
'ಯಾವಾಗಲೂ ಮಗಳೇ ಎಂದು ಕರೆಯುತ್ತಿದ್ದರು, ಅವರಿಲ್ಲ ಅನ್ನೋದನ್ನ ಅರಗಿಸಿಕೊಳ್ಳಲಾಗ್ತಾ ಇಲ್ಲ'
ಅಕ್ಷರ ಮಾಂತ್ರಿಕ, ಲೇಖಕ, ಬರಹಗಾರ, ರವಿ ಬೆಳಗೆರೆ ಬದುಕಿಗೆ ವಿದಾಯ ಹೇಳಿ, ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ ರಾತ್ರಿ ಪದ್ಮನಾಭನಗರ ಕಚೇರಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ.
ಬೆಂಗಳೂರು (ನ. 13): ಅಕ್ಷರ ಮಾಂತ್ರಿಕ, ಲೇಖಕ, ಬರಹಗಾರ, ರವಿ ಬೆಳಗೆರೆ ಬದುಕಿಗೆ ವಿದಾಯ ಹೇಳಿ, ಬಾರದ ಲೋಕಕ್ಕೆ ತೆರಳಿದ್ದಾರೆ. ನಿನ್ನೆ ರಾತ್ರಿ ಪದ್ಮನಾಭನಗರ ಕಚೇರಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ.
Add Asianetnews Kannada as a Preferred Source

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿ ಬೆಳಗೆರೆಯವರದ್ದು: ಟಿಎನ್ಎಸ್
ಇತ್ತೀಚಿಗೆ ರವಿ ಬೆಳಗೆರೆ ಬಿಗ್ಬಾಸ್ ಮನೆಯೊಳಗೆ ಹೋಗಿ ಬಂದಿದ್ದರು. ಅಲ್ಲಿ ಅವರು ಹೇಗಿರುತ್ತಿದ್ದರು ಎಂದು ಬಿಗ್ಬಾಸ್ ಸ್ಪರ್ಧಿ ಚಂದನಾ ಮಾತನಾಡಿದ್ದಾರೆ. 'ಬಿಗ್ಬಾಸ್ ಮನೆಯಲ್ಲಿ ಅವರ ಜೊತೆ ಹೆಚ್ಚಾಗಿರುತ್ತಿದ್ದೆ. ಯಾವಾಗಲೂ ಪುಟ್ಟಿ, ಪುಟ್ಟಿ ಎಂದು ಕರೆಯುತ್ತಿದ್ದರು. ಅವರಿಲ್ಲ ಅನ್ನೋದನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಚಂದನಾ ಹೇಳಿದ್ದಾರೆ.