Asianet Suvarna News Asianet Suvarna News

Cover Story: ಬಡವರ ರೇಷನ್ ಕಿಟ್‌ನಲ್ಲಿ ಹಣ ಮಾಡ್ತಾರೆ ಈ ಖದೀಮರು

 ಲಾಕ್‌ಡೌನ್‌ನಿಂದ ಸಾವಿರಾರು ಮಂದಿ ಕಷ್ಟದಲ್ಲಿ ಬದುಕುವಂತಾಗಿದೆ. ಇಂತವರಿಗಾಗಿ ರೇಷನ್ ಕಿಟ್ ನೀಡಿದರೆ, ಅದನ್ನೂ ಅಕ್ರಮವಾಗಿ ಸಂಗ್ರಹಿಸಿ ಹಣ ಮಾಡುವ ಖದೀಮರಿದ್ದಾರೆ. 

ಬೆಂಗಳೂರು (ಜು. 17): ಲಾಕ್‌ಡೌನ್‌ನಿಂದ ಸಾವಿರಾರು ಮಂದಿ ಕಷ್ಟದಲ್ಲಿ ಬದುಕುವಂತಾಗಿದೆ. ಇಂತವರಿಗೆ ಸಂಘ- ಸಂಸ್ಥೆಗಳು, ರಾಜಕೀಯ ನಾಯಕರು, ಆರ್ಥಿಕವಾಗಿ ಸದೃಢವಾಗಿರುವವರು ಹೀಗೆ ಎಲ್ಲಾ ವರ್ಗದ ಜನ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು.

ಬಾಗೇಪಲ್ಲಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ, ಪ್ರಶ್ನಿಸೋ ಹಾಗಿಲ್ವಂತೆ!

ಇಂತಹ ಸಂದರ್ಭವನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಕಿರಾತಕರಿದ್ದಾರೆ. ಬಡ ಬಗ್ಗರಿಗೆ ಹಂಚಬೇಕಾದ ರೇಷನ್ ಕಿಟ್‌ಗಳನ್ನು ಗುಂಪೊಂದು ಅದನ್ನು ಅಕ್ರಮವಾಗಿ ಗುಡ್ಡೆ ಹಾಕಿ ಮಾರಾಟ ಮಾಡುತ್ತಿತ್ತು ಎನ್ನುವ ಮಾಹಿತಿ ಕವರ್ ಸ್ಟೋರಿಗೆ ಬರುತ್ತದೆ. ಈ ಬಗ್ಗೆ ಆಳಕ್ಕಿಳಿದು ನೋಡಿದಾಗ ಬೆಚ್ಚಿ ಬೀಳುವ ಸತ್ಯ ಹೊರ ಬೀಳುತ್ತದೆ. 

 

Video Top Stories