Asianet Suvarna News Asianet Suvarna News

ಪಂಚಮಸಾಲಿ ಹೋರಾಟದಲ್ಲಿ ಜನಸಾಗರ, ಕೋವಿಡ್ ರೂಲ್ಸ್ ಬ್ರೇಕ್, ಬೇಕಿತ್ತಾ ಇವೆಲ್ಲಾ.?

 ಹಾನಗಲ್‌ನಲ್ಲಿ ಪಂಚಮಸಾಲಿ ರ್ಯಾಲಿಯಲ್ಲಿ ಜನಸಾಗರ, ಕೋವಿಡ್ ನಿಯಮಗಳಿಗೇ ಇಲ್ಲಿ ಕಿಮ್ಮತ್ತೇ ಇಲ್ಲ..! ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾನಗಲ್ ಕುಮಾರೇಶ್ವರ ಸಭಾಭವನದಲ್ಲಿ ಬೃಹತ್ ಸಮಾವೇಶ ನಡೆದಿದೆ. 

ಹಾವೇರಿ (ಸೆ. 04): ಹಾನಗಲ್‌ನಲ್ಲಿ ಪಂಚಮಸಾಲಿ ರ್ಯಾಲಿಯಲ್ಲಿ ಜನಸಾಗರ, ಕೋವಿಡ್ ನಿಯಮಗಳಿಗೇ ಇಲ್ಲಿ ಕಿಮ್ಮತ್ತೇ ಇಲ್ಲ..! ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಾನಗಲ್ ಕುಮಾರೇಶ್ವರ ಸಭಾಭವನದಲ್ಲಿ ಬೃಹತ್ ಸಮಾವೇಶ ನಡೆದಿದೆ. ನೂರಾರು ಜನರಿಂದ ಸಭಾಭವನ ತುಂಬಿ ಹೋಗಿತ್ತು. ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಇಲ್ಲದೇ ಸಮಾವೇಶ ನಡೆದಿದೆ. 

ಬೆಳಗಾವಿ: ಪೊಲೀಸರಿಂದ ಬಿಜೆಪಿ ಶಾಸಕರಿಗೆ ಹೂಮಳೆ..ಕೊರೋನಾ ರೂಲ್ಸ್ ಕೇಳೋರಿಲ್ಲ

3 ನೇ ಅಲೆ ವೇಗವಾಗಿ ಹರಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 3 ನೇ ಅಲೆ ತಡೆಗೆ ಸರ್ಕಾರ ಕೂಡಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಹೀಗಿರುವಾಗ ಈ ರೀತಿ ಸಮಾವೇಶ ನಡೆಸುವುದು ಎಷ್ಟು ಸರಿ ಎಂಬ ಸಾರ್ವಜನಿಕ ವಲಯದಲ್ಲಿ ಎದ್ದಿದೆ.