'ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಅಖಂಡಗೆ ಪ್ರಸನ್ನಕುಮಾರ್ ತಿರುಗೇಟು

ಗಲಭೆಯಲ್ಲಿ ಪ್ರಸನ್ನಕುಮಾರ್ ಪಾತ್ರವಿದೆ ಎಂದಿರುವ ಅಖಂಡ ಹೇಳಿಕೆ ಬಗ್ಗೆ ಪ್ರಸನ್ನ ಕುಮಾರ್, ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇವೆಲ್ಲಾ ನಾನ್‌ಸೆನ್ಸ್‌ ಹೇಳಿಕೆ. ನಾನು ಯಾವತ್ತೂ ಈ ರೀತಿ ಕೆಲಸಕ್ಕೆ ಕೈ ಹಾಕುವುದಿಲ್ಲ. ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಎಂದು ಸ್ಪಷ್ಟೀಕರಣ ನೀಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 20): ಗಲಭೆಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಪೊಲೀಸ್ ತನಿಖೆ ಕೆಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಗಲಭೆ ಹಿಂದೆ ಕಾಂಗ್ರೆಸ್ ನಾಯಕರ ಕೈ ಇದೆ ಎಂದಿದ್ದಾರೆ. ಗಲಭೆಗೆ 2 ತಿಂಗಳಿಂದ ಕಾಂಗ್ರೆಸ್ ನಾಯಕರೇ ಸಂಚು ಹೆಣೆದಿದ್ದಾರೆ. ಪುಲಕೇಶಿ ನಗರ ಜೆಡಿಎಸ್ ಹಾಗೂ ಎಸ್‌ಡಿಪಿಐ ನಾಯಕರ ಜೊತೆ ಸೇರಿ ಸಂಚು ರೂಪಿಸಿದ್ದಾರೆ. ಈ ಗಲಭೆಯಲ್ಲಿ ಮಾಜಿ ಶಾಸಕ ಬಿ ಪ್ರಸನ್ನ ಕುಮಾರ್ ಕೈವಾಡ ಇದೆ ಎಂದು ಹೇಳಿದ್ದಾರೆ. ಕಾರ್ಪೋರೇಟರ್ ಜಾಕಿರ್, ಎಸ್‌ಡಿಪಿಐ ನಾಯಕ ಮುಜಾಮಿಲ್ ಜೊತೆ ಸೇರಿ ಸಂಚು ರೂಪಿಸಿದ್ದಾರೆ ಎಂದಿದ್ದಾರೆ. 

ಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕ್ಕಿದೆ: ಅಖಂಡರಿಂದ 'ಬೆಂಕಿ' ಹೇಳಿಕೆ

ಈ ಬಗ್ಗೆ ಪ್ರಸನ್ನ ಕುಮಾರ್, ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಇವೆಲ್ಲಾ ನಾನ್‌ಸೆನ್ಸ್‌ ಹೇಳಿಕೆ. ನಾನು ಯಾವತ್ತೂ ಈ ರೀತಿ ಕೆಲಸಕ್ಕೆ ಕೈ ಹಾಕುವುದಿಲ್ಲ. ನನಗೆ ಯಾವುದೇ ರಾಜಕೀಯ ದ್ವೇಷ ಇಲ್ಲ' ಎಂದು ಸ್ಪಷ್ಟೀಕರಣ ನೀಡಿದ್ದಾರೆ. 

Related Video