೆ ಸುರೇಶ್‌, ಎಚ್‌ಡಿಕೆ ವಿರುದ್ಧ ಹರಿಹಾಯ್ದಿದ್ದಾರೆ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿದ ಹಾಗೆ ನನಗೆ ಹೆದರಿಸೋಕೆ ಬರಬೇಡಿ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

Related Video