
ನೆರೆ ಪೀಡಿತ ಮಕ್ಕಳ ಶಿಕ್ಷಣ; BIG 3 ಅಭಿಯಾನಕ್ಕೆ ಕನ್ನಡಿಗರ ಪಣ!
‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿಯೇ ಸುವರ್ಣನ್ಯೂಸ್ ಅಭಿಯಾನವೊಂದನ್ನು ಆರಂಭಿಸಿದೆ.
ಬೆಂಗಳೂರು (ಅ.17): ‘ಗಾಯದ ಮೇಲೆ ಬರೆ’ ಎಂಬಂತೆ ‘ಬರದ ಮೇಲೆ ನೆರೆ’ - ಇದು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಪರಿಸ್ಥಿತಿ. ಪ್ರತಿ ವರ್ಷ ಬೆಂಬಿಡದೆ ಕಾಡುವ ಬರದ ನಡುವೆ ಶಿಕ್ಷಣ ಪಡೆಯಲು ಹೋರಾಡುವ ಇಲ್ಲಿನ ಶಾಲಾ ಮಕ್ಕಳು, ಈ ಬಾರಿ ನೆರೆಯ ವಿರುದ್ಧ ಹೋರಾಡುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ತಮ್ಮ ಉಜ್ವಲ ಭವಿಷ್ಯದ ಕನಸು ಕಂಡಿದ್ದ ಮಕ್ಕಳ ಮುಂದೆ ಕತ್ತಲು ಆವರಿಸಿದೆ. ಅವರ ಪುಸ್ತಕಗಳು, ಬ್ಯಾಗ್ಗಳು, ಶೈಕ್ಷಣಿಕ ಪರಿಕರಗಳು... ಹೀಗೆ ಎಲ್ಲವೂ ನೆರೆ ಪಾಲಾಗಿದೆ. ಮೊದಲೇ, ಮನೆ-ಮಠ, ಗದ್ದೆ-ಬೆಳೆ ಕಳೆದುಕೊಂಡ ಪೋಷಕರಿಗೆ ಇದಕ್ಕೆ ಹಣ ಹೊಂದಿಸುವ ಚಿಂತೆ.
ಸುವರ್ಣನ್ಯೂಸ್ ಹೊಸ ಅಭಿಯಾನ ಆರಂಭಿಸಿದ ಬೆನ್ನಲ್ಲೇ, ಕನ್ನಡ ನಾಡಿನ ಸಹೃದಯರು ಮನವಿಗೆ ಸ್ಪಂದಿಸಲು ಶುರು ಮಾಡಿದ್ದಾರೆ.