ಗುರಿ ತಲುಪಿತು BIG 3 ಪಯಣ; ಮಕ್ಕಳ ಮೊಗದಲ್ಲಿ ಹರ್ಷದ ಕಿರಣ!
ನೆರೆ ಪೀಡಿತ ಪ್ರದೇಶಗಳ ಶಾಲಾ ಮಕ್ಕಳ ನೋವಿಗೆ BIG 3 ಸ್ಪಂದಿಸಿದೆ. BIG 3 ಶುರುಮಾಡಿದ ಅಭಿಯಾನಕ್ಕೆ ದಾನಿಗಳು ಪ್ರತಿಕ್ರಿಯಿಸಿರುವ ರೀತಿ ನಿಜಕ್ಕೂ ಅಭಿನಂದನೀಯ. ಸುವರ್ಣನ್ಯೂಸ್ ಕಚೇರಿಗೆ ಬಂದು ತಲುಪಿದ ಸ್ಕೂಲ್ ಕಿಟ್ಗಳನ್ನು BIG 3 ತಂಡ ಖುದ್ದು ಹೋಗಿ ತಲುಪಿಸಿದೆ.
ಅಥಣಿ, ಬೆಳಗಾವಿ (ಅ.19): ನೆರೆ ಪೀಡಿತ ಪ್ರದೇಶಗಳ ಶಾಲಾ ಮಕ್ಕಳ ನೋವಿಗೆ BIG 3 ಸ್ಪಂದಿಸಿದೆ.
BIG 3 ಶುರುಮಾಡಿದ ಅಭಿಯಾನಕ್ಕೆ ದಾನಿಗಳು ಪ್ರತಿಕ್ರಿಯಿಸಿರುವ ರೀತಿ ನಿಜಕ್ಕೂ ಅಭಿನಂದನೀಯ. ಸುವರ್ಣನ್ಯೂಸ್ ಕಚೇರಿಗೆ ಬಂದು ತಲುಪಿದ ಸ್ಕೂಲ್ ಕಿಟ್ಗಳನ್ನು BIG 3 ತಂಡ ಖುದ್ದು ಹೋಗಿ ತಲುಪಿಸಿದೆ.
ಕಳೆದ ತಿಂಗಳು ನೆರೆಯಿಂದ ತತ್ತರಿಸಿದ್ದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ, ಸಾವಿರಾರು ಮಂದಿ ಮನೆ-ಮಠ-ಬೆಳೆ ಕಳೆದುಕೊಂಡಿದ್ದರು. ಶಾಲಾ ಮಕ್ಕಳು ತಮ್ಮ ಬ್ಯಾಗ್, ಪುಸ್ತಕಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು.