
ಸರ್ಕಾರ ಪತ್ರಿಕಾ ವಿತರಕರಿಗೂ ಸಹಾಯ ಮಾಡಬೇಕು: ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
- ಸರ್ಕಾರ ಪತ್ರಿಕಾ ವಿತರಕರಿಗೂ ಸಹಾಯ ಮಾಡಬೇಕು : ಸಿದ್ದರಾಮಯ್ಯ- ಎಲ್ಲಾ ಪತ್ರಿಕಾ ವಿತರಕರನ್ನೂ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಬೇಕು - ಸರ್ಕಾರ ಈ ವರ್ಗದವರ ಬಗ್ಗೆ ಗಮನ ಕೊಟ್ಟಿಲ್ಲ
ಬೆಂಗಳೂರು (ಮೇ. 25): ಸರ್ಕಾರ ಪತ್ರಿಕಾ ವಿತರಕರಿಗೂ ಸಹಾಯ ಮಾಡಬೇಕು. ಅವರೂ ಕೂಡಾ ಸಂಕಷ್ಟದಲ್ಲಿದ್ದಾರೆ. ಎಲ್ಲಾ ಪತ್ರಿಕಾ ವಿತರಕರನ್ನೂ ಭೇಟಿ ಮಾಡಿ ಅವರ ಸಮಸ್ಯೆ ಆಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ಧಾರೆ. 'ಬೇರೆ ಬೇರೆ ವಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಶ್ರಮಿಕ ವರ್ಗದವರಿಗೆ ಸಹಾಯ ಮಾಡಬೇಕೆಂದು ಒತ್ತಾಯ ಮಾಡಿದ್ದೆ. ಆದರೆ ಸರ್ಕಾರ ಈ ಬಗ್ಗೆ ಗಮನ ವಹಿಸಿಲ್ಲ' ಎಂದಿದ್ಧಾರೆ.
Add Asianetnews Kannada as a Preferred Source

ಇಂದು ಸಿಎಂ ಮಹತ್ವದ ಸಭೆ: 2 ನೇ ಹಂತದ ಪ್ಯಾಕೇಜ್ ಗುಡ್ನ್ಯೂಸ್ ಕೊಡ್ತಾರಾ.?